Dec 12, 2025 Languages : ಕನ್ನಡ | English

ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ!! ಒಂದೇ ಕುಟುಂಬದ ಮೂವರು ಜೀವ ಕಳೆದುಕೊಂಡ ದುರಂತ ಕಥೆ

ಬೆಂಗಳೂರು ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಜನಮನವನ್ನು ಬೆಚ್ಚಿಬೀಳಿಸಿದೆ. ಕೋರಮಂಗಲ ಬಳಿಯ ತಾವರೇಕೆರೆ 2ನೇ ಕ್ರಾಸ್ನಲ್ಲಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಪ್ರಾಣಹಾನಿ ಮಾಡಿಕೊಂಡಿದ್ದಾರೆ. ಮೃತರು ಅಜ್ಜಿ ಮಾದಮ್ಮ (68), ಮಗಳು ಸುಧಾ (38) ಹಾಗೂ ಮೊಮ್ಮಗ ಮೋನಿಷ್ (14) ಎಂದು ಗುರುತಿಸಲಾಗಿದೆ. ಈ ಘಟನೆ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ನಡೆದಿದ್ದು, ಸ್ಥಳಕ್ಕೆ ಸುದ್ದುಗುಂಟೆಪಾಳ್ಯ ಪೊಲೀಸರು ಹಾಗೂ ಡಿಸಿಪಿ ಸಾರಾ ಫಾತೀಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬವು ಸಾಲದ ಸುಳಿಗೆ ಸಿಲುಕಿಕೊಂಡು ಮನನೊಂದು ಜೀವ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ.

ತಾಯಿ ಮಗಳು ಮೊಮ್ಮಗ ವಿಷ ಸೇವಿಸಿ ಜೀವ ಬಲಿ
ತಾಯಿ ಮಗಳು ಮೊಮ್ಮಗ ವಿಷ ಸೇವಿಸಿ ಜೀವ ಬಲಿ

ಕುಟುಂಬವು ಮೊದಲು ಬಿರಿಯಾನಿ ವ್ಯಾಪಾರ ನಡೆಸುತ್ತಿತ್ತು. ಬಳಿಕ ಚಿಪ್ಸ್ ವ್ಯಾಪಾರ ಆರಂಭಿಸಿದರೂ, ಎರಡರಲ್ಲೂ ನಷ್ಟ ಉಂಟಾಗಿ ಸಾಲದ ಹೊರೆ ಹೆಚ್ಚಾಗಿತ್ತು. ನಂತರ ಅಜ್ಜಿ ಮಾದಮ್ಮ ಹಾಗೂ ಮಗಳು ಸುಧಾ ಹಾಲು ವ್ಯಾಪಾರ ಮಾಡುತ್ತಿದ್ದರು. ಆದರೆ ವ್ಯಾಪಾರದಲ್ಲಿ ನಿರಂತರ ನಷ್ಟ ಹಾಗೂ ಸಾಲದ ಒತ್ತಡದಿಂದಾಗಿ ಕುಟುಂಬವು  ಕಳೆದುಕೊಳ್ಳುವ ಕೆಲಸಕ್ಕೆ ಮುಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ವಿಷ ಸೇವಿಸಿದ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಆರ್ಥಿಕ ಸಂಕಷ್ಟದ ಪರಿಣಾಮವಾಗಿ ಮೂವರು ಜೀವ ಕಳೆದುಕೊಂಡಿರುವುದು ಸಮಾಜದಲ್ಲಿ ಸಾಲದ ಒತ್ತಡದ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿ, ಸಾಲದ ಮೂಲ ಹಾಗೂ ಇತರ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ. ಈ ಘಟನೆ ನಗರದಲ್ಲಿ ಸಾಲದ ಒತ್ತಡದಿಂದಾಗಿ ನಡೆಯುತ್ತಿರುವ ಜೀವ ಕಳೆದುಕೊಳ್ಳುತ್ತಿರುವ ಸರಣಿಗೆ ಮತ್ತೊಂದು ಉದಾಹರಣೆಯಾಗಿದೆ. 

Latest News