Jan 25, 2026 Languages : ಕನ್ನಡ | English

ದುನಿಯಾ ವಿಜಯ್ ವೃತ್ತಿಜೀವನದ ವಿಭಿನ್ನ ಪ್ರಯತ್ನ - ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಫಿದಾ ಆದ ಕನ್ನಡಿಗರು!!

ದುನಿಯಾ ವಿಜಯ್ ಅವರ ಅಭಿನಯದ 'ಲ್ಯಾಂಡ್‌ಲಾರ್ಡ್' ಚಿತ್ರ ಇಂದು ಭರ್ಜರಿಯಾಗಿ ಬಿಡುಗಡೆ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹೌದು ಗ್ರಾಮೀಣ ಹಿನ್ನೆಲೆಯ ಕಥೆಯನ್ನು ಆಧರಿಸಿಕೊಂಡಿರುವ ಈ ಚಿತ್ರದಲ್ಲಿ ಸಮಾಜದ ಅನ್ಯಾಯ, ಜಮೀನುದಾರರ ದೌರ್ಜನ್ಯ ಹಾಗೂ ಸಾಮಾನ್ಯ ಜನರ ಹೋರಾಟವನ್ನು ತೀವ್ರವಾಗಿ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ವಿಜಯ್ ಅವರು 'ರಾಚಯ್ಯ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರ ಪರವಾಗಿ ನಿಂತು ಅನ್ಯಾಯದ ವಿರುದ್ಧ ಹೋರಾಡುವ ನಾಯಕನಾಗಿ ಮೆರೆದಿದ್ದಾರೆ. ಅವರ ಅಭಿನಯದಲ್ಲಿ ಕಂಡುಬರುವ ತೀವ್ರತೆ, ಸಂವೇದನೆ ಹಾಗೂ ಶಕ್ತಿಯುತ ಸಂಭಾಷಣೆಗಳು ಅಭಿಮಾನಿಗಳನ್ನು ಆಕರ್ಷಿಸುತ್ತಿವೆ ಎನ್ನಬಹುದು.

ದುನಿಯಾ ವಿಜಯ್ ‘ಲ್ಯಾಂಡ್‌ಲಾರ್ಡ್’ ಸಿನಿಮಾ ಹೀಗಿದೆ!!
ದುನಿಯಾ ವಿಜಯ್ ‘ಲ್ಯಾಂಡ್‌ಲಾರ್ಡ್’ ಸಿನಿಮಾ ಹೀಗಿದೆ!!

ಜೊತೆಗೆ ನಟಿ ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ಅಚ್ಯುತ ಕುಮಾರ್, ಉಮಾಶ್ರೀ ಸೇರಿದಂತೆ ಅನೇಕ ಕಲಾವಿದರು ತಮ್ಮ ಪಾತ್ರಗಳಲ್ಲಿ ಜೀವ ತುಂಬಿದ್ದಾರೆ. ಚಿತ್ರದ ಕಥೆ ಸಾಮಾನ್ಯ “ಮಾಸ್” ಹೋರಾಟದಂತೆ ಅಂತ್ಯಗೊಳ್ಳುವುದಿಲ್ಲ. ಬದಲಿಗೆ, ಕಾನೂನು ಮತ್ತು ಸಾಕ್ಷಿಗಳ ಮೂಲಕ ಜಮೀನುದಾರನ ವಿರುದ್ಧ ಹೋರಾಟ ನಡೆಸುವ ವಿಭಿನ್ನ ರೀತಿಯ ಕ್ಲೈಮ್ಯಾಕ್ಸ್ ಪ್ರೇಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ. ಇದು ನಿರ್ದೇಶಕ ಜದೇಶ್ ಕುಮಾರ್ ಹಂಪಿ ಅವರ ಧೈರ್ಯಶಾಲಿ ಪ್ರಯತ್ನವೆಂದು ವಿಮರ್ಶಕರು ಮೆಚ್ಚಿದ್ದಾರೆ.  

ಅಭಿಮಾನಿಗಳ ಪ್ರತಿಕ್ರಿಯೆ ಮಿಶ್ರವಾಗಿದೆ. ಕೆಲವರು ಚಿತ್ರದಲ್ಲಿನ ಭಾವನಾತ್ಮಕ ತೀವ್ರತೆ, ಸಾಮಾಜಿಕ ಸಂದೇಶ ಹಾಗೂ ವಿಜಯ್ ಅವರ ಶಕ್ತಿಯುತ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಗ್ರಾಮೀಣ ಹಿನ್ನೆಲೆಯ ಗಂಭೀರ ಕಥೆ “ಮಾಸ್” ಪ್ರೇಕ್ಷಕರಿಗೆ ಸ್ವಲ್ಪ ನಿಧಾನವಾಗಿ ತೋರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #Landlord ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. “ವಿಜಯ್ ಅವರ ಅಭಿನಯ ಅದ್ಭುತ”, “ಗ್ರಾಮೀಣ ಕಥೆಗೆ ಹೊಸ ಅರ್ಥ ನೀಡಿದ ಸಿನಿಮಾ” ಎಂಬ ಪ್ರತಿಕ್ರಿಯೆಗಳು ಹರಿದಾಡುತ್ತಿವೆ.  

ಒಟ್ಟಿನಲ್ಲಿ ಹೇಳಬೇಕು ಅಂದರೆ ಲ್ಯಾಂಡ್‌ಲಾರ್ಡ್ ಸಿನಿಮಾ ದುನಿಯಾ ವಿಜಯ್ ಅವರ ವೃತ್ತಿಜೀವನದಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನವಾಗಿ ಹೊರಹೊಮ್ಮಿದೆ. ಇದು ಕೇವಲ ಮನರಂಜನೆ ನೀಡುವುದಲ್ಲ, ಸಮಾಜದ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಚಿತ್ರವಾಗಿ ನೆನಪಿನಲ್ಲೇ ಉಳಿಯುವ ಸಾಧ್ಯತೆ ಇದೆ. ನೀವೂ ಸಹ ಈಗಾಗಲೇ ದುನಿಯಾ ವಿಜಯ್ ಅವರ ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಣೆ ಮಾಡಿದ್ದರೆ, ಸಿನಿಮಾ ಕಥೆ ಇಷ್ಟ ಆಗಿದ್ದರೆ, ಸಿನಿಮಾ ಹೇಗೆ ಮೂಡಿಬಂದಿದೆ ಎಂದು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು. 

Latest News