Apr 27, 2026 Languages : ಕನ್ನಡ | English

ಚೇತನ್ ಅಹಿಂಸಾ ಮೇಲೆ ದಾಖಲಾಯ್ತು ದೇಶದ್ರೋಹದ ಕೇಸ್? ರಾಜ್‌ಕುಮಾರ್ ಫ್ಯಾನ್ಸ್ ಸವಾಲಿಗೆ ನಟ ಏನಂದ್ರು ನೋಡಿ!!

'ಅಣ್ಣಾವ್ರು' ಡಾ. ರಾಜ್‌ಕುಮಾರ್ ಅವರ ನೆನಪಿಗಾಗಿ ಸ್ಮಾರಕ ಕಟ್ಟಲು ಕರ್ನಾಟಕ ಸರ್ಕಾರ 2.5 ಎಕರೆ ಜಾಗ ಕೊಟ್ಟಿದೆ. ಇದನ್ನು ಕೇಳಿ ಅಭಿಮಾನಿಗಳೆಲ್ಲಾ ಖುಷಿಯಾಗಿದ್ದಾರೆ. ಆದ್ರೆ, ನಟ ಚೇತನ್ ಅಹಿಂಸಾ ಅವರು ಈ ಬಗ್ಗೆ ಆಡಿದ ಮಾತುಗಳು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಅಣ್ಣಾವ್ರ ಸ್ಮಾರಕದ ಬಗ್ಗೆ ಚೇತನ್ ಅಹಿಂಸಾ ವಿವಾದಾತ್ಮಕ ಮಾತು
ಅಣ್ಣಾವ್ರ ಸ್ಮಾರಕದ ಬಗ್ಗೆ ಚೇತನ್ ಅಹಿಂಸಾ ವಿವಾದಾತ್ಮಕ ಮಾತು

ಚೇತನ್ ಅಸಲಿಗೆ ಹೇಳಿದ್ದೇನು?

ಬೆಂಗಳೂರಿನಲ್ಲಿ ಮಾತನಾಡಿದ ಚೇತನ್, "ರಾಜ್‌ಕುಮಾರ್ ಅವರು ಎಷ್ಟು ಸರಳ ಮನುಷ್ಯ ಅನ್ನೋದು ನಮಗೆಲ್ಲಾ ಗೊತ್ತಿದೆ, ಹಾಗಿದ್ದಮೇಲೆ ಇಷ್ಟೊಂದು ದೊಡ್ಡ ಸ್ಮಾರಕ ಬೇಕಾ?" ಅಂತ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, "ನಾನು ಹೇಳಿದ ಮಾತಿನಲ್ಲಿ ಸತ್ಯವಿದೆ, ಅದಕ್ಕೆ ನಾನು ಇಂದಿಗೂ ಬದ್ಧ. ನನ್ನ ಮಾತಿನಿಂದ ಯಾರಿಗಾದ್ರೂ ನೋವಾಗಿದ್ರೆ ಬೇಸರವಿದೆ ಅಷ್ಟೇ, ಆದ್ರೆ ನಾನು ಕ್ಷಮೆ ಮಾತ್ರ ಕೇಳಲ್ಲ" ಎಂದು ನೇರವಾಗಿ ಹೇಳಿದ್ದಾರೆ. ಕ್ಷಮೆ ಕೇಳುವುದು ಎಂದರೆ ನಾನು ಹೇಳಿದ್ದನ್ನು ತಪ್ಪು ಎಂದು ಒಪ್ಪಿಕೊಂಡಂತೆ, ಆದರೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚೇತನ್ ಅವರ ಪ್ರಕಾರ, "ಒಂದು ವೇಳೆ ಡಾ. ರಾಜ್‌ಕುಮಾರ್ ಅವರು ಬದುಕಿದ್ದಾಗ ಯಾರಾದರೂ ಅವರಿಗೆ ಸ್ಮಾರಕಕ್ಕಾಗಿ 2.5 ಎಕರೆ ಭೂಮಿ ನೀಡಿದ್ದರೆ, ಅವರು ಖಂಡಿತವಾಗಿಯೂ ಅದನ್ನು ನಿರಾಕರಿಸುತ್ತಿದ್ದರು. ಅವರು ಬಹಳ ಸರಳ ವ್ಯಕ್ತಿಯಾಗಿದ್ದರು ಮತ್ತು ಇಂತಹ 'ಸ್ಟಾರ್ ಸಂಸ್ಕೃತಿ'ಯಲ್ಲಿ ಅವರಿಗೆ ನಂಬಿಕೆ ಇರಲಿಲ್ಲ."

'ಸ್ಟಾರ್ ಸಂಸ್ಕೃತಿ' ವಿರುದ್ಧ ಕಿಡಿ
ತಮ್ಮ ಟೀಕೆ ರಾಜ್‌ಕುಮಾರ್ ಕುಟುಂಬದ ವಿರುದ್ಧವಾಗಲಿ ಅಥವಾ ಅವರ ಅಭಿಮಾನಿಗಳ ವಿರುದ್ಧವಾಗಲಿ ಅಲ್ಲ ಎಂದು ಚೇತನ್ ಸ್ಪಷ್ಟಪಡಿಸಿದ್ದಾರೆ. "ನನ್ನ ವಿರೋಧ ಇರುವುದು ಅತಿರೇಕದ ಸ್ಟಾರ್ ಸಂಸ್ಕೃತಿಯ ವಿರುದ್ಧ. ಸರ್ಕಾರಗಳು ಕೇವಲ ದೊಡ್ಡ ಸ್ಟಾರ್‌ಗಳನ್ನು ಓಲೈಸುವ ನಿರ್ಧಾರಗಳನ್ನು ಕೈಗೊಂಡಾಗ, ಅದು ಚಿತ್ರರಂಗದಲ್ಲಿ ಅಸಮಾನತೆ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ನಿರ್ಧಾರಗಳು ಸಮಾಜದ ಇತರ ಪ್ರಮುಖ ಸಮಸ್ಯೆಗಳನ್ನು ಮರೆಮಾಚುತ್ತವೆ ಎಂಬುದು ಅವರ ವಾದ.

ಚೇತನ್ ಈ ರೀತಿ ಹೇಳಿಕೆ ಕೊಡ್ತಿದ್ದಂತೆ ಅಣ್ಣಾವ್ರ ಫ್ಯಾನ್ಸ್ ಮತ್ತು ಕನ್ನಡ ಸಂಘಟನೆಗಳು ಫುಲ್ ಗರಂ ಆಗಿವೆ. "ನಮ್ಮ ಕರ್ನಾಟಕದ ಹೆಮ್ಮೆ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಬಗ್ಗೆ ಈ ತರ ಮಾತಾಡೋದು ತಪ್ಪು" ಅಂತ ಹೇಳಿ ಎಲ್ಲರೂ ರೋಡಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. "ಚೇತನ್ ಮೊದಲು ಕ್ಷಮೆ ಕೇಳಲಿ" ಅನ್ನೋದು ಎಲ್ಲರ ಡಿಮ್ಯಾಂಡ್. ಆದ್ರೆ ಚೇತನ್ ಮಾತ್ರ ಯಾವುದಕ್ಕೂ ಕೇರ್ ಮಾಡ್ತಿಲ್ಲ. "ನಾನು ನನ್ನ ಮಾತಿಗೆ ಬದ್ಧ, ಧೈರ್ಯ ಇದ್ರೆ ನನ್ನ ಮೇಲೆ ಕೇಸ್ ಹಾಕಿ, ನಾನು ಕೋರ್ಟ್‌ನಲ್ಲೇ ನೋಡ್ಕೊಳ್ತೀನಿ" ಅಂತ ಸವಾಲು ಹಾಕಿದ್ದಾರೆ.

ಈ ಇಡೀ ಗಲಾಟೆ ಈಗ ಬರೀ ಸ್ಮಾರಕದ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೊಡ್ಡ ಸ್ಟಾರ್‌ಗಳನ್ನ ಈ ಮಟ್ಟಕ್ಕೆ ಆರಾಧಿಸೋದು ಸರಿನಾ? ಇಂತಹ ಕೆಲಸಗಳಿಗೆ ಸರ್ಕಾರದ ದುಡ್ಡು ಖರ್ಚು ಮಾಡಬೇಕಾ? ಅಷ್ಟೇ ಅಲ್ಲದೆ, ಪ್ರಭಾವ ಇರೋ ವ್ಯಕ್ತಿಗಳು ಸಮಾಜದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಾರೆ ಅನ್ನೋದರ ಬಗ್ಗೆ ದೊಡ್ಡ ಚರ್ಚೆಯೇ ಶುರುವಾಗಿದೆ.

ಕೆಲವರು "ಚೇತನ್ ಹೇಳ್ತಿರೋದ್ರಲ್ಲಿ ಪಾಯಿಂಟ್ ಇದೆ, ವ್ಯಕ್ತಿಗಿಂತ ಅವರು ಬಿಟ್ಟುಹೋದ ದಾರಿ ಮುಖ್ಯ ಅಲ್ವಾ?" ಅಂತ ಅಂದುಕೊಳ್ತಿದ್ದಾರೆ. ಆದ್ರೆ ಅಣ್ಣಾವ್ರ ಅಭಿಮಾನಿಗಳು ಮಾತ್ರ "ನಮ್ಮ ನಾಡಿನ ಐಕಾನ್ ಬಗ್ಗೆ ಈ ತರ ಟೀಕೆ ಮಾಡೋದು ಅಕ್ಷಮ್ಯ" ಅಂತ ರೊಚ್ಚಿಗೆದ್ದಿದ್ದಾರೆ. ಒಟ್ಟಿನಲ್ಲಿ ಈ 'ಸ್ಮಾರಕದ ಕಿರಿಕ್' ಎಲ್ಲಿಗೆ ಹೋಗಿ ನಿಲ್ಲುತ್ತೆ ಅಂತ ಕಾದು ನೋಡಬೇಕು.

Latest News