Feb 16, 2026 Languages : ಕನ್ನಡ | English

RCB ಅಭಿಮಾನಿಗಳ ನಿರೀಕ್ಷೆ – ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಾ??

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಆಟ ನಡೆಯುತ್ತದೆಯೆ ಎಂಬ ಪ್ರಶ್ನೆ ಈಗ ಕ್ರಿಕೆಟ್ ಅಭಿಮಾನಿಗಳಲ್ಲೆಲ್ಲರ ಮನಸ್ಸಿನಲ್ಲಿ ಇದೆ. ಈಗಾಗಲೇ ಕೆಲವು ದಿನಗಳಿಂದ ಈ ವಿಷಯದಲ್ಲಿ ನಿರ್ಧಾರಕ್ಕೆ ಬರಲು ವಿಳಂಬವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCF) ಅಧ್ಯಕ್ಷ ವೆಂಕಟೇಶ್ ಪ್ರಸಾದ್, ರಾಜೇಶ್ ಮೆನನ್ ನೇತೃತ್ವದ RCB ನಿಯೋಗದವರ ಜೊತೆ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಮನೆಯಲ್ಲಿ ಚರ್ಚೆ ನಡೆಸಿದ್ದಾರೆ.

ಫೆಬ್ರವರಿ 12 ಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ನಿರ್ಧಾರ
ಫೆಬ್ರವರಿ 12 ಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ನಿರ್ಧಾರ

ಆದರೆ, ಅಂತಿಮ ನಿರ್ಧಾರ ಇನ್ನೂ ಬಂದಿದೆ ಇಲ್ಲ. ಸರ್ಕಾರವು ಸ್ಥಳದ ಭದ್ರತೆ, ಭವಿಷ್ಯದಲ್ಲಿ ಯಾವುದೇ ದುರಂತಗಳು ಮರುಕಳಿಸಬಾರದು ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಿದೆ. ಕುನ್ಹಾ ವರದಿ ಶಿಫಾರಸು ಪಾಲಿಸುವುದೂ ಮುಖ್ಯವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಇದು RCB ಅಭಿಮಾನಿಗಳಿಗೆ ಸೂಕ್ತ ಮಾಹಿತಿ ನೀಡಲು ಸಹಾಯವಾಗಲಿದೆ.

KSCF ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು, “RCB ಪಂದ್ಯಗಳ ಬಗ್ಗೆ ತ್ವರಿತ ನಿರ್ಧಾರ ಬೇಕು. ಅಭಿಮಾನಿಗಳಿಗೆ ಖುಷಿಯ ಸುದ್ದಿ ಕೊಡುವಂತೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ. ಸರ್ಕಾರವು ಭದ್ರತೆಯನ್ನು ಪರಿಶೀಲಿಸಿ, ಎಲ್ಲಾ ಅಂಶಗಳನ್ನು ನೋಡಿದ ಮೇಲೆ ತೀರ್ಮಾನ ನೀಡಲಿದೆ.

ಮೂದಲಿನ ಘಟನೆಗಳು ಮರುಕಳಿಸಬಾರದು ಎಂಬ ಕಾರಣದಿಂದ, ಸರ್ಕಾರ ಸೂಕ್ತ ಕ್ರಮಗಳನ್ನೆಲ್ಲಾ ನೋಡಿದ ಮೇಲೆ, RCB ಪಂದ್ಯವನ್ನು ಬೆಂಗಳೂರಿನಲ್ಲಿ ಆಡಿಸುವುದೇ ಇಲ್ಲವೆಂದು ಅಂತಿಮ ನಿರ್ಧಾರ ನೀಡಲಿದೆ. ಅಭಿಮಾನಿಗಳು ಇನ್ನೂ ಫಿಕ್ಸ್ ಆಗಿರುವ ಸುದ್ದಿ ಕಾದು ನೋಡಬೇಕು. ಫೆಬ್ರವರಿ 12 ರಂದು ಮತ್ತೊಂದು ಸಭೆ ನಡೆಯಲಿದೆ.

Latest News