Apr 18, 2026 Languages : ಕನ್ನಡ | English

ವಿನಯ್ ಕುಲಕರ್ಣಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಆ ಒಂದು ರಹಸ್ಯ ಮನವಿ ಏನು - ಇಲ್ಲಿದೆ ಸಂಪೂರ್ಣ ಮಾಹಿತಿ!!

ಧಾರವಾಡದ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. 17 ಜನರನ್ನು ಕೋರ್ಟ್ ಅಪರಾಧಿಗಳು ಎಂದು ಘೋಷಿಸಿದ್ದು, ಇಡೀ ರಾಜ್ಯದ ಕಣ್ಣು ನಾಳೆಯ (ಏಪ್ರಿಲ್ 17) ತೀರ್ಪಿನ ಮೇಲೆ ನೆಟ್ಟಿದೆ.

ಕೋರ್ಟ್‌ನಲ್ಲಿ ಕಣ್ಣೀರಿಟ್ಟ ವಿನಯ್ ಕುಲಕರ್ಣಿ
ಕೋರ್ಟ್‌ನಲ್ಲಿ ಕಣ್ಣೀರಿಟ್ಟ ವಿನಯ್ ಕುಲಕರ್ಣಿ

ಇಂದು ಕೋರ್ಟ್‌ನಲ್ಲಿ ನಡೆದ ಹೈಡ್ರಾಮಾ ಮತ್ತು ಅಪರಾಧಿಗಳು ಶಿಕ್ಷೆ ಕಡಿಮೆ ಮಾಡಿಸಿಕೊಳ್ಳಲು ಹಾಕಿದ ಕಣ್ಣೀರಿನ ಕಥೆ ಇಲ್ಲಿದೆ ನೋಡಿ.

ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಮುನ್ನ ಅಪರಾಧಿಗಳಿಗೆ ತಮ್ಮ ಅಳಲು ತೋಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈ ವೇಳೆ ಶಾಸಕ ವಿನಯ್ ಕುಲಕರ್ಣಿ ಸೇರಿ ಎಲ್ಲರೂ ನ್ಯಾಯಾಧೀಶರ ಮುಂದೆ ಕೈಮುಗಿದು, ಕಣ್ಣೀರಿಟ್ಟು ಶಿಕ್ಷೆ ಕಡಿಮೆ ಮಾಡುವಂತೆ ಬೇಡಿಕೊಂಡಿದ್ದಾರೆ.

ವಿನಯ್ ಕುಲಕರ್ಣಿ ಹೇಳಿದ್ದೇನು?

"ಸರ್, ನಾನು 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಯಾರಿಗೂ ತೊಂದರೆ ಕೊಟ್ಟವನಲ್ಲ. ನನಗೆ ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೃಷಿಕನಾದ ನಾನು ಮೂರೂವರೆ ಸಾವಿರ ಹಸುಗಳನ್ನು ಸಾಕುತ್ತಿದ್ದೇನೆ. ರಾಜಕೀಯ ದ್ವೇಷಕ್ಕಾಗಿ ನನ್ನನ್ನು ಈ ಕೇಸ್‌ನಲ್ಲಿ ಸಿಲುಕಿಸಲಾಗಿದೆ" ಎಂದು ವಿನಯ್ ಕುಲಕರ್ಣಿ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಉಳಿದವರ ಗೋಳು ಕೇಳೋರೇ ಇಲ್ಲ...
ವಿನಯ್ ಕುಲಕರ್ಣಿ ಮಾತ್ರವಲ್ಲ, ಉಳಿದ 16 ಜನ ಅಪರಾಧಿಗಳು ಕೂಡ ಒಂದಲ್ಲ ಒಂದು ಕಾರಣ ಕೊಟ್ಟು ರಿಯಾಯಿತಿ ಕೇಳಿದ್ದಾರೆ:

ಆಟೋ ಚಾಲಕರು ಮತ್ತು ಟೈಲರ್‌ಗಳು: "ನಾವು ಬಡವರು, ನಂಬಿಕೊಂಡಿರೋ ತಂದೆ-ತಾಯಿ, ಪುಟ್ಟ ಮಕ್ಕಳಿದ್ದಾರೆ. ನಮ್ಮನ್ನು ಬಿಟ್ಟುಬಿಡಿ" ಎಂದು ಗೋಳಾಡಿದ್ದಾರೆ.

ಅನಾರೋಗ್ಯದ ಕಾರಣ: ಕೆಲವರು ತಮಗೆ ಹಾರ್ಟ್ ಆಪರೇಷನ್ ಆಗಿದೆ, ಸ್ಟಂಟ್ ಹಾಕಲಾಗಿದೆ ಎಂದು ಮೆಡಿಕಲ್ ರಿಪೋರ್ಟ್ ಮುಂದಿಟ್ಟರೆ, ಇನ್ನು ಕೆಲವರು ಕಣ್ಣಿನ ಸಮಸ್ಯೆ ಹಾಗೂ ವಯಸ್ಸಾದ ತಂದೆ-ತಾಯಿಯ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದಾರೆ.

ಅನಾಥರು: ಪೋಷಕರಿಲ್ಲದ ಅನಾಥರು ಕೂಡ ತಮಗೆ ಶಿಕ್ಷೆ ಕಡಿಮೆ ಮಾಡಿ ಎಂದು ನ್ಯಾಯಾಧೀಶರಲ್ಲಿ ವಿನಂತಿಸಿದ್ದಾರೆ.

ನಾಳೆ ಏನಾಗುತ್ತೆ? ಶಾಸಕ ಸ್ಥಾನಕ್ಕೆ ಕುತ್ತು ಬರುತ್ತಾ?

ಈಗಾಗಲೇ ಅಪರಾಧಿಗಳು ಅಂತ ಸಾಬೀತಾಗಿರೋದ್ರಿಂದ ಶಿಕ್ಷೆ ಖಂಡಿತ. ಆದರೆ ಅದು ಜೀವಾವಧಿ ಶಿಕ್ಷೆಯೋ ಅಥವಾ ಸ್ವಲ್ಪ ಕಡಿಮೆ ಅವಧಿಯ ಜೈಲು ವಾಸವೋ ಅನ್ನೋದು ನಾಳೆ ಮಧ್ಯಾಹ್ನ ಗೊತ್ತಾಗಲಿದೆ.

ಒಂದು ವೇಳೆ ವಿನಯ್ ಕುಲಕರ್ಣಿ ಅವರಿಗೆ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ, ಅವರ ಶಾಸಕ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ. ಇದು ಕಾಂಗ್ರೆಸ್ ಸರ್ಕಾರಕ್ಕೂ ಒಂದು ಮಟ್ಟದ ತಲೆನೋವಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ, ದಶಕದ ಹಿಂದಿನ ಈ ಕೊಲೆ ಕೇಸ್‌ಗೆ ನಾಳೆ ತಾರ್ಕಿಕ ಅಂತ್ಯ ಸಿಗಲಿದೆ. ಕೋರ್ಟ್ ಯಾರಿಗೆ ರಿಯಾಯಿತಿ ನೀಡುತ್ತೆ? ಯಾರಿಗೆ ಕಠಿಣ ಶಿಕ್ಷೆ ವಿಧಿಸುತ್ತೆ? ಕಾದು ನೋಡೋಣ.

Latest News