Apr 21, 2026 Languages : ಕನ್ನಡ | English

ವಿಡಿಯೋ ಮಾಡೋದು ಬಿಟ್ಟು, ಸ್ವಲ್ಪ ಮನುಷ್ಯತ್ವ ತೋರಿಸಿ - ವೈರಲ್ ವಿಡಿಯೋ ಹಿಂದಿರೋ ಕಣ್ಣೀರಿನ ಕಥೆ!!

ಇವತ್ತು ನಾವು ಎಂತಹ ಕಾಲಕ್ಕೆ ಬಂದು ನಿಂತಿದ್ದೀವಿ ಅಂದ್ರೆ, ರಸ್ತೆ ಮಧ್ಯೆ ಒಬ್ಬರು ಪ್ರಾಣ ಬಿಡ್ತಿದ್ರೂ ಅವರನ್ನ ಕಾಪಾಡೋ ಬದಲು ಮೊಬೈಲ್ ತೆಗೆದು ವಿಡಿಯೋ ಮಾಡೋರೇ ಹೆಚ್ಚಾಗಿದ್ದಾರೆ. ಮಾನವೀಯತೆ ಅನ್ನೋದು ಬರೀ ಪುಸ್ತಕದ ಮಾತಾಗಿ ಉಳಿದುಬಿಟ್ಟಿದ್ಯಾ ಅನ್ನೋ ಅನುಮಾನ ಕಾಡ್ತಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಒಂದು ಹೃದಯವಿದ್ರಾವಕ ವಿಡಿಯೋ ನೋಡಿದ್ರೆ ನೀವು ಕೂಡ ಇದನ್ನೇ ಹೇಳ್ತೀರಾ.

ಮಾನವೀಯತೆ ಎಲ್ಲಿ ಹೋಗಿದೆ? ವೈರಲ್ ವಿಡಿಯೋ ಎಚ್ಚರಿಕೆ!! | Photo Credit: https://x.com/rameshofficial0
ಮಾನವೀಯತೆ ಎಲ್ಲಿ ಹೋಗಿದೆ? ವೈರಲ್ ವಿಡಿಯೋ ಎಚ್ಚರಿಕೆ!! | Photo Credit: https://x.com/rameshofficial0

ವಿಡಿಯೋದಲ್ಲಿ ಒಂದು ದೃಶ್ಯ ಇದೆ - ರಸ್ತೆ ಬದಿಯಲ್ಲಿ ಒಬ್ಬ ಶಕ್ತಿಯಿಲ್ಲದ, ಬಡ ವೃದ್ಧ ಮಹಿಳೆಯನ್ನ ಇನ್ನೊಬ್ಬ ಮಹಿಳೆ ಅತ್ಯಂತ ಕ್ರೂರವಾಗಿ ಹೊಡೆಯುತ್ತಿದ್ದಾಳೆ. ಆ ವೃದ್ಧೆಯ ಕೂದಲು ಹಿಡಿದು ಎಳೆದಾಡಿ, ನೆಲಕ್ಕೆ ಬೀಳಿಸಿ ದೌರ್ಜನ್ಯ ಎಸಗುತ್ತಿರುವುದನ್ನ ನೋಡಿದ್ರೆ ಮೈ ಜುಂ ಎನ್ನುತ್ತೆ. ಆ ಬಡ ಜೀವ ಅಸಹಾಯಕಳಾಗಿ ನೆಲದ ಮೇಲೆ ಬಿದ್ದಿದ್ದರೂ, ಹೊಡೆಯುತ್ತಿರುವ ಆ ಮಹಿಳೆಗೆ ಮಾತ್ರ ಕರುಣೆ ಅನ್ನೋದೇ ಇಲ್ಲ.

ಆದರೆ ಇಲ್ಲಿ ಬೇಸರದ ಸಂಗತಿ ಅಂದ್ರೆ ವಿಡಿಯೋ ಮಾಡ್ತಿರೋ ವ್ಯಕ್ತಿಯ ನಡವಳಿಕೆ. ಬಾಬು ಮೊಶಾಯ್ (Babu Moshay) ಅನ್ನೋ ವ್ಯಕ್ತಿ ಈ ಪೂರ್ತಿ ಘಟನೆಯನ್ನ ವಿಡಿಯೋ ಮಾಡ್ತಾ ಬಂಗಾಳಿ ಭಾಷೆಯಲ್ಲಿ ಮಾತಾಡ್ತಿದ್ದಾನೆ. ಆದರೆ ಒಂದು ಕ್ಷಣವೂ ಆತ ವಿಡಿಯೋ ಮಾಡೋದನ್ನ ನಿಲ್ಲಿಸಿ, ಹೊಡೆಯುತ್ತಿರುವ ಮಹಿಳೆಯನ್ನ ತಡೆಯೋ ಪ್ರಯತ್ನ ಮಾಡಿಲ್ಲ. 

ಇವತ್ತಿನ ದಿನಗಳಲ್ಲಿ ಜನರಿಗೆ ಸೋಶಿಯಲ್ ಮೀಡಿಯಾ ಪೇಜ್‌ಗಳಿಗೆ 'ಕಂಟೆಂಟ್' ಸಿಕ್ಕರೆ ಸಾಕು ಅಂತಾಗಿದೆ. ರಸ್ತೆಯಲ್ಲಿ ಗಲಾಟೆ ಆದ್ರೆ, ಅಪಘಾತ ಆದ್ರೆ ಅಥವಾ ಯಾರಿಗಾದರೂ ಅನ್ಯಾಯ ಆಗ್ತಿದ್ರೆ ಮೊದಲು ಕೈ ಹೋಗೋದು ಮೊಬೈಲ್ ಕಡೆಗೆ. "ಯಾರಾದರೂ ಕಾಪಾಡಿ" ಅಂತ ಕಿರುಚಾಡುತ್ತಿದ್ದರೂ, ಜನ ಮಾತ್ರ ಕ್ಯಾಮೆರಾ ಆಂಗಲ್ ಸರಿ ಮಾಡಿಕೊಳ್ಳೋದ್ರಲ್ಲಿ ಬ್ಯುಸಿ ಇರ್ತಾರೆ.

ಬಾಬು ಮೊಶಾಯ್ ಮಾಡಿದ್ದು ಕೂಡ ಅದನ್ನೇ. ಆತ ಒಂದು ನಿಮಿಷ ಮನಸ್ಸು ಮಾಡಿದ್ದಿದ್ರೆ ಆ ಅಜ್ಜಿಯನ್ನ ಕಾಪಾಡಬಹುದಿತ್ತು. ಆದರೆ ಆತ ಆ ಅಜ್ಜಿಯ ನೋವನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಲೈಕ್ಸ್ ಮತ್ತು ವ್ಯೂಸ್ ಪಡೆಯೋಕೆ ಪ್ಲಾನ್ ಮಾಡಿದ್ದಾನೆಯೇ ಹೊರತು, ಮನುಷ್ಯನ ಪ್ರಾಣ ಉಳಿಸೋಕೆ ಅಲ್ಲ. ಇದನ್ನ ನೋಡ್ತಿದ್ರೆ ನಮ್ಮ ಸಮಾಜ ಎಷ್ಟು ಕೆಟ್ಟ ದಾರಿಯಲ್ಲಿ ಹೋಗ್ತಿದೆ ಅಂತ ಅನ್ಸುತ್ತೆ.

ಯಾರೋ ಅನ್ಯಾಯಕ್ಕೊಳಗಾಗುವಾಗ ಅದನ್ನ ವಿಡಿಯೋ ಮಾಡಿ ಜಗತ್ತಿಗೆ ತೋರಿಸೋದು ದೊಡ್ಡ ವಿಷಯವಲ್ಲ. ಆದರೆ ಆ ಕ್ಷಣದಲ್ಲಿ ಅಲ್ಲಿಗೆ ಹೋಗಿ ಆ ಅನ್ಯಾಯವನ್ನ ತಡೆಯೋದು ಅಸಲಿ ಮನುಷ್ಯತ್ವ. ನಾವು ಮನುಷ್ಯರಾಗಿ ಹುಟ್ಟಿದ್ದಕ್ಕೆ ಒಂದು ಸಾರ್ಥಕತೆ ಇರಬೇಕು ಅಂದ್ರೆ ಸಂಕಷ್ಟದಲ್ಲಿರೋರಿಗೆ ಕೈ ಚಾಚಬೇಕು. ಬರೀ ವಿಡಿಯೋ ನೋಡಿ ಫೇಸ್‌ಬುಕ್‌ನಲ್ಲಿ "ಅಯ್ಯೋ ಪಾಪ" ಅಂತ ಕಮೆಂಟ್ ಮಾಡೋದ್ರಲ್ಲಿ ಯಾವುದೇ ಅರ್ಥವಿಲ್ಲ.

ನಿಮ್ಮ ಕಣ್ಣೆದುರು ಯಾರಿಗಾದರೂ ಅನ್ಯಾಯ ಆಗ್ತಿದ್ರೆ ಮೊದಲು ಅವರನ್ನ ಕಾಪಾಡೋಕೆ ಹೋಗಿ. ವಿಡಿಯೋ ಆಮೇಲೆಯೂ ಮಾಡಬಹುದು ಅಥವಾ ಅಲ್ಲಿರೋ ಸಿಸಿಟಿವಿ ಕ್ಯಾಮೆರಾದಲ್ಲೂ ಸಿಗಬಹುದು. ಆದರೆ ಹೋದ ಜೀವ ಅಥವಾ ಒಬ್ಬರ ಮಾನ ಮರಳಿ ತರೋಕೆ ಸಾಧ್ಯವಿಲ್ಲ. ಮೊಬೈಲ್ ಯುಗದಲ್ಲಿ ಮನುಷ್ಯತ್ವವನ್ನ ಮಣ್ಣು ಮಾಡಬೇಡಿ. ಬಾಬು ಮೊಶಾಯ್‌ನಂತಹ ವ್ಯಕ್ತಿಗಳ ನಡವಳಿಕೆ ನಮಗೆಲ್ಲರಿಗೂ ಒಂದು ಪಾಠವಾಗಲಿ. ನೆಕ್ಸ್ಟ್ ಟೈಮ್ ಇಂತಹ ಪರಿಸ್ಥಿತಿ ನಿಮ್ಮ ಎದುರು ಬಂದರೆ ಮೊಬೈಲ್ ಪಕ್ಕಕ್ಕಿಟ್ಟು ಮನುಷ್ಯತ್ವ ತೋರಿಸಿ.

ಈ ತರಹ ವಿಡಿಯೋ ಮಾಡೋರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ. ಲೇಖನ ಇಷ್ಟವಾದರೆ ಎಲ್ಲರಿಗೂ ಶೇರ್ ಮಾಡಿ ಜಾಗೃತಿ ಮೂಡಿಸಿ. 

Latest News