ಬೈಕ್ನಲ್ಲಿ ಹೋಗ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನ ಜೋರಾಗಿ ಕಿತ್ತುಕೊಂಡು ಎಸ್ಕೇಪ್ ಆಗೋಕೆ ಪ್ಲಾನ್ ಮಾಡಿದ್ದ ಖದೀಮನನ್ನ ಸಾರ್ವಜನಿಕರು ಚೇಸ್ ಮಾಡಿ, ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ರೋಮಾಂಚನಕಾರಿ ಘಟನೆ ನಡೆದಿರೋದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚನ್ನಳ್ಳಿ ಮತ್ತು ವರಹ ಗ್ರಾಮದ ಮಧ್ಯೆ ಇರೋ ಕಚ್ಚಾ ರಸ್ತೆಯಲ್ಲಿ. ಕಳ್ಳ ಎಷ್ಟೇ ಕಿಲಾಡಿಯಾಗಿದ್ರೂ ನಮ್ಮ ಹಳ್ಳಿ ಜನ ತೋರಿಸಿದ ಟೀಮ್ ವರ್ಕ್ ಮತ್ತು ಸಮಯಪ್ರಜ್ಞೆ ಮುಂದೆ ಆತನ ಬೇಳೆ ಬೇಯಲಿಲ್ಲ!
ರಾಧಾ ಅನ್ನೋ ಮಹಿಳೆ ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ಚನ್ನಳ್ಳಿ ಮತ್ತು ವರಹ ಗ್ರಾಮದ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದರು. ಆ ರಸ್ತೆ ಸ್ವಲ್ಪ ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಸುತ್ತಮುತ್ತ ಜನಸಂಚಾರ ಕಮ್ಮಿ ಇರೋ ನಿರ್ಜನ ರಸ್ತೆಯಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳ, ರಾಧಾ ಅವರ ಬೈಕನ್ನು ಫಾಲೋ ಮಾಡಿಕೊಂಡು ಬಂದಿದ್ದಾನೆ. ಯಾರೂ ಇಲ್ಲದ ಜಾಗ ನೋಡಿ ಸಡನ್ನಾಗಿ ಅಟ್ಯಾಕ್ ಮಾಡಿದ ಆ ಕಿಲಾಡಿ, ರಾಧಾ ಅವರ ಕುತ್ತಿಗೆಯಲ್ಲಿದ್ದ ಭರ್ಜರಿ 40 ಗ್ರಾಂ ತೂಕದ ಚಿನ್ನದ ಸರವನ್ನ ಜೋರಾಗಿ ಕಿತ್ತುಕೊಂಡಿದ್ದಾನೆ. ಒಮ್ಮೆಗೆ ಗಾಬರಿಯಾದ ರಾಧಾ ಅವರು ಬೈಕ್ನಿಂದ ಬೀಳುವಂತಾಗಿದ್ದರೂ, ಧೈರ್ಯಗೆಡದೆ ಜೋರಾಗಿ "ಕಳ್ಳ... ಕಳ್ಳ..." ಅಂತ ಕಿರುಚಾಡಿದ್ದಾರೆ.
ಹೀರೋಗಳಂತೆ ಎಂಟ್ರಿ ಕೊಟ್ಟ ಗ್ರಾಮಸ್ಥರು: ಸಿನಿಮಾ ಸ್ಟೈಲ್ ಚೇಸಿಂಗ್
ಮಹಿಳೆಯ ಕಿರುಚಾಟ ಕೇಳುತ್ತಿದ್ದಂತೆಯೇ ಸುತ್ತಮುತ್ತಲಿನ ಜಮೀನಿನಲ್ಲಿದ್ದ ಗ್ರಾಮಸ್ಥರು ಅಲರ್ಟ್ ಆಗಿದ್ದಾರೆ. ಕಳ್ಳ ಚಿನ್ನದ ಸರದೊಂದಿಗೆ ತನ್ನ ಬೈಕ್ ಹತ್ತಿ ಫುಲ್ ಸ್ಪೀಡಲ್ಲಿ ಎಸ್ಕೇಪ್ ಆಗಲು ಟ್ರೈ ಮಾಡಿದ್ದಾನೆ. ಆದರೆ ನಮ್ಮ ಚನ್ನಳ್ಳಿ ಮತ್ತು ವರಹ ಗ್ರಾಮದ ಯುವಕರು ಮತ್ತು ಸಾರ್ವಜನಿಕರು ಸುಮ್ಮನೆ ಬಿಡ್ತಾರಾ? ತಕ್ಷಣವೇ ತಮ್ಮ ಬೈಕ್ಗಳನ್ನು ಸ್ಟಾರ್ಟ್ ಮಾಡಿ ಕಳ್ಳನ ಹಿಂದೆ ಬಿದ್ದಿದ್ದಾರೆ.
ಗುಡ್ಡದ ಕಚ್ಚಾ ರಸ್ತೆಯಲ್ಲೇ ರೋಚಕವಾಗಿ ಕಳ್ಳನನ್ನು ಬೆನ್ನಟ್ಟಿದ ಸಾರ್ವಜನಿಕರು, ಕೊನೆಗೂ ಆತನಿಗೆ ಮುಂದೆ ಹೋಗದಂತೆ ದಾರಿ ಅಡ್ಡಗಟ್ಟಿ ಸುತ್ತುವರಿದು ಹಿಡಿದೇ ಬಿಟ್ಟಿದ್ದಾರೆ. ಕಳ್ಳ ತಪ್ಪಿಸಿಕೊಳ್ಳಲು ಎಷ್ಟೇ ಸರ್ಕಸ್ ಮಾಡಿದ್ರೂ, ಜನ ಆತನಿಗೆ ಸರಿಯಾಗಿಯೇ ಧರ್ಮದೇಟು ನೀಡಿ ಜಾಗ ಖಾಲಿ ಮಾಡದ ಹಾಗೆ ಲಾಕ್ ಮಾಡಿದ್ದಾರೆ.
ಬ್ಯಾಡಗಿಯ ಸಂತೋಷ್ ಈಗ ಹಿರೇಕೆರೂರು ಪೊಲೀಸರ ವಶ
ಹೀಗೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಸರಿಯಾಗಿ ಪೂಜೆ ಪೂಜೆ ಮಾಡಿಸಿಕೊಂಡ ಆ ಅಸಾಮಿ ಯಾರು ಅಂತ ವಿಚಾರಿಸಿದಾಗ ಆತನ ಅಸಲಿ ಜಾತಕ ಹೊರಬಿದ್ದಿದೆ. ಆ ಕಳ್ಳನ ಹೆಸರು ಸಂತೋಷ್ ಗುಡ್ಡಪ್ಪ ಹಳೇಮನಿ ಅಂತ ಗೊತ್ತಾಗಿದೆ. ಈತ ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದ ನಿವಾಸಿ ಎನ್ನಲಾಗಿದೆ. ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುವುದೇ ಈತನ ಕಾಯಕ ಆಗಿತ್ತಾ ಅನ್ನೋ ಅನುಮಾನ ಈಗ ಶುರುವಾಗಿದೆ.
ಸ್ಥಳೀಯರ ಮಾತು: "ಈ ನಿರ್ಜನ ರಸ್ತೆಯಲ್ಲಿ ಮಹಿಳೆಯರು ಓಡಾಡೋದೆ ಕಷ್ಟ ಆಗಿಬಿಟ್ಟಿತ್ತು. ಇವತ್ತು ಇವನು ಸಿಕ್ಕಿಬಿದ್ದಿದ್ದು ಒಳ್ಳೆಯದೇ ಆಯ್ತು. ಇಂಥವರಿಗೆ ತಕ್ಕ ಶಾಸ್ತಿ ಆಗಲೇಬೇಕು."
ಸಾರ್ವಜನಿಕರು ತಡ ಮಾಡದೆ ಹಿರೇಕೆರೂರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿ, ಆರೋಪಿ ಸಂತೋಷ್ನನ್ನು ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ರಾಧಾ ಅವರಿಂದ ಕದ್ದಿದ್ದ 40 ಗ್ರಾಂ ಚಿನ್ನದ ಸರವನ್ನ ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಕೇಸ್ ದಾಖಲಾಗಿದೆ. ಕಳ್ಳನನ್ನ ಹಿಡಿದು ಧೈರ್ಯ ತೋರಿದ ಚನ್ನಳ್ಳಿ ಮತ್ತು ವರಹ ಗ್ರಾಮದ ಜನರಿಗೆ ಈಗ ಎಲ್ಲೆಡೆಯಿಂದ ಭರ್ಜರಿ ಪ್ರಶಂಸೆ ಸಿಗುತ್ತಿದೆ!