Feb 16, 2026 Languages : ಕನ್ನಡ | English

ರಾಜಕೀಯ ಗೊಂದಲಕ್ಕೆ ಉತ್ತರ ನೀಡಿದ ಶಾಸಕ ಹಿಟ್ನಾಳ್ – ಡಿಕೆ ಬ್ರದರ್ಸ್ ಪ್ರವಾಸದ ಬಗ್ಗೆ ಸ್ಪಷ್ಟನೆ!!

ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಡಿಕೆ ಬ್ರದರ್ಸ್ ದೆಹಲಿ ಪ್ರವಾಸದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಡಿಕೆ ಬ್ರದರ್ಸ್ ತಮ್ಮ ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದಾರೆ. “ಅವರಿಗೆ ರಾಜ್ಯದ ಬೇರೆ ಬೇರೆ ಇನ್ಚಾರ್ಜ್ ಕೊಟ್ಟಿದ್ದಾರೆ. ಹೀಗಿರುವಾಗ, ದೆಹಲಿಗೆ ಹೋಗಬಾರದು ಎಂದು ಹೇಳೋಕೆ ಆಗುತ್ತಾ? ಅವರು ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡ್ತಾರೆ. ತಮ್ಮ ಖಾತೆಗಳ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ,” ಎಂದು ಹಿಟ್ನಾಳ್ ಹೇಳಿದ್ದಾರೆ.

ಸಿಎಂ ಬದಲಾವಣೆ ಕುರಿತು ಶಾಸಕ ಹಿಟ್ನಾಳ್ ಹೇಳಿದ್ದೇನು?
ಸಿಎಂ ಬದಲಾವಣೆ ಕುರಿತು ಶಾಸಕ ಹಿಟ್ನಾಳ್ ಹೇಳಿದ್ದೇನು?

ಈ ನಡುವೆ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, “ನೀವು ಮಾಧ್ಯಮದಲ್ಲಿ ಗೊಂದಲ ಸೃಷ್ಟಿ ಮಾಡ್ತಾ ಇದ್ದೀರಿ. ರಾಜ್ಯದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ನಾನು ವಿಧಾನಪರಿಷತ್ ಸದಸ್ಯನಾಗಿದ್ದೇನೆ. ಸಿಎಂ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಿದಾಗ, ಹೈಕಮಾಂಡ್ ಯಾವ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದ್ದೇನೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಅದನ್ನೇ ನೀವು ಗೊಂದಲ ಸೃಷ್ಟಿ ಮಾಡಿ ಹೇಳ್ತೀರಿ,” ಎಂದು ಸ್ಪಷ್ಟನೆ ನೀಡಿದ್ದಾರೆ.

ಹಿಟ್ನಾಳ್ ಅವರು ಮಾಧ್ಯಮದ ಮುಂದೆ ಕೈಮುಗಿದು ಕೇಳಿಕೊಂಡಿದ್ದು, “ನಮ್ಮ ಇಬ್ಬರು ನಾಯಕರು ಈಗಾಗಲೇ ಹೇಳಿದಂತೆ, ಮುಂದಿನ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಪದೇ ಪದೇ ಅದನ್ನು ಕೇಳೋದು ಬೇಡ. ನಾವು ಹೇಳೋದು ಸಹ ಏನು ಇಲ್ಲ. ಹೈಕಮಾಂಡ್ ಒಳ್ಳೆಯ ತೀರ್ಮಾನ ಕೈಗೊಳ್ಳುತ್ತದೆ,” ಎಂದು ಹೇಳಿದ್ದಾರೆ. ಇದೇ ವೇಳೆ ಶಾಸಕರ ವಿದೇಶ ಪ್ರವಾಸದ ಬಗ್ಗೆ ಹಿಟ್ನಾಳ್ ಪ್ರತಿಕ್ರಿಯೆ ನೀಡಿದ್ದು, “ನಾವು ಶಾಸಕರಂದರೆ ವಿದೇಶಿ ಪ್ರವಾಸ ಮಾಡಬಾರದೇನು? ನಮಗೆ ಪ್ರವಾಸ ಮಾಡುವ ಸ್ವಾತಂತ್ರ್ಯ ಕೂಡ ಇಲ್ವಾ? ವಿದೇಶಕ್ಕೆ ನಮ್ಮ ಸ್ವಂತ ಹಣದಲ್ಲಿ ಹೋಗ್ತಿದ್ದೇವೆ. 

ನಾನು ಕಳೆದ ತಿಂಗಳು ವಿದೇಶ ಪ್ರವಾಸ ಮಾಡಿದ್ದೇನೆ, ಅಂದು ಯಾಕೆ ನನ್ನನ್ನು ಕೇಳಲಿಲ್ಲ? ಈಗ ನಾನು ವಿದೇಶಕ್ಕೆ ಹೋಗುವುದು ಕನ್ಫರ್ಮ್ ಆಗಿಲ್ಲ. ಹೋದರೆ ನಿಮಗೆ ತಿಳಿಸಿ ಹೋಗುತ್ತೇನೆ,” ಎಂದು ಹೇಳಿದ್ದಾರೆ. ಡಿಕೆ ಬ್ರದರ್ಸ್ ದೆಹಲಿ ಪ್ರವಾಸ ಮತ್ತು ಶಾಸಕರ ವಿದೇಶ ಪ್ರವಾಸದ ಬಗ್ಗೆ ಹಿಟ್ನಾಳ್ ನೀಡಿದ ಸ್ಪಷ್ಟನೆ, ರಾಜಕೀಯ ವಲಯದಲ್ಲಿ ಮೂಡಿದ್ದ ಗೊಂದಲಕ್ಕೆ ಉತ್ತರ ನೀಡಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ ಎಂಬ ಸಂದೇಶವನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ.  

Latest News