ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿರೋ ಆ ಒಂದು ದಾರುಣ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ ಬಾಸ್. 10 ವರ್ಷದ ಪುಟ್ಟ ಮಗುವನ್ನು ಕಿಡ್ನಾಪ್ ಮಾಡಿ, ಅ*ತ್ಯಾಚಾರ ಎಸಗಿ, ಕೊ*ಲೆ ಮಾಡಿರೋ ಭೀಕರ ಪ್ರಕರಣವಿದು. ಇಡೀ ತಮಿಳುನಾಡು ಕಣ್ಣೀರಲ್ಲಿ ಮುಳುಗಿದ್ದರೆ, ಅಲ್ಲಿನ ಕೆಲವು ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರ ಕನಿಷ್ಠ ಮಾನವೀಯತೆಯೂ ಇಲ್ಲದೆ ವರ್ತಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ!
ಈ ಸೂಕ್ಷ್ಮ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪ್ರೆಸ್ಮೀಟ್ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಜಗತ್ತನ್ನೇ ಮರೆತು ಜೋರಾಗಿ ನಗುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದು ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಹೊಸ ಸರ್ಕಾರಕ್ಕೆ ಭಾರಿ ಮುಜುಗರ ತಂದಿಟ್ಟಿದೆ. ಇಡೀ ಘಟನೆಯ ಮ್ಯಾಟರ್ ಇಲ್ಲಿದೆ ನೋಡಿ.
ಒಂದರ ಮೇಲೊಂದು ವಿವಾದ - ಸಿಎಂ ವಿಜಯ್ ಸರ್ಕಾರಕ್ಕೆ ಭಾರಿ ಮುಜುಗರ!
ಈಗ ತಮಿಳುನಾಡಿನಲ್ಲಿ ಬ್ಯಾಕ್-ಟು-ಬ್ಯಾಕ್ ಎರಡು ದೊಡ್ಡ ವಿವಾದಗಳು ಹುಟ್ಟಿಕೊಂಡಿವೆ. ಮಗುವಿನ ಸಾವಿಗೆ ಇಡೀ ರಾಜ್ಯವೇ ಶೋಕ ವ್ಯಕ್ತಪಡಿಸುತ್ತಿದ್ದರೆ, ಜವಾಬ್ದಾರಿಯುತ ಸ್ಥಾನದಲ್ಲಿರೋರು ಹೀಗೆ ಬೇಜವಾಬ್ದಾರಿಯಾಗಿ ನಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೊದಲ ವಿವಾದ (ಸಚಿವೆಯ ನಗು): ಮೊದಲು ತಮಿಳುನಾಡು ಕೈಗಾರಿಕಾ ಸಚಿವೆ ಎಸ್. ಕೀರ್ತನಾ ಅವರು ಸುದ್ದಿಗಾರರು ಈ ಕೊ*ಲೆ ಪ್ರಕರಣದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾಗ ಕ್ಯಾಶುಯಲ್ ಆಗಿ ನಗುತ್ತಾ ಉತ್ತರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿರೋಧ ಪಕ್ಷವಾದ ಬಿಜೆಪಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಎರಡನೇ ವಿವಾದ (ಐಪಿಎಸ್ ಅಧಿಕಾರಿಗಳ ನಗು): ಸಚಿವೆಯ ವಿವಾದ ತಣ್ಣಗಾಗುವ ಮುನ್ನವೇ, ಇತ್ತ ಕೊಯಮತ್ತೂರಿನಲ್ಲಿ ಪ್ರಕರಣದ ಅಪ್ಡೇಟ್ ನೀಡಲು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಪ್ರೆಸ್ಮೀಟ್ ಕರೆದಿತ್ತು. ಅಲ್ಲಿ ನಡೆದಿದ್ದಂತೂ ಅಸಹ್ಯದ ಪರಮಾವಧಿ!
ಪ್ರೆಸ್ಮೀಟ್ನಲ್ಲಿ ಜೋಕ್ ಹೊಡೆದು ನಕ್ಕ ಹಿರಿಯ ಆಫೀಸರ್ಗಳು!
ಮಾಧ್ಯಮಗೋಷ್ಠಿ ಶುರುವಾಗುವ ಮುನ್ನ ವೇದಿಕೆ ಮೇಲೆ ಕುಳಿತಿದ್ದ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕಿ (IGP) ಆರ್.ವಿ. ರಮ್ಯಾ ಭಾರತಿ, ಕೊಯಮತ್ತೂರು ರೇಂಜ್ ಡಿಐಜಿ ಪಿ. ಸ್ವಾಮಿನಾಥನ್ ಮತ್ತು ಕೊಯಮತ್ತೂರು ಎಸ್ಪಿ ಅಲ್ಲಾಟಿಪಲ್ಲಿ ಪವನ್ ಕುಮಾರ್ ರೆಡ್ಡಿ ಅವರು ತಮ್ಮಲ್ಲೇ ಏನೋ ಪಿಸುಗುಟ್ಟುತ್ತಾ, ಪರಸ್ಪರ ಮಾತನಾಡುತ್ತಾ ಜೋರಾಗಿ ನಕ್ಕಿದ್ದಾರೆ.
ಅಲ್ಲಿ ಮೈಕ್ ಮತ್ತು ಕ್ಯಾಮೆರಾಗಳು ಆನ್ ಇವೆ ಅನ್ನೋ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಈ ಹಿರಿಯ ಐಪಿಎಸ್ ಅಧಿಕಾರಿಗಳು ತಮಾಷೆ ಮಾಡಿಕೊಂಡಿದ್ದಾರೆ. ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಲೈವ್ ಆಗಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹತ್ತಿಕೊಂಡಿದೆ.
ನೆಟ್ಟಿಗರ ಆಕ್ರೋಶ: ಇವರು ಈ ಹುದ್ದೆಗೆ ನಾಲಾಯಕ್!
"ಒಂದು 10 ವರ್ಷದ ಹೆಣ್ಣು ಮಗುವನ್ನು ಅಪಹರಿಸಿ, ಕ್ರೂರವಾಗಿ ಅ*ತ್ಯಾಚಾರ ಮಾಡಿ, ಕೊ*ಲೆ ಮಾಡಲಾಗಿದೆ. ಇಡೀ ನಾಡೇ ಕಣ್ಣೀರು ಹಾಕುತ್ತಿದೆ. ಇಂತಹ ಗಂಭೀರ ಮತ್ತು ಸೂಕ್ಷ್ಮ ಪರಿಸ್ಥಿತಿಯಲ್ಲೂ ಕನಿಷ್ಠ ಕಾಮನ್ ಸೆನ್ಸ್ ಇಲ್ಲದೆ ಪ್ರೆಸ್ಮೀಟ್ನಲ್ಲಿ ಜೋಕ್ ಮಾಡುತ್ತಾ ನಗುತ್ತಿರುವ ಇಂತಹ ಅಧಿಕಾರಿಗಳ ವಿರುದ್ಧ ಸಿಎಂ ವಿಜಯ್ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಇವರೆಲ್ಲಾ ಈ ಗೌರವಾನ್ವಿತ ಹುದ್ದೆಯಲ್ಲಿರಲು ಕಂಪ್ಲೀಟ್ ನಾಲಾಯಕ್," ಎಂದು ಸಾರ್ವಜನಿಕರು ಮತ್ತು ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ಹಿಗ್ಗಾಮುಗ್ಗಾ ತೊಳೆಯುತ್ತಿದ್ದಾರೆ.
ಅಧಿಕಾರಿಗಳು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸಾರ್ವಜನಿಕವಾಗಿ ನಡೆದುಕೊಳ್ಳುವಾಗ ಕನಿಷ್ಠ ಸೂಕ್ಷ್ಮತೆ ಮತ್ತು ಸೌಜನ್ಯ ಇರಬೇಕು ಅನ್ನೋದು ಜನರ ಆಕ್ರೋಶಕ್ಕೆ ಮುಖ್ಯ ಕಾರಣ. ಸದ್ಯ ಈ ವಿಡಿಯೋ ಇಡೀ ತಮಿಳುನಾಡು ಸರ್ಕಾರವನ್ನು ಡಿಫೆನ್ಸಿವ್ ಮೂಡ್ಗೆ ತಳ್ಳಿದೆ. ಹೊಸದಾಗಿ ಸಿಎಂ ಆಗಿರುವ ಜೋಸೆಫ್ ವಿಜಯ್ ಅವರು ಈ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಯಾವ ರೀತಿಯ ಆಕ್ಷನ್ ತಗೋತಾರೆ ಅನ್ನೋದನ್ನು ಕಾದು ನೋಡಬೇಕಿದೆ!
A video of police officers laughing during a press conference on the horrific Coimbatore child murder case has sparked widespread outrage online, with social media users slamming the officials for their “insensitive” conduct. The clip has intensified public anger in Tamil Nadu,… pic.twitter.com/555F5cfbAb
— Mojo Story (@themojostory) May 25, 2026
ಪುಟ್ಟ ಕಂದಮ್ಮನನ್ನು ಕಳೆದುಕೊಂಡು ಪೋಷಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ, ವ್ಯವಸ್ಥೆಯ ಉನ್ನತ ಸ್ಥಾನದಲ್ಲಿರೋರು ಹೀಗೆ ಅಟ್ಟಹಾಸದ ನಗು ನಗುತ್ತಿರುವುದು ನಿಜಕ್ಕೂ ದುರಂತವೇ ಸರಿ!