Jan 25, 2026 Languages : ಕನ್ನಡ | English

200 ಕೋಟಿ ನೀರಾವರಿ ಯೋಜನೆ ತಂದ ಶಾಸಕ - ಶಾಸಕರಿಗೆ ಎತ್ತು ಗಾಡಿ ನೀಡಿದ ರೈತರ ಕೆಲಸಕ್ಕೆ ಬಾರಿ ಮೆಚ್ಚುಗೆ!!

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಅಪರೂಪದ ದೃಶ್ಯ ಕಂಡುಬಂದಿದೆ. ತಮ್ಮ ಹೃದಯದ ಅಭಿಮಾನವನ್ನು ವ್ಯಕ್ತಪಡಿಸಲು ರೈತರು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರಿಗೆ ಎರಡು ಎತ್ತುಗಳು ಹಾಗೂ ಎತ್ತಿನ ಚಕ್ಕಡಿ ಗಾಡಿಯನ್ನು ಕೊಡುಗೆಯಾಗಿ ನೀಡಿದರು. ಈ ಕೊಡುಗೆ ಕೇವಲ ಒಂದು ಉಡುಗೊರೆಯಲ್ಲ, ಅದು ರೈತರ ಕೃತಜ್ಞತೆಯ ಸಂಕೇತವೂ ಹೌದು. ಶಾಸಕರಾದ ಮಹೇಂದ್ರ ತಮ್ಮಣ್ಣವರು ತಮ್ಮ ಮತಕ್ಷೇತ್ರಕ್ಕೆ ಸುಮಾರು 200 ಕೋಟಿ ಮೊತ್ತದ ಶ್ರೀ ಕರೆ ಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ತಂದಿದ್ದಾರೆ. ಈ ಯೋಜನೆಯಿಂದ 22 ಗ್ರಾಮಗಳು ಸೇರಿ ಸುಮಾರು 9 ಸಾವಿರ ಹೇಕ್ಟರ್ ರೈತರ ಭೂಮಿಗೆ ನೀರಾವರಿ ಸೌಲಭ್ಯ ಒದಗಲಿದೆ. ರೈತರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲಿರುವ ಈ ಯೋಜನೆ, ಅವರ ಕೃಷಿ ಬದುಕಿಗೆ ಹೊಸ ಬೆಳಕನ್ನು ತಂದಿದೆ.

ರೈತರ ಹೃದಯದ ಅಭಿಮಾನ: ಶಾಸಕರಿಗೆ ಎತ್ತು-ಚಕ್ಕಡಿ ಗಾಡಿ ಕೊಡುಗೆ
ರೈತರ ಹೃದಯದ ಅಭಿಮಾನ: ಶಾಸಕರಿಗೆ ಎತ್ತು-ಚಕ್ಕಡಿ ಗಾಡಿ ಕೊಡುಗೆ

ಈ ಹಿನ್ನೆಲೆಯಲ್ಲಿ, ಅಲಖನೂರ ಗ್ರಾಮದ ರೈತರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ವಿಭಿನ್ನ ರೀತಿಯ ಅಭಿನಂದನೆ ಸಲ್ಲಿಸಿದರು. ಅವರು ಸುಮಾರು 3 ಲಕ್ಷ ರೂಪಾಯಿ ಬೆಲೆಬಾಳುವ ಎರಡು ಎತ್ತುಗಳು ಹಾಗೂ ಚಕ್ಕಡಿ ಗಾಡಿಯನ್ನು ಶಾಸಕರಿಗೆ ಹಸ್ತಾಂತರಿಸಿದರು. ಚಕ್ಕಡಿ ಗಾಡಿಯ ಚಬಕಾ ನೀಡಿ ಶಾಸಕರಿಗೆ ಗೌರವ ಸಲ್ಲಿಸಿದ ಈ ಕ್ಷಣ, ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ತೋರಿಸಿತು. ರೈತರಿಗೆ ಎತ್ತು ಮತ್ತು ಚಕ್ಕಡಿ ಗಾಡಿ ಕೇವಲ ಕೃಷಿ ಸಾಧನಗಳಲ್ಲ, ಅದು ಅವರ ಬದುಕಿನ ಅವಿಭಾಜ್ಯ ಅಂಗ. ಈ ಉಡುಗೊರೆಯ ಮೂಲಕ ಅವರು ಶಾಸಕರಿಗೆ ತಮ್ಮ ಹೃದಯದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. “ನಮ್ಮ ಹೊಲಗಳಿಗೆ ನೀರು ತಂದುಕೊಟ್ಟವರು, ನಮ್ಮ ಬದುಕಿಗೆ ಹೊಸ ಆಶಾಕಿರಣ ತಂದವರು” ಎಂಬ ಭಾವನೆ ಈ ಕೊಡುಗೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು.

ಗ್ರಾಮಸ್ಥರ ಈ ಅಭಿನಂದನೆ, ರಾಜಕೀಯ ಮತ್ತು ಜನಸಾಮಾನ್ಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಶಾಸಕರಿಗೆ ನೀಡಲಾದ ಈ ಕೊಡುಗೆ. ಕೇವಲ ಗೌರವವಲ್ಲ, ಅದು ರೈತರ ಬದುಕಿನ ಹೋರಾಟ ಮತ್ತು ಅವರ ಕನಸುಗಳ ಪ್ರತೀಕ. 

Latest News