May 9, 2026 Languages : ಕನ್ನಡ | English

ಬಳ್ಳಾರಿ ಕಾಲೇಜಿನಲ್ಲಿ ಮಾದಕ ಜಾಲದ ಅಟ್ಟಹಾಸ - ವಿದ್ಯಾರ್ಥಿನಿಯರ ವಿಡಿಯೋ ವೈರಲ್, ಪೋಷಕರಲ್ಲಿ ಹೆಚ್ಚಿದ ಆತಂಕ!!

ಬಳ್ಳಾರಿಯ ಪ್ಯುಪಿಲ್ಸ್ ಟ್ರೀ ಪಿಯು ಕಾಲೇಜಿನಲ್ಲಿ ನಡೆದ ಘಟನೆಗಳು ಸಮಾಜಕ್ಕೆ ದೊಡ್ಡ ಅವಮಾನ ತಂದಿವೆ. ಶಾಲಾ-ಕಾಲೇಜುಗಳು ಸಂಸ್ಕಾರ ನೀಡುವ ಜಾಗವಾಗಬೇಕು, ಆದರೆ ಇಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ವಿದ್ಯಾರ್ಥಿನಿಯರು ಮಾದಕ ವಸ್ತು ಸೇವಿಸುವ ವಿಡಿಯೋ ಪೋಷಕರಲ್ಲಿ ಭೀತಿ ಹುಟ್ಟಿಸಿದೆ. ಇದು ಕೇವಲ ಒಂದು ಘಟನೆಯಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ಜಾಲ ಎಷ್ಟು ಆಳವಾಗಿ ಹರಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದನ್ನ ತಡೆಯಲು ಕಠಿಣ ಕಾನೂನುಗಳು ಜಾರಿಗೆ ಬರಲೇಬೇಕು.

ಪ್ಯುಪಿಲ್ಸ್ ಟ್ರೀ ಕಾಲೇಜು ಮಾನ್ಯತೆ ರದ್ದತಿಗೆ ಎಬಿವಿಪಿ ಆಗ್ರಹ!!
ಪ್ಯುಪಿಲ್ಸ್ ಟ್ರೀ ಕಾಲೇಜು ಮಾನ್ಯತೆ ರದ್ದತಿಗೆ ಎಬಿವಿಪಿ ಆಗ್ರಹ!!

ಪ್ರಶ್ನಿಸಿದವರ ಮೇಲೆ ಹ*ಲ್ಲೆ ಮತ್ತು ದೌರ್ಜನ್ಯ

ಕಾಲೇಜಿನೊಳಗೆ ನಡೆಯುತ್ತಿರುವ ಇಂತಹ ಕೆಟ್ಟ ಕೆಲಸಗಳ ಬಗ್ಗೆ ವಿದ್ಯಾರ್ಥಿ ಪರಿಷತ್ (ABVP) ಮೊದಲೇ ಎಚ್ಚರಿಕೆ ನೀಡಿತ್ತು. ಆದರೆ ಕಾಲೇಜು ಮಂಡಳಿಯು ಇದನ್ನು ಸರಿಪಡಿಸುವ ಬದಲು ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ. ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲು ಹೋದ ಎಬಿವಿಪಿ ಕಾರ್ಯಕರ್ತರನ್ನು ಕಾಲೇಜಿನವರು ಕೆಟ್ಟದಾಗಿ ಬೈದು, ಅವರ ಮೇಲೆ ಹ*ಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸತ್ಯವನ್ನು ಹೇಳುವವರ ಬಾಯಿ ಮುಚ್ಚಿಸಲು ಹಿಂಸೆಯ ದಾರಿ ಹಿಡಿದಿರುವುದು ನಿಜಕ್ಕೂ ಖಂಡನೀಯ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಆಡಳಿತ ಮಂಡಳಿಯ ವಿರುದ್ಧ ಈಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಚ್ಚಿಬೀಳಿಸುವ ಅಕ್ರಮಗಳ ಸಾಲು

ಈ ಕಾಲೇಜಿನ ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ. ಈ ಹಿಂದೆ ಕೂಡ ಇಲ್ಲಿನ ಶೌಚಾಲಯಗಳಲ್ಲಿ ಮದ್ಯದ ಬಾಟಲಿಗಳು ಸಿಕ್ಕಿದ್ದವು ಎಂಬ ಆಘಾತಕಾರಿ ಮಾಹಿತಿ ಇದೆ. ಅತೀ ಭೀಕರ ಸಂಗತಿ ಅಂದರೆ, ಅದೇ ಕಾಲೇಜಿನ ಕೆಲವು ಹುಡುಗರು ಒಬ್ಬ ವಿದ್ಯಾರ್ಥಿನಿಗೆ ಕುಡಿಯುವ ಪಾನೀಯದಲ್ಲಿ ಮಾದಕ ವಸ್ತು ಬೆರೆಸಿ ಕೊಟ್ಟು, ಆಕೆಯ ಮೇಲೆ ಅ*ತ್ಯಾಚಾರ ಮಾಡಲು ಸಂಚು ನಡೆಸಿದ್ದರು ಎಂಬ ದೂರುಗಳು ಕೇಳಿಬಂದಿವೆ. ವಿದ್ಯಾ ದೇಗುಲದಂತಹ ಜಾಗದಲ್ಲಿ ಗಾಂ*ಜಾ ಮತ್ತು ಡ್ರ*ಗ್ಸ್‌ಗಳು ಇಷ್ಟು ಸುಲಭವಾಗಿ ಹೇಗೆ ಸಿಗುತ್ತಿವೆ? ಇಷ್ಟೆಲ್ಲಾ ಅನಾಹುತಗಳು ಕಣ್ಣೆದುರೇ ನಡೆಯುತ್ತಿದ್ದರೂ ಆಡಳಿತ ಮಂಡಳಿ ಸುಮ್ಮನೆ ಕುಳಿತಿರುವುದು ನೋಡಿದರೆ, ಅವರಿಗೂ ಇದರಲ್ಲಿ ಪಾಲಿದೆಯೇ ಎಂಬ ಸಂಶಯ ಮೂಡುತ್ತಿದೆ.

ರಾಜ್ಯಪಾಲರಿಗೆ ಎಬಿವಿಪಿ ಮನವಿ

ಈ ಎಲ್ಲಾ ಗಂಭೀರ ವಿಷಯಗಳನ್ನು ಮುಂದಿಟ್ಟುಕೊಂಡು ಎಬಿವಿಪಿ ನಾಯಕರು ಕರ್ನಾಟಕದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. "ಈ ಕಾಲೇಜಿನಲ್ಲಿ ಓದಿಗಿಂತ ಅಧರ್ಮದ ಕೆಲಸಗಳೇ ಹೆಚ್ಚಾಗುತ್ತಿವೆ, ಹಾಗಾಗಿ ಕೂಡಲೇ ಈ ಕಾಲೇಜಿನ ಮಾನ್ಯತೆಯನ್ನು ರದ್ದು ಮಾಡಿ" ಎಂದು ಆಗ್ರಹಿಸಿದ್ದಾರೆ. ಇಂತಹ ಕಠಿಣ ನಿರ್ಧಾರ ತಗೊಂಡರೆ ಮಾತ್ರ ಬೇರೆ ಕಾಲೇಜುಗಳಿಗೆ ಬುದ್ಧಿ ಬರುತ್ತದೆ ಎಂಬುದು ಅವರ ವಾದ. ಜೊತೆಗೆ, ಕಾಲೇಜುಗಳಲ್ಲಿ ಇಂತಹ ಕೆಟ್ಟ ಚಟುವಟಿಕೆಗಳನ್ನು ತಡೆಯಲು ವೈದ್ಯರು ಮತ್ತು ತಜ್ಞರನ್ನೊಳಗೊಂಡ ಒಂದು ವಿಶೇಷ ಸಮಿತಿ ರಚಿಸಬೇಕೆಂದು ರಾಜ್ಯಪಾಲರಿಗೆ ವಿನಂತಿಸಿದ್ದಾರೆ.

ಹೋರಾಟದ ಸಂಕಲ್ಪ

ನಮ್ಮ ಮಕ್ಕಳು ಓದುವ ಜಾಗದಲ್ಲಿ ಈ ಡ್ರ*ಗ್ಸ್ ಕೆಟ್ಟ ಅಭ್ಯಾಸ ಇರಬಾರದು ಎಂದು ಎಬಿವಿಪಿ ಹುಡುಗರು ದೊಡ್ಡ ಸಾಹೇಬರಾದ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ದರ್ಶನ್ ಹೆಗಡೆ ಮತ್ತು ಅವರ ತಂಡದವರು ಹೋಗಿ, "ತಪ್ಪು ಮಾಡುವ ಕಾಲೇಜುಗಳಿಗೆ ಬುದ್ಧಿ ಕಲಿಸಿ, ಹೊಸ ಕಾನೂನು ತನ್ನಿ" ಎಂದು ಮನವಿ ಮಾಡಿದ್ದಾರೆ. ಮಕ್ಕಳ ಜೀವನ ಹಾಳಾಗುವುದನ್ನು ನಾವು ಸುಮ್ಮನೆ ನೋಡುತ್ತಾ ಕೂರುವುದಿಲ್ಲ, ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಅವರು ಹಠ ತೊಟ್ಟಿದ್ದಾರೆ. ಇದು ಪ್ರತಿಯೊಬ್ಬ ಪೋಷಕರೂ ಮೆಚ್ಚಬೇಕಾದ ಕೆಲಸ.

Latest News