Apr 30, 2026 Languages : ಕನ್ನಡ | English

ಹೆಂಡತಿ ತವರಿಗೆ ಹೋದದ್ದೇ ತಡ, ಮನೆಗೆ ಗೆಳತಿಯನ್ನ ಕರೆತಂದ ಗಂಡ - ಮುಂದಾಗಿದ್ದು ನೀವೇ ನೋಡಿ!! ವಿಡಿಯೋ;

ಟರ್ಕಿಯಲ್ಲಿ ನಡೆದ ಈ ಹೈ-ವೋಲ್ಟೇಜ್ ಡ್ರಾಮಾ ಕೇಳಿದ್ರೆ, ನೀವು ಕೂಡ "ಇಂತಹ ನೆರೆಹೊರೆಯವರು ಎಲ್ಲರಿಗೂ ಇರಬೇಕು" ಅಂತೀರಾ! ಒಬ್ಬ ಹೆಂಡತಿಯ ನಂಬಿಕೆಗೆ ಗಂಡ ದ್ರೋಹ ಬಗೆದಾಗ, ಆಕೆಗೆ ಸಾಥ್ ಕೊಟ್ಟಿದ್ದು ಮಾತ್ರ ಅದೇ ಮನೆಯ ಪಕ್ಕದ ಮನೆಯವರು.

ಗಂಡ ಮಗದೊಬ್ಬಳ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ; | Photo Credit: https://x.com/srkntnyldz
ಗಂಡ ಮಗದೊಬ್ಬಳ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ; | Photo Credit: https://x.com/srkntnyldz

ಈ ರೋಚಕ ಘಟನೆಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ:

"ಎರಡು ದಿನ ತವರು ಮನೆಯಲ್ಲಿ ಇರ್ತೀನಿ" ಅಂದಿದ್ದೇ ತಪ್ಪಾಯ್ತು!

ಟರ್ಕಿಯ ಈ ಮಹಿಳೆ, ತನ್ನ ಗಂಡನಿಗೆ "ನಾನು ಎರಡು ದಿನ ನಮ್ಮ ಅಮ್ಮನ ಮನೆಯಲ್ಲಿ ಇರ್ತೀನಿ, ಹೋಗಿ ಬರ್ತೀನಿ" ಅಂತ ಹೇಳಿ ಮನೆಯಿಂದ ಹೊರಟಿದ್ದಾಳೆ. ಹೆಂಡತಿ ಮನೆಯಿಂದ ಕಾಲು ಹೊರಗೆ ಇಟ್ಟಿದ್ದೇ ತಡ, ಗಂಡನಿಗೆ ಒಂಥರಾ ಫ್ರೀಡಂ ಸಿಕ್ಕಂತಾಗಿದೆ. ಹೆಂಡತಿ ಹೋದ ಕೆಲವೇ ಗಂಟೆಗಳಲ್ಲಿ ಈ ಮಹಾಶಯ ಮಗದೊಬ್ಬ ಮಹಿಳೆಯನ್ನ ಮನೆಗೆ ಕರೆತಂದಿದ್ದಾನೆ. ತಾನು ಮಾಡ್ತಿರೋದು ಯಾರಿಗೂ ಗೊತ್ತಾಗಲ್ಲ ಅನ್ನೋದು ಈತನ ಪ್ಲಾನ್ ಆಗಿತ್ತು.

ಪಕ್ಕದ ಮನೆಯವರ 'ಕಿಲಾಡಿ' ಕೆಲಸ!

ಆದ್ರೆ, ಈತನ ದುರದೃಷ್ಟ ಅಂದ್ರೆ ಪಕ್ಕದ ಮನೆಯವರು ಫುಲ್ ಅಲರ್ಟ್ ಆಗಿದ್ದರು. ಗಂಡ ಮಗದೊಬ್ಬ ಹೆಣ್ಣನ್ನ ಮನೆಗೆ ಕರೆತಂದಿದ್ದನ್ನ ನೋಡಿ ಸುಮ್ಮನಿರದ ಆ ನೆರೆಮನೆಯವರು, ತಕ್ಷಣವೇ ಹೆಂಡತಿಗೆ ಫೋನ್ ಮಾಡಿದ್ದಾರೆ. "ನೋಡು ನಿನ್ನ ಮನೆಯಲ್ಲಿ ಏನೋ ನಡೀತಿದೆ, ಅರ್ಜೆಂಟ್ ಆಗಿ ಮನೆಗೆ ಬಾ" ಅಂತ ವಿಷಯ ಮುಟ್ಟಿಸಿದ್ದಾರೆ. ಅಷ್ಟೇ ಅಲ್ಲ, ಆಕೆ ಮನೆಗೆ ಬರೋವರೆಗೂ ಆ ನೆರೆಹೊರೆಯವರು ವಾಚ್‌ಮ್ಯಾನ್‌ನಂತೆ ಕಣ್ಣಿಟ್ಟಿದ್ದರು.

ಮನೆಗೆ ಬಂದ ಹೆಂಡತಿ ಕಂಡ ದೃಶ್ಯಕ್ಕೆ ಶಾಕ್!

ಫೋನ್ ಬಂದ ಕೂಡಲೇ ತಬ್ಬಿಬ್ಬಾದ ಹೆಂಡತಿ, ಗಾಬರಿಯಿಂದ ಮನೆಗೆ ಓಡಿ ಬಂದಿದ್ದಾಳೆ. ಅಮ್ಮನ ಮನೆಗೆ ಹೋಗಬೇಕಿದ್ದವಳು ಸಡನ್ ಆಗಿ ಎದುರು ನಿಂತಿದ್ದನ್ನ ನೋಡಿ ಗಂಡನಿಗೆ ಗುಂಡಿಗೆ ಬಾಯಿಗೆ ಬಂದಂತಾಗಿದೆ. ಕದ ತೆರೆದು ಒಳಗಡೆ ಹೋದವಳಿಗೆ ಗಂಡ ಮಗದೊಬ್ಬ ಮಹಿಳೆಯ ಜೊತೆ ಇರೋದು ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ಆ ಕ್ಷಣಕ್ಕೆ ಆಕೆಗಾದ ಕೋಪ ಅಷ್ಟಿಷ್ಟಲ್ಲ!

ಆಮೇಲೆ ನಡೆದಿದ್ದು ಅಸಲಿ ಅಗ್ನಿಪರೀಕ್ಷೆ!

ಆ ದಿನ ಆ ಗಂಡನ ಪಾಲಿಗೆ ನಿಜಕ್ಕೂ ಒಂದು 'ನೈಟ್‌ಮೇರ್' (Nightmare) ಆಗಿತ್ತು. ಹೆಂಡತಿಯ ಆಕ್ರೋಶದ ಮುಂದೆ ಆತ ಮತ್ತು ಆ ಮಹಿಳೆ ಇಬ್ಬರೂ ಬೆಚ್ಚಿಬಿದ್ದಿದ್ದಾರೆ. ನೆರೆಹೊರೆಯವರು ಕೂಡ ಈ ಸಂದರ್ಭದಲ್ಲಿ ಹೆಂಡತಿಯ ಪರವಾಗಿಯೇ ನಿಂತು ಆ ಗಂಡನ ಬುದ್ಧಿ ಕಲಿಸಿದ್ದಾರೆ. ನಂಬಿಕೆಗೆ ದ್ರೋಹ ಮಾಡಿದವರಿಗೆ ತಕ್ಕ ಪಾಠ ಸಿಕ್ಕಿದೆ ಅನ್ನೋದು ಸೋಷಿಯಲ್ ಮೀಡಿಯಾದಲ್ಲಿ ಈಗ ಭಾರಿ ಚರ್ಚೆ ಆಗ್ತಿದೆ.

ನಂಬಿಕೆ ಅನ್ನೋದು ಸಂಸಾರದ ಅಡಿಪಾಯ. ಅದು ಮುರಿದರೆ ಮತ್ತೆ ಕಟ್ಟೋದು ಕಷ್ಟ. ಇನ್ನು ಇಂತಹ ಸಮಯದಲ್ಲಿ ಮೌನವಾಗಿರದೆ ನಿಜ ಹೇಳುವ ನೆರೆಹೊರೆಯವರು ಸಿಕ್ಕರೆ ದ್ರೋಹಿಗಳಿಗೆ ಉಳಿಗಾಲವಿಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

ಈ ಸುದ್ದಿಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಇದರ ಹೆಚ್ಚಿನ ವಿವರಗಳಿಗೆ Saptashwa TV ಜವಾಬ್ದಾರಿಯಾಗಿರುವುದಿಲ್ಲ. ನಾವು ಕೇವಲ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

Latest News