Jan 25, 2026 Languages : ಕನ್ನಡ | English

ಕಿಚ್ಚನ ‘ಯುದ್ಧ’ಕ್ಕೆ ವಿಜಯಲಕ್ಷ್ಮಿಯ ‘ಪಂಚ್’ - ಸ್ಯಾಂಡಲ್ವುಡ್‌ನಲ್ಲಿ ಅಭಿಮಾನಿ ಯುದ್ಧ!!

ಕನ್ನಡ ಸಿನಿರಂಗದಲ್ಲಿ ಅಭಿಮಾನಿಗಳ ನಡುವಿನ ವಾರ್ ಮತ್ತೆ ಚರ್ಚೆಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಮಾಡಿದ ಭಾಷಣವು ಸ್ಯಾಂಡಲ್ವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಮಾರ್ಕ್ ಪ್ರೀ-ರಿಲೀಸ್ ಈವೆಂಟ್: ಕಿಚ್ಚನ ಭಾಷಣ, ವಿಜಯಲಕ್ಷ್ಮಿಯ ಕೌಂಟರ್
ಮಾರ್ಕ್ ಪ್ರೀ-ರಿಲೀಸ್ ಈವೆಂಟ್: ಕಿಚ್ಚನ ಭಾಷಣ, ವಿಜಯಲಕ್ಷ್ಮಿಯ ಕೌಂಟರ್

ಕಿಚ್ಚನ ಖಡಕ್ ವಾರ್ನಿಂಗ್

ಸುದೀಪ್ ತಮ್ಮ ಭಾಷಣದಲ್ಲಿ ನೇರವಾಗಿ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಟಾಂಗ್ ಕೊಟ್ಟಂತೆ ಮಾತನಾಡಿದರು. “ಹುಬ್ಬಳ್ಳಿಯಲ್ಲಿ ಮಾತಾಡಿದ್ರೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತೆ. ಡಿಸೆಂಬರ್ 25ಕ್ಕೆ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಒಂದು ಪಡೆ ಯುದ್ಧಕ್ಕೆ ರೆಡಿಯಾಗಿದೆ. ನಾವು ಆ ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ಮಾತಿಗೆ ಬದ್ಧ” ಎಂದು ಅವರು ಘೋಷಿಸಿದರು.

ಅವರು ಇನ್ನಷ್ಟು ಸ್ಪಷ್ಟವಾಗಿ ಹೇಳುತ್ತಾ, “ನಿಮ್ಮಗಳಿಗೋಸ್ಕರ ನಾನು ಸೈಲೆಂಟ್ ಆಗಿದ್ದೆ. ಆದರೆ ಈಗ ಹೇಳ್ತೀನಿ. ತಡೆಯೋ ತನಕ ತಡೀರಿ. ಮಾತಾಡೋ ಟೈಮಲ್ಲಿ ಮಾತಾಡಿ” ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದರು. ಈ ಮಾತುಗಳು ಅಭಿಮಾನಿಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿವೆ.

ವಿಜಯಲಕ್ಷ್ಮಿಯ ತಿರುಗೇಟು

ಕಿಚ್ಚನ ಈ ಭಾಷಣಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದಾವಣಗೆರೆಯ ಡೆವಿಲ್ ವಿಜಯಯಾತ್ರೆ ವೇದಿಕೆಯಲ್ಲಿ ತಿರುಗೇಟು ನೀಡಿದರು. ಅವರು ಸುದೀಪ್ ಹೆಸರನ್ನು ಉಲ್ಲೇಖಿಸದೇ ನೇರ ಟಕ್ಕರ್ ನೀಡಿದಂತೆ ಮಾತನಾಡಿದರು.

“ದರ್ಶನ್ ಇಲ್ಲದಿದ್ದಾಗ ಕೆಲವರು ಏನೇನೋ ಮಾತಾಡ್ತಾರೆ. ವೇದಿಕೆ ಮೇಲೆ, ಚಾನಲ್‌ಗಳಲ್ಲಿ ಕುತ್ಕೊಂಡು ಏನೇನೋ ಹೇಳ್ತಾರೆ. ದರ್ಶನ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಏನೇನೋ ಹೇಳ್ತಾರೆ. ಆದರೆ ದರ್ಶನ್ ಬಂದಾಗ ಅವರು ಬೆಂಗಳೂರಿನಲ್ಲಿ ಇರ್ತಾರೋ ಇಲ್ವೋ ಗೊತ್ತಾಗೋದಿಲ್ಲ. ಜನರು ದರ್ಶನ್ ಇರುವಾಗ ಎಲ್ಲಿ ಮಾಯ ಆಗಿರ್ತಾರೋ ಗೊತ್ತಾಗೋದಿಲ್ಲ” ಎಂದು ವಿಜಯಲಕ್ಷ್ಮಿ ಕಿಡಿ ಹೊತ್ತಿಸಿದರು.

ಅಭಿಮಾನಿಗಳ ಭಾವನೆ

ವಿಜಯಲಕ್ಷ್ಮಿ ತಮ್ಮ ಭಾಷಣದಲ್ಲಿ ದರ್ಶನ್ ಹೇಳಿದ ಮಾತುಗಳನ್ನು ನೆನಪಿಸಿದರು: “ಅಭಿಮಾನಿಗಳ್ಯಾರು ಕೋಪ ಮಾಡ್ಕೋಬೇಡಿ, ಬೇಜಾರ್ ಮಾಡ್ಕೋಬೇಡಿ, ನೊಂದ್ಕೋಬೇಡಿ” ಎಂದು. ಈ ಹೇಳಿಕೆ ಮೂಲಕ ಅವರು ಸುದೀಪ್‌ಗೆ ನೇರವಾಗಿ ಪ್ರತಿಕ್ರಿಯಿಸಿದಂತೆ ಕಂಡಿತು.

ಅಭಿಮಾನಿಗಳ ವಾರ್

ಕಿಚ್ಚನ ಭಾಷಣ ಮತ್ತು ವಿಜಯಲಕ್ಷ್ಮಿಯ ಪ್ರತಿಕ್ರಿಯೆ ಎರಡೂ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾದ-ವಿವಾದಗಳು ಹೆಚ್ಚಾಗಿವೆ. ಮಾರ್ಕ್ ಚಿತ್ರದ ಬಿಡುಗಡೆಯ ಮುನ್ನವೇ ಈ ಅಭಿಮಾನಿ ವಾರ್ ಸ್ಯಾಂಡಲ್ವುಡ್‌ನಲ್ಲಿ ಹೊಸ ತಿರುವು ಪಡೆದಿದೆ. ಒಟ್ಟಾರೆ, ಕಿಚ್ಚ ಸುದೀಪ್ ಮತ್ತು ವಿಜಯಲಕ್ಷ್ಮಿಯ ಈ ಮಾತಿನ ಯುದ್ಧವು ಕನ್ನಡ ಸಿನಿರಂಗದಲ್ಲಿ ಅಭಿಮಾನಿಗಳ ನಡುವಿನ ಪೈಪೋಟಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. 

Latest News