ಕನ್ನಡ ಚಿತ್ರರಂಗದಲ್ಲಿ ಹೊಸ ಉತ್ಸಾಹ ಮೂಡಿಸಿರುವ 'ಅಮೃತ ಅಂಜನ್' ಜನವರಿ 30, 2026ರಂದು ತೆರೆ ಕಂಡಿತು. ಈ ಚಿತ್ರವನ್ನು ಬರಹ ಮತ್ತು ನಿರ್ದೇಶನ ಮಾಡಿದವರು ಜೆ.ಆರ್.ಎಂ., ಎಲ್.ವಿ. ಎಂಟರ್ಟೈನರ್ಸ್ ಮೂಲಕ ನಿರ್ಮಾಣವಾದಂತಹ, ಹಾಗೂ ವಿತರಣೆ ಜಯಣ್ಣ ಫಿಲ್ಮ್ಸ್ ಮೂಲಕ ನಡೆಯುತ್ತಿದೆ. ಚಿತ್ರವನ್ನು ಪ್ರಸ್ತುತಪಡಿಸಿರುವವರು ಲೋಕೇಶ್ ನಾಗಪ್ಪ. ಸಂತೋಷದಿಂದ ತುಂಬಿದ ಸ್ನೇಹಿ ಗುಂಪು, ಪ್ರೇಕ್ಷಕರನ್ನು ನಗುವಿನ ಲೋಕಕ್ಕೆ ಆಹ್ವಾನಿಸುತ್ತಿದೆ. ಇದು ಕೇವಲ ಹಾಸ್ಯವಲ್ಲ, ಬೇರೆಯದೇ ರೀತಿಯ ಕಥೆ ಹೇಳುವ ಧೈರ್ಯವನ್ನು ಪ್ರತಿಬಿಂಬಿಸುತ್ತದೆ.
ಈ ಚಿತ್ರದಲ್ಲಿ ಸುಧಾಕರ್ ಗೌಡ, ಕಾರ್ತಿಕ್ ರುವರಾಯ, ಪಾಯಲ್ ಚೆಂಗಪ್ಪ, ಜೋತಿರಾವ್ ಮೋಹಿತ್ ಮತ್ತು ಗೌರವ ಶೆಟ್ಟಿ ನಟಿಸುತ್ತಿದ್ದಾರೆ. ಇವರ ಕೆಮಿಸ್ಟ್ರಿ ಕಥೆಯನ್ನು ಜೀವಂತಗೊಳಿಸುವ ಶಕ್ತಿ ಎನ್ನಬಹುದು.
ಯಶ್ ಅವರ ಹಾರೈಕೆ
ಕೆ.ಜಿ.ಎಫ್. ಮೂಲಕ ಜಾಗತಿಕ ಖ್ಯಾತಿ ಪಡೆದ ನಟ ಯಶ್, ಈ ಚಿತ್ರದ ತಂಡಕ್ಕೆ ತಮ್ಮ ಬೆಂಬಲವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರು ತಂಡದ ಪ್ರಯಾಣವನ್ನು ಶ್ಲಾಘಿಸಿ, “ಕನಸು ದೊಡ್ಡದಾಗಿರಲಿ, ಧೈರ್ಯ ಕಳೆದುಕೊಳ್ಳಬೇಡಿ” ಎಂದು ಪ್ರೇರಣಾದಾಯಕ ಸಂದೇಶ ನೀಡಿದ್ದಾರೆ. ಅವರ ಮಾತುಗಳು ಕೇವಲ ಈ ಚಿತ್ರಕ್ಕೆ ಮಾತ್ರವಲ್ಲ, ಹೊಸ ಕಲಾವಿದರಿಗೆ ಧೈರ್ಯ ತುಂಬುವಂತಿವೆ.
ಕನ್ನಡ ಸಿನೆಮಾದ ಹೊಸ ಧೈರ್ಯ
“ಅಮೃತ ಅಂಜನ್” ಕೇವಲ ಒಂದು ಸಿನಿಮಾ ಅಲ್ಲ, ಇದು ಕಲಾತ್ಮಕ ಸ್ವಾತಂತ್ರ್ಯದ ಸಂಕೇತ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ, ವಿಭಿನ್ನ ಕಥೆಗಳನ್ನು ಹೇಳುವ ಧೈರ್ಯವನ್ನು ತೋರಿಸುವ ಪ್ರಯತ್ನ. ಕನ್ನಡ ಸಿನೆಮಾ ಈಗ ಹೊಸ ಆಲೋಚನೆಗಳಿಗೆ ತೆರೆದಿದೆ ಎಂಬುದಕ್ಕೆ ಇದು ಸಾಕ್ಷಿ.
ಪ್ರೇಕ್ಷಕರಿಗೆ ಸಂದೇಶ
ಈ ಚಿತ್ರವು ಪ್ರೇಕ್ಷಕರಿಗೆ ಅವರ ಕೆಲಸದ ಒತ್ತಡ ನಡುವೆ , ನಗುವಿನ ಜೊತೆಗೆ ಹೃದಯವನ್ನು ಮುಟ್ಟುವ ಕಥೆಗಳನ್ನು ನೀಡಲಿದೆ. ಹಾಸ್ಯ, ಹೃದಯ ಮತ್ತು ಧೈರ್ಯದ ಸಂಯೋಜನೆಯೊಂದಿಗೆ, ಇದು ಕೇವಲ ಮನರಂಜನೆಗೆ ಮಾತ್ರವಲ್ಲ, ಬದುಕನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ.
ಬಹುತೇಕ ಪ್ರೇಕ್ಷಕರು “ಅಮೃತಾಂಜನ” ಚಿತ್ರವನ್ನು ನೋಡಿ “ಚೆನ್ನಾಗಿದೆ” ಎಂದು ಮೆಚ್ಚಿಕೊಂಡಿದ್ದಾರೆ. ಆದರೆ 10 ಜನರಲ್ಲಿ ಒಂದೆರಡು ಮಂದಿಗೆ ಮಾತ್ರ ಚಿತ್ರದಲ್ಲಿ ವಿಶೇಷತೆ ಕಾಣಿಸಿಲ್ಲ. ಅದನ್ನು ಬಿಟ್ಟರೆ, ಮೊದಲ ದಿನವೇ ಸಿಕ್ಕ ಪ್ರತಿಕ್ರಿಯೆಯಿಂದಲೇ ಈ ಸಿನಿಮಾ ನೋಡುವಂತದ್ದೇ ಎಂಬುದು ಸ್ಪಷ್ಟವಾಗುತ್ತದೆ.