Apr 15, 2026 Languages : ಕನ್ನಡ | English

RCB vs LSG : ಚಿನ್ನಸ್ವಾಮಿಯಲ್ಲಿ ಇವತ್ತು ರನ್ ಮಳೆನಾ ಅಥವಾ ವಿಕೆಟ್ ಪತನನಾ? ಸಂಭಾವ್ಯ 11 ರಲ್ಲಿ ಬದಲಾವಣೆ?

ಐಪಿಎಲ್ 2026ರ 23ನೇ ಪಂದ್ಯಕ್ಕೆ ನಮ್ಮ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಇವತ್ತು ಕಣಕ್ಕಿಳಿಯುತ್ತಿರೋದು ಬಲಿಷ್ಠ ಬ್ಯಾಟಿಂಗ್ ಪವರ್ ಇರೋ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಭರ್ಜರಿ ಬೌಲಿಂಗ್ ಅಟ್ಯಾಕ್ ಇರೋ ಲಕ್ನೋ ಸೂಪರ್ ಜೈಂಟ್ಸ್ (LSG). ಈ ಎರಡು ತಂಡಗಳ ಮುಖಾಮುಖಿ ಅಂದ್ರೆ ಅಲ್ಲಿ ಬರೀ ಕ್ರಿಕೆಟ್ ಇರಲ್ಲ, ಫುಲ್ ಹೈ-ಡ್ರಾಮಾ ಇರುತ್ತೆ.

ಐಪಿಎಲ್ 2026 – 23ನೇ ಪಂದ್ಯ: RCB vs LSG ಹೈ-ಡ್ರಾಮಾ!! | Photo Credit: https://www.cricketnmore.com
ಐಪಿಎಲ್ 2026 – 23ನೇ ಪಂದ್ಯ: RCB vs LSG ಹೈ-ಡ್ರಾಮಾ!! | Photo Credit: https://www.cricketnmore.com

ಈ ಸಲ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಬೆಂಕಿ ಫಾರ್ಮ್‌ನಲ್ಲಿದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ರಜತ್ ಪಾಟಿದಾರ್ ಅವರಂತಹ ಪ್ಲೇಯರ್ಸ್ ಇರೋದ್ರಿಂದ ರನ್ ಮಳೆ ಸುರಿಸೋದು ಪಕ್ಕಾ. ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಸದ್ಯಕ್ಕೆ 3ನೇ ಸ್ಥಾನದಲ್ಲಿದ್ದು, ಇಂದಿನ ಮ್ಯಾಚ್ ಗೆದ್ದರೆ ಮೇಲೆ ಹೋಗೋಕೆ ಚಾನ್ಸ್ ಇದೆ.

ಆದ್ರೆ ಎಲ್‌ಎಸ್‌ಜಿ ಕಥೆಯೇ ಬೇರೆ. ಇವರ ಹತ್ತಿರ ಸ್ಟಾರ್ ಬ್ಯಾಟರ್‌ಗಳ ಕೊರತೆ ಇರಬಹುದು (ರನ್ ರೇಟ್ 7.6 ಅಷ್ಟೇ), ಆದ್ರೆ ಇವರ ಬೌಲಿಂಗ್ ಮಾತ್ರ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತೆ. ಈ ಸೀಸನ್‌ನಲ್ಲಿ ಎಲ್‌ಎಸ್‌ಜಿ ಬೌಲರ್‌ಗಳು ಒಂದು ಸಲನೂ 200 ರನ್ ಬಿಟ್ಟುಕೊಟ್ಟಿಲ್ಲ ಅಂದ್ರೆ ಅವರ ಎಕಾನಮಿ ಎಷ್ಟಿರಬಹುದು ಅಂತ ಯೋಚನೆ ಮಾಡಿ! ಇವರು ಪಾಯಿಂಟ್ಸ್ ಟೇಬಲ್‌ನಲ್ಲಿ 7ನೇ ಸ್ಥಾನದಲ್ಲಿದ್ದರೂ, ಯಾವ ಕ್ಷಣದಲ್ಲೂ ತಿರುಗಿ ಬೀಳೋ ತಾಕತ್ತು ಇವರಲ್ಲಿದೆ.

ಆರ್‌ಸಿಬಿ ಮತ್ತು ಲಕ್ನೋ ಮ್ಯಾಚ್ ಅಂದ ಕೂಡಲೇ ನಮಗೆ ನೆನಪಾಗೋದೇ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಹಳೆಯ ಕಿತ್ತಾಟ. ಮೈದಾನದಲ್ಲಿ ಇವರಿಬ್ಬರ ನಡುವೆ ನಡೆಯೋ ಮಾತಿನ ಚಕಮಕಿ ಅಭಿಮಾನಿಗಳಿಗೆ ಸಖತ್ ಎಂಟರ್ಟೈನ್ಮೆಂಟ್ ಕೊಡುತ್ತೆ. ಇವತ್ತು ಕೂಡ ಮೈದಾನದಲ್ಲಿ ಅಂತಹದ್ದೇ ಏನಾದ್ರೂ ಮಿಂಚು ಹರಿಯುತ್ತಾ ಅನ್ನೋದು ಎಲ್ಲರ ಕುತೂಹಲ.

ಇಂದಿನ ಸಂಭಾವ್ಯ ತಂಡಗಳು (Probable XI):

ಆರ್‌ಸಿಬಿ (RCB): ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ಕ್ಯಾಪ್ಟನ್), ಟಿಮ್ ಡೇವಿಡ್, ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಸುಯಾಶ್ ಶರ್ಮಾ.

ಎಲ್‌ಎಸ್‌ಜಿ (LSG): ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಬ್ ಪಂತ್ (ಕ್ಯಾಪ್ಟನ್), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ದಿಗ್ವೇಶ್ ರಾಠಿ, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್.

ಚಿನ್ನಸ್ವಾಮಿ ಸ್ಟೇಡಿಯಂ ಅಂದ್ರೆ ಅದು ಬ್ಯಾಟರ್‌ಗಳ ಪ್ಯಾರಡೈಸ್! ಇಲ್ಲಿ ಬೌಂಡರಿಗಳು ಹತ್ತಿರ ಇರೋದ್ರಿಂದ ಆರ್‌ಸಿಬಿ ಬ್ಯಾಟಿಂಗ್ ಲೈನ್-ಅಪ್‌ಗೆ ಅಡ್ವಾಂಟೇಜ್ ಜಾಸ್ತಿ. ಆದ್ರೆ ಲಕ್ನೋದ ಬೌಲಿಂಗ್ ಸ್ಮಾರ್ಟ್ ಆಗಿದೆ. ಕೊನೆಗೆ ಯಾರು ಒತ್ತಡವನ್ನ ಚೆನ್ನಾಗಿ ನಿಭಾಯಿಸ್ತಾರೋ ಅವರು ಗೆಲ್ಲೋದು ಗ್ಯಾರಂಟಿ. ಆದ್ರೆ ನಮ್ಮ ಮನಸ್ಸು ಮಾತ್ರ "ಈ ಸಲ ಕಪ್ ನಮ್ದೇ" ಅಂತ ಹೇಳ್ತಿದೆ. ಬೆಂಗಳೂರು ಅಭಿಮಾನಿಗಳ ಸಪೋರ್ಟ್ ಮುಂದೆ ಎಲ್‌ಎಸ್‌ಜಿ ಬೌಲರ್‌ಗಳು ಹೈರಾಣಾಗೋದು ಪಕ್ಕಾ.

ನಿಮ್ಮ ಪ್ರಕಾರ ಇವತ್ತು ಯಾರು ಗೆಲ್ತಾರೆ? ವಿರಾಟ್ ವಿರಾಟರೂಪ ತೋರಿಸ್ತಾರಾ ಅಥವಾ ಪಂತ್ ಪಂಚ್ ಕೊಡ್ತಾರಾ? ಕಮೆಂಟ್ ಮಾಡಿ ತಿಳಿಸಿ!

Latest News