Apr 4, 2026 Languages : ಕನ್ನಡ | English

ಐಪಿಎಲ್ 2026ರ ಮೊದಲ ವಾರದಲ್ಲೇ ಹೈಡ್ರಾಮಾ - ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಕ್ಯಾಪ್ಟನ್ಸಿ ವಾರ್!!

ಐಪಿಎಲ್ 2026 ಶುರುವಾಗಿ ಕೇವಲ ಒಂದು ವಾರ ಕಳೆದಿದೆ. ಅಷ್ಟರಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪಾಳಯದಲ್ಲಿ ದೊಡ್ಡ ಹೈಡ್ರಾಮಾ ಶುರುವಾಗಿದೆ. ಸದ್ಯದ ಮಾಹಿತಿ ಪ್ರಕಾರ, ಕೆಕೆಆರ್ ನಾಯಕತ್ವದಿಂದ ಅಜಿಂಕ್ಯಾ ರಹಾನೆ ಅವರಿಗೆ ಕೊಕ್ ಕೊಟ್ಟು, ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರಿಗೆ ತಂಡದ ಹೊಣೆ ನೀಡಲು ಮ್ಯಾನೇಜ್‌ಮೆಂಟ್ ಪ್ಲಾನ್ ಮಾಡ್ತಿದೆಯಂತೆ!

ಕೆಕೆಆರ್ ನಾಯಕತ್ವಕ್ಕೆ ಅಜಿಂಕ್ಯಾ ರಹಾನೆ ಫಿನಿಶ್
ಕೆಕೆಆರ್ ನಾಯಕತ್ವಕ್ಕೆ ಅಜಿಂಕ್ಯಾ ರಹಾನೆ ಫಿನಿಶ್

ಯಾಕೀ ದಿಢೀರ್ ಬದಲಾವಣೆ?

ವಿಷಯ ಏನಪ್ಪಾ ಅಂದ್ರೆ, ರಹಾನೆ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಶೈಲಿ ಬಗ್ಗೆ ಕೆಕೆಆರ್ ಆಡಳಿತ ಮಂಡಳಿ ಅಷ್ಟಾಗಿ ಖುಷಿಯಾಗಿಲ್ಲ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಹಾನೆ 67 ರನ್ ಸಿಡಿಸಿ ಮಿಂಚಿದ್ದರು ನಿಜ. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ 8 ರನ್ ಬಾರಿಸಿ ಕೈಕೊಟ್ಟರು. ಅಷ್ಟೇ ಅಲ್ಲದೆ, ಈ ಪಂದ್ಯದಲ್ಲಿ ಕೆಕೆಆರ್ ಭಾರಿ ಅಂತರದಿಂದ (65 ರನ್) ಸೋಲನ್ನು ಅನುಭವಿಸಿತು. ರಹಾನೆ ಅವರ ಸ್ಲೋ ಬ್ಯಾಟಿಂಗ್ ಅಥವಾ 'ಸ್ಟ್ರೈಕ್ ರೇಟ್' ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

"ನನ್ನ ಮೇಲೆ ಅಸೂಯೆ ಪಡ್ತಿದ್ದಾರೆ" ಅಂತ ಗರಂ ಆದ ರಹಾನೆ!

ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಕೇಳಿದ ಪ್ರಶ್ನೆಗೆ ರಹಾನೆ ಸಖತ್ ಖಾರವಾಗಿಯೇ ಉತ್ತರ ಕೊಟ್ಟಿದ್ದಾರೆ. "ನನ್ನ ಆಟದ ಬಗ್ಗೆ ಮಾತನಾಡುವವರು ಬಹುಶಃ ಮ್ಯಾಚ್ ನೋಡಿಲ್ಲ ಅನ್ಸುತ್ತೆ. ನನ್ನ ಸಾಧನೆ ನೋಡಿ ಕೆಲವರು ಅಸೂಯೆ ಪಡ್ತಿದ್ದಾರೆ, ಅದಕ್ಕೆ ಹೀಗೆಲ್ಲಾ ಅಪಪ್ರಚಾರ ಮಾಡ್ತಿದ್ದಾರೆ" ಅಂತ ರಹಾನೆ ಗುಡುಗಿದ್ದಾರೆ.

ಆದರೆ ಅಂಕಿಅಂಶಗಳನ್ನ ನೋಡಿದರೆ ರಹಾನೆ ಅವರ ವಾದ ಅಷ್ಟಾಗಿ ಸರಿ ಅನಿಸಲ್ಲ. 2023 ರಿಂದ ಅವರ ಸ್ಟ್ರೈಕ್ ರೇಟ್ ಕೇವಲ 147.78 ಇದೆ. ಐಪಿಎಲ್‌ನ ಟಾಪ್ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ ಅವರು 65ನೇ ಸ್ಥಾನದಲ್ಲಿದ್ದಾರೆ! ಅಂದರೆ ಇವರಿಗಿಂತ ವೇಗವಾಗಿ ರನ್ ಗಳಿಸುವ 57ಕ್ಕೂ ಹೆಚ್ಚು ಆಟಗಾರರು ಲೀಗ್‌ನಲ್ಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಈ ವೇಗ ಸಾಲದು ಅನ್ನೋದು ಮ್ಯಾನೇಜ್‌ಮೆಂಟ್ ವಾದ.

ರಿಂಕು ಸಿಂಗ್ ಕೈಗೆ ಲಕ್?

ರಹಾನೆ ಮೊದಲ ಪಂದ್ಯದ ವೇಳೆ ಗಾಯಗೊಂಡು ಹೊರಗುಳಿದಾಗ ಉಪನಾಯಕ ರಿಂಕು ಸಿಂಗ್ ತಂಡವನ್ನು ಮುನ್ನಡೆಸಿದ್ದರು. ರಿಂಕುಗೆ ಕ್ಯಾಪ್ಟನ್ಸಿ ಅನುಭವ ಇಲ್ಲದಿದ್ದರೂ, ಕೆಕೆಆರ್ ತಂಡಕ್ಕೆ ಅವರ ಮೇಲೆ ಭಾರಿ ನಂಬಿಕೆ ಇದೆ. ಫಿನಿಶರ್ ಆಗಿ ಮಿಂಚಿರೋ ರಿಂಕು, ಈಗ ನಾಯಕನಾಗಿ ಬಡ್ತಿ ಪಡೆಯೋ ಸಾಧ್ಯತೆ ದಟ್ಟವಾಗಿದೆ.

ಫ್ಯಾನ್ಸ್ ಏನಂತಾರೆ?

"ರಿಂಕು ಸಿಂಗ್ ಕೆಕೆಆರ್ ತಂಡದ ಎಮೋಷನ್, ಅವರಿಗೇ ನಾಯಕತ್ವ ಕೊಡಿ" ಅಂತ ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ, ಸೀಸನ್ ಮಧ್ಯದಲ್ಲಿ ನಾಯಕನನ್ನು ಬದಲಿಸುವುದು ತಂಡದ ಮೇಲೆ ಎಫೆಕ್ಟ್ ಬೀರಬಹುದು ಅನ್ನೋ ಆತಂಕವೂ ಇದೆ.

ಕೆಕೆಆರ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮಾತ್ರ ಪಕ್ಕಾ. ಮುಂದಿನ ಪಂದ್ಯಕ್ಕೆ ಕೆಕೆಆರ್ ಟಾಸ್ ಹಾಕೋಕೆ ರಹಾನೆ ಬರ್ತಾರಾ ಅಥವಾ 'ಲಾರ್ಡ್' ರಿಂಕು ಸಿಂಗ್ ಬರ್ತಾರಾ ಅನ್ನೋದನ್ನು ಕಾದು ನೋಡಬೇಕು.