Jan 25, 2026 Languages : ಕನ್ನಡ | English

ಕೊಲ್ಲೂರು ದೇವಳದ ಹೆಸರಲ್ಲಿ ನಕಲಿ ವೆಬ್‌ಸೈಟ್ - ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ

ಉಡುಪಿ ಜಿಲ್ಲೆಯ ಕೊಲ್ಲೂರು ದೇವಳದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ನಿರ್ಮಿಸಿ ಭಕ್ತರನ್ನು ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಕೊಲ್ಲೂರು ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ರಾಜಸ್ಥಾನದ ತಿಜಾರಿ ಜಿಲ್ಲೆಯ ನಾಸಿರ್ ಹುಸೇನ್ ಎಂಬ ಆರೋಪಿ ಬಂಧನಕ್ಕೊಳಗಾಗಿದ್ದಾನೆ.

ಭಕ್ತರಿಗೆ ನಕಲಿ ರಶೀದಿ – ಕೊಲ್ಲೂರು ದೇವಳ ವಂಚನೆ ಪ್ರಕರಣದಲ್ಲಿ ಆರೋಪಿ ಸರೆ
ಭಕ್ತರಿಗೆ ನಕಲಿ ರಶೀದಿ – ಕೊಲ್ಲೂರು ದೇವಳ ವಂಚನೆ ಪ್ರಕರಣದಲ್ಲಿ ಆರೋಪಿ ಸರೆ

ನಾಸಿರ್ ಹುಸೇನ್, ಕೊಲ್ಲೂರು ದೇವಳದ ಅಧಿಕೃತ ವೆಬ್‌ಸೈಟ್‌ನಂತೆ ಕಾಣುವ ನಕಲಿ ಸೈಟ್ ನಿರ್ಮಿಸಿ, ಭಕ್ತರಿಂದ ಮುಂಗಡವಾಗಿ ರೂಮ್‌ ಬುಕಿಂಗ್ ಮಾಡಿಸಿಕೊಳ್ಳುತ್ತಿದ್ದ. ಹಣವನ್ನು ಪಡೆದು ನಕಲಿ ರಶೀದಿ ನೀಡುವ ಮೂಲಕ ಭಕ್ತರನ್ನು ವಂಚಿಸುತ್ತಿದ್ದ ಆರೋಪಿಯ ವಿರುದ್ಧ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಯಿತು.

ಅಧಿಕೃತ ವೆಬ್‌ಸೈಟ್‌ನ ವಿನ್ಯಾಸವನ್ನು ಹೋಲುವ ರೀತಿಯಲ್ಲಿ ನಕಲಿ ಸೈಟ್ ನಿರ್ಮಿಸಿದ್ದರಿಂದ, ಭಕ್ತರು ನಿಜವಾದ ಸೈಟ್ ಎಂದು ನಂಬಿ ಹಣ ಪಾವತಿಸುತ್ತಿದ್ದರು. ಈ ಮೂಲಕ ಅನೇಕರು ವಂಚನೆಗೆ ಒಳಗಾಗಿದ್ದರು. ಕೊಲ್ಲೂರು ದೇವಳದ ಹೆಸರಿನಲ್ಲಿ ನಡೆದ ಈ ಸೈಬರ್ ವಂಚನೆ ಪ್ರಕರಣವು ಭಕ್ತರಲ್ಲಿ ಆತಂಕವನ್ನು ಉಂಟುಮಾಡಿತ್ತು.

ರಾಜಸ್ಥಾನದ ತಜಾರಿ ಜಿಲ್ಲೆ ಸೈಬರ್ ಆರೋಪಿಗಳ ಹಬ್ ಎಂದು ಗುರುತಿಸಲ್ಪಟ್ಟಿದ್ದು, ಅಲ್ಲಿಂದಲೇ ನಾಸಿರ್ ಹುಸೇನ್ ಕಾರ್ಯಾಚರಣೆ ನಡೆಸುತ್ತಿದ್ದ. ಸ್ಥಳೀಯ ಪೊಲೀಸರ ನೆರವಿನಿಂದ ಉಡುಪಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಕೊಲ್ಲೂರು ಪೊಲೀಸರ ತ್ವರಿತ ಕಾರ್ಯಾಚರಣೆಗೆ ಭಕ್ತರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇವಳದ ಹೆಸರಿನಲ್ಲಿ ನಡೆದ ವಂಚನೆ ಪ್ರಕರಣವನ್ನು ತಡೆಗಟ್ಟಿದ ಕ್ರಮವು ಸೈಬರ್ ಅಪರಾಧಗಳ ವಿರುದ್ಧ ಕಠಿಣ ನಿಲುವು ತೋರಿಸಿದೆ.

ಈ ಪ್ರಕರಣವು ಸೈಬರ್ ಸುರಕ್ಷತೆಯ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ. ಭಕ್ತರು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಬೇಕು ಹಾಗೂ ನಕಲಿ ಸೈಟ್‌ಗಳಿಗೆ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶವನ್ನು ಪೊಲೀಸರು ನೀಡಿದ್ದಾರೆ. 

Latest News