ಕೊಪ್ಪಳದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಚರ್ಚೆಗೆ ಬಾರಿ ಕಾರಣವಾಗಿದೆ. ಕಿಮ್ಸ್ ಆಡಳಿತಾಧಿಕಾರಿ ಬಿ. ಕಲ್ಲೇಶ್ ಅವರ ಮನೆ ಹಾಗೂ ಕಾಲೇಜು ಸೇರಿ ಆರು ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಹೌದು, ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿರುವ ಮನೆ ಹಾಗೂ ಕಾಲೇಜು ಸೇರಿ ಆರು ಕಡೆ ದಾಳಿ ನಡೆದಿದ್ದು, ಸುಮಾರು 30 ಜನರ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ. ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲಿಸಲಾಗಿದೆ.
ಬಿ. ಕಲ್ಲೇಶ್ ಹಿಂದೆ ವಾಲ್ಮೀಕಿ ಹಗರಣದಲ್ಲಿ ಸುದ್ದಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ಇಡಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರಿಂದ ವಿವಾದಕ್ಕೆ ಕಾರಣವಾಗಿದ್ದರು. ಈ ಪ್ರಕರಣದ ನಂತರ ಕಲ್ಲೇಶ್ ಅಮಾನತ್ತಾಗಿದ್ದರು. ಈಗ ಮತ್ತೆ ಲೋಕಾಯುಕ್ತ ದಾಳಿಯಿಂದ ಅವರ ಹೆಸರು ಸುದ್ದಿಯಲ್ಲಿದೆ.
ಸ್ಥಳೀಯರು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಈ ದಾಳಿ ಕುತೂಹಲ ಮೂಡಿಸಿದೆ. “ಆಡಳಿತಾಧಿಕಾರಿಗಳೇ ನಿಯಮ ಉಲ್ಲಂಘಿಸಿದರೆ ಜನರಿಗೆ ಯಾವ ಸಂದೇಶ?” ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಲೋಕಾಯುಕ್ತ ಅಧಿಕಾರಿಗಳು ದಾಳಿಯ ವೇಳೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ತನಿಖೆ ತೀವ್ರಗೊಳ್ಳಲಿದೆ. ಕಲ್ಲೇಶ್ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿರುವುದರಿಂದ ಪ್ರಕರಣದ ಗಂಭೀರತೆ ಇನ್ನಷ್ಟು ಹೆಚ್ಚಾಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ, ಕೊಪ್ಪಳದಲ್ಲಿ ನಡೆದ ಈ ದಾಳಿ ಕೇವಲ ಒಂದು ಆಡಳಿತಾಧಿಕಾರಿಯ ವಿರುದ್ಧದ ಕ್ರಮವಲ್ಲ, ಸಾರ್ವಜನಿಕರಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಜನರು “ನ್ಯಾಯ ಸಿಗಬೇಕು, ತಪ್ಪು ಮಾಡಿದರೆ ಯಾರೇ ಆಗಿರಲಿ ಕ್ರಮ ಕೈಗೊಳ್ಳಬೇಕು” ಎಂಬ ನಿಲುವಿಗೆ ನಿಂತಿದ್ದಾರೆ.