ಮೊದಲ ಸಂಪುಟ ಸಭೆಯಲ್ಲೇ ಸಿಎಂ ಡಿ.ಕೆ. ಶಿವಕುಮಾರ್ ಸಿಕ್ಸರ್ - ರಾಜ್ಯದ ಜನತೆಗೆ ಸಿಕ್ಕ 6 ಬಂಪರ್ ಗಿಫ್ಟ್‌ಗಳು ಇಲ್ಲಿವೆ!!

ರಾಜ್ಯದಲ್ಲಿ 'ಯುವ ಯುಗ' ಆರಂಭಿಸುವುದಾಗಿ ಭರವಸೆ ನೀಡಿದ್ದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಭರ್ಜರಿ ಬ್ಯಾಟಿಂಗ್ ಆರಂಭಿಸಿದ್ದಾರೆ. ತಮ್ಮ ಮೊದಲ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯಲ್ಲೇ ಯುವಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಕೇಂದ್ರೀಕರಿಸಿ ಬರೋಬ್ಬರಿ 6 ಪ್ರಮುಖ ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಸಿಎಂ ಆಗಿ ಅಧಿಕಾರ ವಹಿಸುತ್ತಲೇ ಡಿ.ಕೆ. ಶಿವಕುಮಾರ್ ಭರ್ಜರಿ ಬ್ಯಾಟಿಂಗ್
ಸಿಎಂ ಆಗಿ ಅಧಿಕಾರ ವಹಿಸುತ್ತಲೇ ಡಿ.ಕೆ. ಶಿವಕುಮಾರ್ ಭರ್ಜರಿ ಬ್ಯಾಟಿಂಗ್

1. ಶಾಲಾ ಬಾಲಕರಿಗೂ ಇನ್ಮುಂದೆ ಬಸ್‌ ಪ್ರಯಾಣ ಸೌಲಭ್ಯ ಉಚಿತ!

ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ 'ಶಕ್ತಿ' ಯೋಜನೆಯಿಂದಾಗಿ ಹೆಣ್ಣುಮಕ್ಕಳು ಹಾಗೂ ವಿದ್ಯಾರ್ಥಿನಿಯರು ಸರ್ಕಾರಿ ಬಸ್‌ಗಳಲ್ಲಿ ಫ್ರೀಯಾಗಿ ಓಡಾಡುತ್ತಿದ್ದಾರೆ. ಆದರೆ, ಶಾಲಾ-ಕಾಲೇಜು ಹುಡುಗರು ಮಾತ್ರ ದುಡ್ಡು ಕೊಟ್ಟು ಬಸ್ ಪಾಸ್ ಖರೀದಿಸಬೇಕಿತ್ತು. ಇನ್ಮುಂದೆ ಆ ತಾರತಮ್ಯ ಇರಲ್ಲ! ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಸರ್ಕಾರ ಈಗ ಬಾಲಕರಿಗೂ ವಿಸ್ತರಿಸಿದೆ. ಇದರಿಂದ ರಾಜ್ಯದ ಸುಮಾರು 10 ಲಕ್ಷ ವಿದ್ಯಾರ್ಥಿಗಳಿಗೆ ನೇರ ಅನುಕೂಲವಾಗಲಿದ್ದು, ಇದಕ್ಕಾಗಿ ಸರ್ಕಾರ 1,700 ಕೋಟಿ ರೂಪಾಯಿ ಖರ್ಚು ಮಾಡಲಿದೆ.

2. 10,000 'ಭಾರತ್ ಜೋಡೋ ಯುವ ಸಂಘ'ಗಳ ರಚನೆ

ಯುವ ಜನರಲ್ಲಿ ಲೀಡರ್‌ಶಿಪ್ ಕ್ವಾಲಿಟಿ ಬೆಳೆಸಲು, ಅವರನ್ನ ಕ್ರೀಡೆ ಹಾಗೂ ಕಲ್ಚರಲ್ ಆಕ್ಟಿವಿಟಿಗಳಲ್ಲಿ ತೊಡಗಿಸಲು ರಾಜ್ಯಾದ್ಯಂತ 'ಭಾರತ್ ಜೋಡೋ ಯುವ ಸಂಘ'ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 150 ರಿಂದ 200 ಯುವಕರನ್ನು ಒಳಗೊಂಡ ಒಂದು ಸಂಘದಂತೆ, ಒಟ್ಟು 10 ಸಾವಿರ ಸಂಘಗಳನ್ನು ರಚಿಸುವ ಟಾರ್ಗೆಟ್ ಇಟ್ಟುಕೊಳ್ಳಲಾಗಿದೆ. ವಿಶೇಷ ಅಂದ್ರೆ, ಪ್ರತಿ ಯುವ ಸಂಘಕ್ಕೆ ಸರ್ಕಾರವೇ ತಲಾ 10 ಲಕ್ಷ ರೂಪಾಯಿ ಫಂಡ್ ನೀಡಲಿದ್ದು, ಇದಕ್ಕಾಗಿ ಒಟ್ಟು 1,000 ಕೋಟಿ ರೂಪಾಯಿ ಬಜೆಟ್ ಮೀಸಲಿಡಲಾಗಿದೆ.

3. 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!

ನಿರುದ್ಯೋಗಿಗಳಿಗೆ ಸಿಎಂ ಬಿಗ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಅನುಮೋದನೆ ನೀಡಿದ್ದ 56,432 ಖಾಲಿ ಹುದ್ದೆಗಳ ನೇಮಕಾತಿಗೆ ಇದ್ದ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದೆ. ಮುಂದಿನ ಕ್ಯಾಬಿನೆಟ್ ಮೀಟಿಂಗ್ ಒಳಗಾಗಿ ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಕಂಪ್ಲೀಟ್ ಟೈಮ್‌ಟೇಬಲ್ (ವೇಳಾಪಟ್ಟಿ) ರೆಡಿ ಮಾಡಿ ಪ್ರಕಟಿಸುವಂತೆ ಅಧಿಕಾರಿಗಳಿಗೆ ಖಡಕ್ ಆರ್ಡರ್ ಜಾರಿ ಮಾಡಿದ್ದಾರೆ.

4. ಹೈಟೆಕ್ 'ಉದ್ಯೋಗ ವಿನಿಮಯ ಕೇಂದ್ರ' ಸ್ಥಾಪನೆ

ಖಾಸಗಿ ಕಂಪನಿಗಳ ಡಿಮ್ಯಾಂಡ್‌ಗೆ ತಕ್ಕಂತೆ ನಮ್ಮ ರಾಜ್ಯದ ಯುವಕರಿಗೆ ಸ್ಕಿಲ್ ಟ್ರೈನಿಂಗ್ ಕೊಟ್ಟು ಕೆಲಸ ಕೊಡಿಸಲು ಸರ್ಕಾರಿ ಪ್ರಾಯೋಜಿತ 'ಉದ್ಯೋಗ ವಿನಿಮಯ ಕೇಂದ್ರ'ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಯೋಜನೆಯನ್ನು ಸೂಪರ್‌ ಆಗಿ ಪ್ಲಾನ್ ಮಾಡಲು ಮೂವರು ಸಚಿವರ ಟೀಮ್ ಮಾಡಲಾಗಿದ್ದು, ಇವರು ದೊಡ್ಡ ದೊಡ್ಡ ಉದ್ಯಮಿಗಳು, ಕಾಲೇಜುಗಳು ಮತ್ತು ಎಕ್ಸ್‌ಪರ್ಟ್‌ಗಳ ಜೊತೆ ಮೀಟಿಂಗ್ ನಡೆಸಿ ಶೀಘ್ರದಲ್ಲೇ ಹೊಸ ರೂಪುರೇಷೆ ಸಿದ್ಧಪಡಿಸಲಿದ್ದಾರೆ.

5. ಕರೆಂಟ್, ನೀರು ಕನೆಕ್ಷನ್‌ಗೆ ಒಸಿ-ಸಿಸಿ ವಿನಾಯ್ತಿ ರಾಜ್ಯಾದ್ಯಂತ ಫಿಕ್ಸ್!

ಈ ಹಿಂದೆ ಬೆಂಗಳೂರಿನಲ್ಲಿ ಮಾತ್ರ ಇದ್ದ ನಿಯಮವೊಂದನ್ನು ಈಗ ಇಡೀ ರಾಜ್ಯಕ್ಕೆ ಅಪ್ಲೈ ಮಾಡಲಾಗಿದೆ. 2026ರ ಮೇ 31ರ ಒಳಗಾಗಿ 2,500 ಚದರ ಅಡಿ ವಿಸ್ತೀರ್ಣದ ಸೈಟ್‌ನಲ್ಲಿ ನಿರ್ಮಾಣವಾಗಿರುವ 3 ಅಂತಸ್ತಿನವರೆಗಿನ ಬಿಲ್ಡಿಂಗ್‌ಗಳಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್ (CC) ಇಲ್ಲದಿದ್ದರೂ ಸಹ ಯಾವುದೇ ಟೆನ್ಷನ್ ಇಲ್ಲದೆ ವಿದ್ಯುತ್ ಮತ್ತು ನೀರಿನ ಕನೆಕ್ಷನ್ ಕೊಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

6. ರಾಜ್ಯದ ಎಲ್ಲಾ 'ಬಿ ಖಾತಾ' ಆಸ್ತಿಗಳು ಇನ್ಮುಂದೆ 'ಎ ಖಾತಾ'!

ಮನೆ, ಸೈಟ್ ಹೊಂದಿರುವ ಸಾರ್ವಜನಿಕರಿಗೆ ಇದೊಂದು ಬಿಗ್ ರಿಲೀಫ್. ಬೆಂಗಳೂರಿನಲ್ಲಿ ಮಾತ್ರ ಪ್ಲಾನ್ ಮಾಡಲಾಗಿದ್ದ 'ಬಿ ಖಾತಾ' ಆಸ್ತಿಗಳನ್ನು 'ಎ ಖಾತಾ' ಮಾಡುವ ಪ್ರಕ್ರಿಯೆಯನ್ನು ಈಗ ಇಡೀ ಕರ್ನಾಟಕಕ್ಕೆ ವಿಸ್ತರಿಸಲಾಗಿದೆ. ರಾಜ್ಯದ ಹಳ್ಳಿಗಳ ಗ್ರಾಮ ಪಂಚಾಯಿತಿಯಿಂದ ಹಿಡಿದು ಮಹಾನಗರ ಪಾಲಿಕೆಗಳವರೆಗಿನ ಎಲ್ಲಾ ಬಿ ಖಾತಾ ಆಸ್ತಿಗಳಿಗೆ ಪ್ರಾಪರ್ ಡಾಕ್ಯುಮೆಂಟ್ಸ್ ಇದ್ದರೆ ಎ ಖಾತಾ ನೀಡಲಾಗುತ್ತದೆ. ಇದರಿಂದ ದಾಖಲೆಗಳ ಸಮಸ್ಯೆಯಿಂದ ಲೋನ್ ಸಿಗದೆ ಒದ್ದಾಡುತ್ತಿದ್ದ ಲಕ್ಷಾಂತರ ಭೂಮಾಲೀಕರ ತಲೆನೋವು ಶಾಶ್ವತವಾಗಿ ದೂರಾಗಲಿದೆ.

Latest News