May 9, 2026 Languages : ಕನ್ನಡ | English

ರೀಲ್ಸ್ ರಾಣಿಯ ಆಸೆಗೆ ಬಲಿಯಾದನೇ ಅಮಾಯಕ ಪ್ರೇಮಿ? ಶ್ರೀಗಂಧನಗರದ ಲಿವಿಂಗ್ ರಿಲೇಶನ್‌ಶಿಪ್‌ನ ಭೀಕರ ಅಂತ್ಯ!!

ಬೆಂಗಳೂರಿನಲ್ಲಿ ಇತ್ತೀಚೆಗೆ ವಿಚಿತ್ರ ಹಾಗೂ ದುರಂತಮಯ ಘಟನೆಗಳು ನಡೆಯುತ್ತಲೇ ಇವೆ. ಪ್ರೀತಿ, ಪ್ರೇಮ ಅಂತ ಬಂದಾಗ ಮನುಷ್ಯ ಎಷ್ಟು ಕುರುಡಾಗುತ್ತಾನೆ ಅನ್ನೋದಕ್ಕೆ ಈಗ ಶ್ರೀಗಂಧನಗರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇನ್‌ಸ್ಟಾಗ್ರಾಮ್ ರೀಲ್ಸ್ ಹುಚ್ಚು ಮತ್ತು ಲಿವಿಂಗ್ ರಿಲೇಶನ್‌ಶಿಪ್ ಒಬ್ಬ ಯುವಕನ ಪ್ರಾಣವನ್ನೇ ಬಲಿಪಡೆದಿದೆ.

ಬಾಡಿಗೆ ಮನೆಯಲ್ಲಿ ನಡೆದ 'ಗಂಡ-ಹೆಂಡತಿ' ನಾಟಕಕ್ಕೆ ಬಿತ್ತು ದೊಡ್ಡ ಬ್ರೇಕ್
ಬಾಡಿಗೆ ಮನೆಯಲ್ಲಿ ನಡೆದ 'ಗಂಡ-ಹೆಂಡತಿ' ನಾಟಕಕ್ಕೆ ಬಿತ್ತು ದೊಡ್ಡ ಬ್ರೇಕ್

ಯಾರು ಈ ತಿಪ್ಪೇಸ್ವಾಮಿ? ಏನಿದು ಲವ್ ಸ್ಟೋರಿ?

ಮೃತ ಯುವಕನ ಹೆಸರು ತಿಪ್ಪೇಸ್ವಾಮಿ (28). ಈತ ಮೂಲತಃ ಚಿತ್ರದುರ್ಗದವನು. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಈತನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ದಾವಣಗೆರೆ ಮೂಲದ ಒಬ್ಬ ಮಹಿಳೆಯ ಪರಿಚಯವಾಗಿತ್ತು. ಆಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ರೀಲ್ಸ್ ಮಾಡಿಕೊಂಡಿದ್ದಳು.

ಇವರಿಬ್ಬರೂ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪರಿಚಯ ಪ್ರೇಮಕ್ಕೆ ತಿರುಗಿ, ಕೊನೆಗೆ "ಒಟ್ಟಿಗೆ ಇರೋಣ" ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಕಳೆದ ಎರಡು ತಿಂಗಳಿಂದ ಇವರು ಬೆಂಗಳೂರಿನ ಶ್ರೀಗಂಧನಗರದಲ್ಲಿ ಒಂದು ಮನೆ ಬಾಡಿಗೆಗೆ ಪಡೆದು ಲಿವಿಂಗ್ ರಿಲೇಶನ್‌ಶಿಪ್ನಲ್ಲಿದ್ದರು.

ಪತಿ, ಮಕ್ಕಳನ್ನು ಬಿಟ್ಟು ಬಂದಿದ್ದ ಮಹಿಳೆ!

ಇಲ್ಲಿ ಚಕಿತಗೊಳಿಸುವ ವಿಷಯ ಅಂದ್ರೆ, ತಿಪ್ಪೇಸ್ವಾಮಿ ಜೊತೆ ಇದ್ದ ಈ ಮಹಿಳೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೆ ರೀಲ್ಸ್ ಮತ್ತು ಈ ಹೊಸ ಪ್ರೀತಿಯ ಅಮಲಿನಲ್ಲಿ ಆಕೆ ತನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ತಿಪ್ಪೇಸ್ವಾಮಿ ಜೊತೆ ಬೆಂಗಳೂರಿಗೆ ಓಡಿ ಬಂದಿದ್ದಳು.

ಬಾಡಿಗೆ ಮನೆ ಪಡೆಯುವಾಗ ಮಾಲೀಕರಿಗೆ ನಾವು "ಗಂಡ-ಹೆಂಡತಿ" ಅಂತ ಸುಳ್ಳು ಹೇಳಿ ನಂಬಿಸಿದ್ದರು. ತಿಂಗಳಿಗೆ 3,000 ರೂಪಾಯಿ ಬಾಡಿಗೆ ಕಟ್ಟುತ್ತಾ ಇಬ್ಬರೂ ಸಂಸಾರ ನಡೆಸುತ್ತಿದ್ದರು. ಆದರೆ ಈ ಸುಖದ ಸಂಸಾರ ಹೆಚ್ಚು ದಿನ ಉಳಿಯಲಿಲ್ಲ.

"ನನ್ನ ಮೇಂಟೇನ್ ಮಾಡಲು ನಿನ್ನಿಂದ ಆಗಲ್ಲ!"

ಕೆಲವು ದಿನಗಳ ನಂತರ ಇವರಿಬ್ಬರ ನಡುವೆ ಜಗಳ ಶುರುವಾಗಿದೆ. ರೀಲ್ಸ್ ಮಾಡುವ ಆ ಮಹಿಳೆಯ ಆಸೆಗಳು ಮತ್ತು ಲೈಫ್‌ಸ್ಟೈಲ್ ತಿಪ್ಪೇಸ್ವಾಮಿಯ ಕೈ ಮೀರಿತ್ತು. "ನನ್ನ ಮೇಂಟೇನ್ ಮಾಡೋಕೆ ನಿನ್ನ ಕೈಯಲ್ಲಿ ಆಗಲ್ಲ, ಸುಮ್ಮನೆ ನನ್ನ ಬಿಟ್ಟು ಹೋಗು" ಅಂತ ಆಕೆ ತಿಪ್ಪೇಸ್ವಾಮಿಗೆ ಪದೇ ಪದೇ ಕಿರುಕುಳ ಕೊಡಲು ಶುರು ಮಾಡಿದ್ದಳಂತೆ.

ಯಾರನ್ನು ನಂಬಿ ತನ್ನ ಜೀವನವನ್ನೇ ಆಕೆಗೆ ಮುಡಿಪಾಗಿಟ್ಟಿದ್ದನೋ, ಅದೇ ಮಹಿಳೆ ಈಗ ತನ್ನನ್ನು ಕಡೆಗಣಿಸುತ್ತಿರೋದನ್ನು ಕಂಡು ತಿಪ್ಪೇಸ್ವಾಮಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಆಕೆ ನೀಡುತ್ತಿದ್ದ ಮಾನಸಿಕ ಹಿಂಸೆ ತಾಳಲಾರದೆ, ಕೊನೆಗೆ ತಾನು ವಾಸವಿದ್ದ ಮನೆಯ ರೂಂನಲ್ಲಿ ಫ್ಯಾನ್‌ಗೆ ನೇ*ಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಾಪತ್ತೆಯಾದ ಮಹಿಳೆ: ಪೊಲೀಸರ ಶೋಧ

ತಿಪ್ಪೇಸ್ವಾಮಿ ಹೆ*ಣವಾಗುತ್ತಿದ್ದಂತೆಯೇ ಆ ಮಹಿಳೆ ಅಲ್ಲಿಂದ ಪರಾರಿಯಾಗಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಬಂದ ರಾಜಗೋಪಾಲನಗರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಿಪ್ಪೇಸ್ವಾಮಿ ಕುಟುಂಬದವರು ಆ ಮಹಿಳೆಯೇ ಈ ಸಾವಿಗೆ ಕಾರಣ ಎಂದು ಠಾಣೆಯಲ್ಲಿ ದೂರು ನೀಡಿದ್ದಾರೆ.

ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆ "ರೀಲ್ಸ್ ರಾಣಿ"ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Latest News