ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ಬಾಲಿವುಡ್ನಿಂದ ಟಾಲಿವುಡ್ವರೆಗೆ ಮಿಂಚುತ್ತಿರಬಹುದು. ಆದರೆ, ಈ ಮಟ್ಟಕ್ಕೆ ಬೆಳೆಯಲು ಅವರಿಗೆ ಸ್ಫೂರ್ತಿಯಾಗಿದ್ದು ನಮ್ಮ ಕರುನಾಡಿನ ಹೆಮ್ಮೆ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್! ಹೌದು, ಅಂಜನಿಪುತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ಅಪ್ಪು ಅವರು ಹೇಳಿದ ಆ ಒಂದು ಮಾತು ರಶ್ಮಿಕಾ ಬದುಕನ್ನೇ ಬದಲಿಸಿದೆಯಂತೆ. ಆ ಸೀಕ್ರೆಟ್ ಏನು ಅಂತ ರಶ್ಮಿಕಾ ಈಗ ಮನಬಿಚ್ಚಿ ಹೇಳಿಕೊಂಡಿದ್ದಾರೆ.
ಪರಭಾಷೆಗೆ ಹೋಗಲು ರಶ್ಮಿಕಾಗೆ ಭಯವಿತ್ತೇ?
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ರಶ್ಮಿಕಾಗೆ ಆರಂಭದಲ್ಲಿ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸೋಕೆ ಸಖತ್ ಭಯ ಇತ್ತಂತೆ. ಬೇರೆ ಭಾಷೆಯಿಂದ ಆಫರ್ ಬಂದಾಗ, "ನನಗೆ ಆ ಭಾಷೆ ಬರುತ್ತಾ? ಅಲ್ಲಿ ನಾನು ಅಡ್ಜಸ್ಟ್ ಆಗ್ತೀನಾ? ಜನ ನನ್ನ ಒಪ್ಕೊತಾರಾ?" ಅಂತ ತುಂಬಾನೇ ತಲೆ ಕೆಡಿಸಿಕೊಂಡಿದ್ದರಂತೆ. ಆ ಸಮಯದಲ್ಲಿ ರಶ್ಮಿಕಾ ನಟಿಸುತ್ತಿದ್ದ ಸಿನಿಮಾ 'ಅಂಜನಿಪುತ್ರ'.
ಧೈರ್ಯ ತುಂಬಿದ ಅಪ್ಪು
ಶೂಟಿಂಗ್ ಬಿಡುವಿನ ವೇಳೆಯಲ್ಲಿ ರಶ್ಮಿಕಾ ತಮಗಿದ್ದ ಈ ಗೊಂದಲವನ್ನ ಪುನೀತ್ ರಾಜ್ಕುಮಾರ್ ಅವರ ಹತ್ತಿರ ಹೇಳಿಕೊಂಡಿದ್ದರು. ಆಗ ಅಪ್ಪು ಅವರು ರಶ್ಮಿಕಾಗೆ ನೀಡಿದ ಧೈರ್ಯವೇ ಇಂದು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. "ಪುನೀತ್ ಸರ್ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ. ನನಗೆ ನನ್ನ ಮೇಲೆಯೇ ನಂಬಿಕೆ ಇರಲಿಲ್ಲ, ಆದರೆ ನನ್ನ ಕೆಪಾಸಿಟಿ ಬಗ್ಗೆ ಅವರಿಗೆ ನಂಬಿಕೆ ಇತ್ತು" ಅಂತ ರಶ್ಮಿಕಾ ನೆನಪಿಸಿಕೊಂಡಿದ್ದಾರೆ.
ರಶ್ಮಿಕಾ ಅಪ್ಪು ಅವರ ಬಳಿ ತಮ್ಮ ನರ್ವಸ್ನೆಸ್ ಬಗ್ಗೆ ಹೇಳಿದಾಗ, ಅಪ್ಪು ಅವರು ಬೆನ್ನು ತಟ್ಟಿ ಹೀಗೆ ಹೇಳಿದ್ದರಂತೆ:
"ನಿಮ್ಮಲ್ಲಿರೋ ಟ್ಯಾಲೆಂಟ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲ. ಜಸ್ಟ್ ಫೋಕಸ್ ಮಾಡಿ ಮುನ್ನುಗ್ಗಿ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಇಡೀ ಜಗತ್ತನ್ನೇ ಗೆಲ್ಲಬಹುದು, ಏನನ್ನಾದರೂ ಸಾಧಿಸಬಹುದು."
ಅಪ್ಪು ನೆನೆದು ಭಾವುಕರಾದ ರಶ್ಮಿಕಾ
ಅಂದು ಪುನೀತ್ ಸರ್ ಕೊಟ್ಟ ಆ ಸ್ಫೂರ್ತಿ ಮತ್ತು ಧೈರ್ಯದ ಮಾತುಗಳೇ ಇಂದಿಗೂ ರಶ್ಮಿಕಾಗೆ ಇನ್ಸ್ಪಿರೇಷನ್ ಅಂತೆ. "ಅಂದು ಅಪ್ಪು ಸರ್ ನೀಡಿದ ಆ ಸಣ್ಣ ಪುಶ್ ಇಂದಾಗಿ ನಾನು ಇವತ್ತು ಧೈರ್ಯವಾಗಿ ಬೇರೆ ಭಾಷೆಯ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿದ್ದೇನೆ. ನನ್ನನ್ನ ಅಪ್ಪು ಸರ್ಗೆ ಭೇಟಿ ಮಾಡಿಸಿದ ದೇವರಿಗೆ ನಾನು ಧನ್ಯವಾದ ಹೇಳ್ತೀನಿ" ಅಂತ ರಶ್ಮಿಕಾ ಭಾವುಕರಾಗಿ ನುಡಿದಿದ್ದಾರೆ.
ಫ್ಯಾನ್ಸ್ ಏನಂತಾರೆ?
ರಶ್ಮಿಕಾ ಅವರು ಈ ರೀತಿ ಅಪ್ಪುವನ್ನ ಸ್ಮರಿಸಿದ್ದು ಕೇಳಿ ಅಪ್ಪು ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. "ಅಪ್ಪು ಅಂದ್ರೆ ಹಾಗೆ, ಎಲ್ಲರಿಗೂ ಪಾಸಿಟಿವ್ ಎನರ್ಜಿ ತುಂಬುವ ಅದ್ಭುತ ವ್ಯಕ್ತಿತ್ವ" ಅಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ. ರಶ್ಮಿಕಾ ಈಗ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ, ತಮ್ಮ ಕೆರಿಯರ್ನ ಆರಂಭದ ದಿನಗಳಲ್ಲಿ ಅಪ್ಪು ನೀಡಿದ ಬೆಂಬಲವನ್ನ ನೆನಪಿಸಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ.
ಒಟ್ಟಿನಲ್ಲಿ, ನಮ್ಮ ಅಪ್ಪು ಕೇವಲ ನಟನಾಗಿ ಮಾತ್ರವಲ್ಲ, ಅನೇಕ ಯುವ ನಟ-ನಟಿಯರಿಗೆ ಬೆನ್ನೆಲುಬಾಗಿ ನಿಂತು ದಾರಿ ತೋರಿಸಿದ ಮಹಾನ್ ಚೇತನ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.