Apr 21, 2026 Languages : ಕನ್ನಡ | English

ಬರೀ ಸಿನಿಮಾವಲ್ಲ, ಇದು ದೈವಿಕ ಅನುಭವ - ಮೂರು ಭಾಗಗಳಲ್ಲಿ ಬರಲಿದೆ ಕೃಷ್ಣನ ಮಹಾಕಥೆ 'ಕೃಷ್ಣಾವತಾರಂ'!!

ಸದ್ಯ ಸಿನಿಮಾ ಜಗತ್ತಿನಲ್ಲಿ ಒಂದಲ್ಲ ಒಂದು ಅದ್ಧೂರಿ ಸಿನಿಮಾಗಳು ಸದ್ದು ಮಾಡುತ್ತಲೇ ಇರುತ್ತವೆ. ಆದರೆ ಈಗ ಕೇಳಿಬರುತ್ತಿರುವ ಸುದ್ದಿ ಮಾತ್ರ ನಿಜಕ್ಕೂ ಭರ್ಜರಿಯಾಗಿದೆ. ಭಗವಾನ್ ಶ್ರೀಕೃಷ್ಣನ ಜನ್ಮಭೂಮಿ ಮಥುರಾದಲ್ಲಿ 'ಕೃಷ್ಣಾವತಾರಂ' ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು, ಭಕ್ತರ ಮತ್ತು ಸಿನಿಮಾ ಪ್ರೇಮಿಗಳ ಸಡಗರ ಹೇಳತೀರದಾಗಿದೆ.

ಸಾವಿರಾರು ಭಕ್ತರ ಸಮ್ಮುಖದಲ್ಲಿ ಟ್ರೈಲರ್ ಔಟ್
ಸಾವಿರಾರು ಭಕ್ತರ ಸಮ್ಮುಖದಲ್ಲಿ ಟ್ರೈಲರ್ ಔಟ್

ಸಾವಿರಾರು ಭಕ್ತರ ಸಮ್ಮುಖದಲ್ಲಿ, ಅತ್ಯಂತ ಪವಿತ್ರವಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಈ ಚಿತ್ರದ ಝಲಕ್ ಅನಾವರಣಗೊಂಡಿದೆ. ಟ್ರೈಲರ್ ನೋಡಿದ ಮಂದಿ ಮಾತ್ರ "ಇದು ಬರೀ ಸಿನಿಮಾವಲ್ಲ, ಅದ್ಭುತ ಅನುಭವ" ಎಂದು ಹಾಡಿ ಹೊಗಳುತ್ತಿದ್ದಾರೆ.

ಯಾರೆಲ್ಲಾ ಇದ್ದಾರೆ ಈ ಸಿನಿಮಾದ ಹಿಂದೆ?

ಈ ಸಿನಿಮಾ ಇಷ್ಟೊಂದು ಪ್ರಾಮಿಸಿಂಗ್ ಆಗಿ ಕಾಣಲು ಕಾರಣ ಅದರ ಹಿಂದಿರುವ ತಾಂತ್ರಿಕ ತಂಡ. ಹಾರ್ದಿಕ್ ಗಜ್ಜರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಬೃಹತ್ ಪ್ರಾಜೆಕ್ಟ್ ಅನ್ನು ಕ್ರಿಯೇಟಿವ್‌ಲ್ಯಾಂಡ್ ಸ್ಟುಡಿಯೋಸ್ ಎಂಟರ್ಟೈನ್‌ಮೆಂಟ್‌ನ ಸಾಜನ್ ರಾಜ್ ಕುರುಪ್ ಮತ್ತು ಶೋಭಾ ಸಂತ, ಜೊತೆಗೆ ಅಥಶ್ರೀಕಥಾ ಮೋಷನ್ ಪಿಕ್ಚರ್ಸ್‌ನ ಪೂನಂ ಶ್ರಾಫ್ ಮತ್ತು ಪಾರ್ಥ್ ಗಜ್ಜರ್ ಸೇರಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಒಂದಲ್ಲ.. ಎರಡಲ್ಲ.. ಇದು ಮೂರು ಭಾಗಗಳ ಸಿನೆಮಾ!
ಕೃಷ್ಣನ ಕಥೆ ಅಂದ್ರೆ ಅದು ಸಾಗರದಷ್ಟಿದೆ. ಅದನ್ನ ಒಂದೇ ಸಿನಿಮಾದಲ್ಲಿ ಮುಗಿಸೋಕೆ ಸಾಧ್ಯವೇ ಇಲ್ಲ ಅಲ್ವಾ? ಅದಕ್ಕಾಗಿಯೇ ಚಿತ್ರತಂಡ ಇದನ್ನ ಒಂದು ದೊಡ್ಡ ಸಿನಿಮ್ಯಾಟಿಕ್ ಫ್ರಾಂಚೈಸ್ ಆಗಿ ಪ್ಲಾನ್ ಮಾಡಿದೆ. ಈಗ ಬಿಡುಗಡೆಯಾಗುತ್ತಿರುವ 'ಕೃಷ್ಣಾವತಾರಂ' ಈ ಸರಣಿಯ ಮೊದಲ ಭಾಗವಂತೆ. ಮುಂದಿನ ಭಾಗಗಳಲ್ಲಿ ಕೃಷ್ಣನ ಜೀವನದ ಬೇರೆ ಬೇರೆ ಆಯಾಮಗಳನ್ನು ನೋಡಬಹುದು ಎಂಬ ನಿರೀಕ್ಷೆ ಇದೆ.

ರಿಲೀಸ್ ಡೇಟ್ ಯಾವಾಗ?

ಒಳ್ಳೆ ದಿನ ನೋಡಿಯೇ ಚಿತ್ರತಂಡ ಡೇಟ್ ಫಿಕ್ಸ್ ಮಾಡಿದಂತಿದೆ. 2026ರ ಮೇ 7ರಂದು ಈ ಸಿನಿಮಾ ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ. ಸದ್ಯಕ್ಕೆ ಟ್ರೈಲರ್ ನೋಡಿ ಇಂಪ್ರೆಸ್ ಆಗಿರುವ ಫ್ಯಾನ್ಸ್, ಸಿನಿಮಾ ನೋಡಲು ಇನ್ನೇನು ಎರಡು ವರ್ಷ ಕಾಯಬೇಕಲ್ಲ ಅಂತ ಈಗಲೇ ಕಾತರದಿಂದ ಕಾಯುತ್ತಿದ್ದಾರೆ. ಮಥುರಾದಲ್ಲಿ ಶುರುವಾದ ಈ ಹವಾ ಇಡೀ ವಿಶ್ವದಾದ್ಯಂತ ಹರಡೋದರಲ್ಲಿ ಸಂಶಯವೇ ಇಲ್ಲ.