Feb 16, 2026 Languages : ಕನ್ನಡ | English

ಬಣ್ಣದ ಲೋಕಕ್ಕೆ ವಿದಾಯ ಹೇಳಿದ ನಂದಿನಿ - ಮಗಳ ಸಮಾಧಿ ಮುಂದೆ ತಾಯಿಯ ಕಣ್ಣೀರಿನ ಮನವಿ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಕಿರುತೆರೆ ನಟಿ ನಂದಿನಿ ಜೀವಹಾನಿ ಪ್ರಕರಣದ ನಂತರ, ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಮಗಳ ನೆನೆದು ತಾಯಿ ಬಸವರಾಜೇಶ್ವರಿ ಕಣ್ಣೀರಿಡುತ್ತಾ ಮಾಧ್ಯಮಗಳ ಮುಂದೆ ಮನವಿ ಮಾಡಿದ್ದು, ಈ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬಣ್ಣದ ಲೋಕಕ್ಕೆ ವಿದಾಯ ಹೇಳಿದ ನಂದಿನಿ - ಮಗಳ ಸಮಾಧಿ ಮುಂದೆ ತಾಯಿಯ ಕಣ್ಣೀರಿನ ಮನವಿ
ಬಣ್ಣದ ಲೋಕಕ್ಕೆ ವಿದಾಯ ಹೇಳಿದ ನಂದಿನಿ - ಮಗಳ ಸಮಾಧಿ ಮುಂದೆ ತಾಯಿಯ ಕಣ್ಣೀರಿನ ಮನವಿ

ತಾಯಿ ಬಸವರಾಜೇಶ್ವರಿ ಹೇಳಿಕೆ

ನಂದಿನಿ ಅವರ ತಾಯಿ ಬಸವರಾಜೇಶ್ವರಿ ತಮ್ಮ ದುಃಖವನ್ನು ಹಂಚಿಕೊಂಡು, “ನಾನು ಶಿಕ್ಷಕಿಯಾಗಿದ್ದೆ, ನನ್ನ ಯಜಮಾನರು ಕೂಡಾ ಶಿಕ್ಷಕರಾಗಿದ್ದರು. ಅವರು ತೀರಿಕೊಂಡ ಬಳಿಕ ಅನುಕಂಪ ಆಧಾರಿತ ನೌಕರಿ ಮಾಡಲು ಹೇಳಿದಾಗ, ನಂದಿನಿ ಅದನ್ನು ನಿರಾಕರಿಸಿದ್ದಳು. ನಂತರ ಕೆಲಸ ಮಾಡುತ್ತೇನೆ ಎಂದು ಹೇಳಿ ಸಿದ್ಧತೆ ಮಾಡಿಕೊಂಡಿದ್ದರೂ, ಮತ್ತೆ ಕೆಲಸ ಬೇಡ ಎಂದು ನಿರ್ಧರಿಸಿದ್ದಳು. ಮಗಳಿಗೆ ಮುಂಗೋಪ ಜಾಸ್ತಿ ಇತ್ತು, ಸಿಟ್ಟು ಸಿಟ್ಟು ಮಾಡುತ್ತಿದ್ದಳು. ನಾವು ಎಂದಿಗೂ ವಿರೋಧ ಮಾಡಿರಲಿಲ್ಲ. ಆದರೆ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ” ಎಂದು ಕಣ್ಣೀರಿಡುತ್ತಾ ಹೇಳಿದರು.

ಅವರು ಮುಂದುವರಿಸಿ, “ನನ್ನ ಮಗಳು ಬಂಗಾರ. ಆಕೆಯ ಬಗ್ಗೆ ಅಥವಾ ನಮ್ಮ ಬಗ್ಗೆ ಸುಳ್ಳು ಸುದ್ದಿ, ಅಪಪ್ರಚಾರ ಮಾಡಬೇಡಿ. ನಾನು ಶಿಕ್ಷಕಿಯಾಗಿ ಮಕ್ಕಳಿಗೆ ನನ್ನ ಮಗಳಂತೆ ಸಾಧನೆ ಮಾಡಿ ಎಂದು ಹೇಳುತ್ತಿದ್ದೆ. ನಂದಿನಿ ಸಾಧನೆ ಮಾಡಿದ್ದಳು, ಆದರೆ ದುಡುಕಿ ಈ ರೀತಿಯ ನಿರ್ಧಾರ ಕೈಗೊಂಡಿದ್ದಾಳೆ. ನನ್ನ ಮಗಳಂತೆ ಯಾರೂ ಜೀವಹಾನಿ ಮುಂದಾಗಬಾರದು” ಎಂದು ಮನವಿ ಮಾಡಿದರು.

ಕುಟುಂಬದ ನೋವು

ಬಸವರಾಜೇಶ್ವರಿ ತಮ್ಮ ನೋವನ್ನು ಹಂಚಿಕೊಂಡು, “ನನ್ನ ಮಗಳು ಬಂಗಾರ ಆಗಿದ್ದಳು. ತಪ್ಪು ಸಂದೇಶ ನೀಡಿ ನನಗೆ ನೋವು ಕೊಡಬೇಡಿ. ಚಿಕ್ಕಮಗಳು ಮೈಸೂರು ಪರೀಕ್ಷೆಗೆ ಹೋಗಿದ್ದಳು. ನಂದಿನಿ ಏನೋ ಮಾಡಿಕೊಂಡಿದ್ದಾಳೆ ಎಂದು ತಿಳಿದಾಗ ಜೀವಾನೇ ಒಡೆದುಹೋಯ್ತು. ಮಗಳು ಬ್ಯುಸಿ ಇದ್ದುದರಿಂದ ಭೇಟಿಯಾಗಲು ಆಗಿರಲಿಲ್ಲ. ಅವಳಿಗೆ ಫ್ರೀ ಇದ್ದಾಗ ಫೋನ್ ಮಾಡು ಎಂದಿದ್ದೆ. ಜೀವಹಾನಿ ಮಾಡಿಕೊಳ್ಳುವಂತಹ ನೋವು ಯಾರೂ ಕೊಟ್ಟಿಲ್ಲ” ಎಂದು ಹೇಳಿದರು. ಪೊಲೀಸರ ಪ್ರಕಾರ, “ನಂದಿನಿ ರಾತ್ರಿ 10.45ಕ್ಕೆ ಪಿಜಿಗೆ ಬಂದು, 11.15ಕ್ಕೆ ಈ ಘಟನೆ ನಡೆದಿದೆ” ಎಂದು ಮಾಹಿತಿ ನೀಡಲಾಗಿದೆ.

ಮಾಧ್ಯಮಗಳಿಗೆ ಮನವಿ

ಬಸವರಾಜೇಶ್ವರಿ ಮಾಧ್ಯಮಗಳಿಗೆ ಮನವಿ ಮಾಡುತ್ತಾ, “ಮಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಬೇಡಿ. ನನ್ನ ಮಗಳು ಹುಲಿ, ಬಂಗಾರ. ಕೆಲಸದ ವಿಚಾರ ಎರಡು ವರ್ಷಗಳ ಹಿಂದೆ ಮುಗಿದು ಹೋಗಿತ್ತು. ಮಾಧ್ಯಮಗಳಲ್ಲಿ ಬೇರೆ ಬೇರೆ ಸುದ್ದಿ ಬರುತ್ತಿದೆ, ಅದನ್ನು ನಿಲ್ಲಿಸಿ. ಪಿಯುಸಿ ಮುಗಿಸಿದಾಗ ಹೆಸರಘಟ್ಟದ ಆರ್.ಆರ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ಸಿಕ್ಕಿತ್ತು. ಕೆಲಸ ಇಷ್ಟ ಇಲ್ಲ ಅಂದ್ರೆ ಬಿಟ್ಟುಬಿಡು ಎಂದಿದ್ದೆ. ಆದರೆ ಅವಳು ನನ್ನ ನಂಬರ್ ಬ್ಲಾಕ್ ಮಾಡುತ್ತೇನೆ ಎಂದಿದ್ದಳು. 20 ದಿನಗಳಿಂದ ನನ್ನ ಜೊತೆ ಮಾತುಕತೆ ಮಾಡಿರಲಿಲ್ಲ. ಅವಳಿಗೆ ಸಿಟ್ಟು, ಕೋಪ ಜಾಸ್ತಿ ಇತ್ತು. ಅಚಾತುರ್ಯದಿಂದ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ” ಎಂದು ಕಣ್ಣೀರಿಡುತ್ತಾ ಹೇಳಿದರು.

ಸಾರಾಂಶ

ಚಿಗಟೇರಿ ಗ್ರಾಮದಲ್ಲಿ ನಂದಿನಿ ಜೀವಹಾನಿ ಪ್ರಕರಣವು ಕುಟುಂಬಕ್ಕೆ ಅಸಹನೀಯ ನೋವು ತಂದಿದೆ. ತಾಯಿ ಬಸವರಾಜೇಶ್ವರಿ ತಮ್ಮ ಮಗಳ ಸಾಧನೆ, ಸ್ವಭಾವ, ಹಾಗೂ ಜೀವನದ ನಿರ್ಧಾರಗಳ ಬಗ್ಗೆ ಕಣ್ಣೀರಿಡುತ್ತಾ ಹಂಚಿಕೊಂಡಿದ್ದಾರೆ. “ಯಾವ ಪೋಷಕರಿಗೂ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರಲ್ಲ. ನನ್ನ ಮಗಳಂತೆ ಯಾರೂ ಜೀವಹಾನಿಗೆ ಮುಂದಾಗಬಾರದು” ಎಂಬ ಅವರ ಮನವಿ, ಸಮಾಜಕ್ಕೆ ಗಂಭೀರ ಸಂದೇಶ ನೀಡಿದೆ.

Latest News