ತಮಿಳುನಾಡು ಅಂದ್ರೆ ಅಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಬಿಡಿಸಲಾಗದ ಸಂಬಂಧ. ಈಗ ಅಲ್ಲಿನ ಹೊಸ ಸೆನ್ಸೇಷನ್ ಅಂದ್ರೆ ಅದು 'ದಳಪತಿ' ವಿಜಯ್. ಅವರ ಪಾರ್ಟಿ 'ತಮಿಳಿಗ ವೆಟ್ರಿ ಕಳಗಂ' (TVK) 2026ರ ಚುನಾವಣೆಯಲ್ಲಿ ಅಬ್ಬರಿಸುತ್ತಿದ್ದು, ವಿಜಯ್ ಸಿಎಂ ಗಾದಿಯತ್ತ ಹೆಜ್ಜೆ ಇಟ್ಟಿದ್ದಾರೆ. ಈ ನಡುವೆ ವಿಜಯ್ ಕೊಟ್ಟಿರೋ 'ಮಹಿಳಾ ಗ್ಯಾರಂಟಿ' ಮತ್ತು ಅದಕ್ಕೆ ಅವರ ಅಭಿಮಾನಿ ಹುಡುಗಿಯೊಬ್ಬಳು ಕೊಟ್ಟಿರೋ ರಿಯಾಕ್ಷನ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಮಹಿಳೆಯರಿಗೆ ವಿಜಯ್ ಕೊಟ್ಟ 'ಬಂಪರ್ ಆಫರ್'!
ವಿಜಯ್ ಅವರು ತಮ್ಮ ಪಾರ್ಟಿಯ ಮಹಿಳಾ ಕಲ್ಯಾಣ ಯೋಜನೆಗೆ ‘ಮಧಿಪ್ಪುಮಿಗು ಮಗಳಿರ್ ತಿಟ್ಟಂ’ (ಗೌರವಾನ್ವಿತ ಮಹಿಳಾ ಯೋಜನೆ) ಅಂತ ಹೆಸರಿಟ್ಟಿದ್ದಾರೆ. ಈ ಯೋಜನೆಯಡಿ ಅವರು ಘೋಷಿಸಿರೋ ಗ್ಯಾರಂಟಿಗಳು ಕೇಳಿದ್ರೆ ನೀವೇ ಶಾಕ್ ಆಗ್ತೀರಾ:
ತಿಂಗಳಿಗೆ 2,500 ರೂ.: 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಪ್ರತಿ ತಿಂಗಳು ನೇರವಾಗಿ ಅಕೌಂಟ್ಗೆ ಹಣ.
ಸಿಲಿಂಡರ್ ಭಾಗ್ಯ: ವರ್ಷಕ್ಕೆ 6 ಎಲ್ಪಿಜಿ ಸಿಲಿಂಡರ್ ಉಚಿತ.
ಚಿನ್ನದ ಉಡುಗೊರೆ: ಮದುವೆಯಾಗುವ ಹೆಣ್ಣುಮಕ್ಕಳಿಗೆ 8 ಗ್ರಾಂ ಚಿನ್ನದ ನಾಣ್ಯ.
ಇತರ ಸವಲತ್ತು: ಉಚಿತ ಬಸ್ ಪ್ರಯಾಣ, ಬಡ್ಡಿರಹಿತ ಸಾಲ ಮತ್ತು ಸರ್ಕಾರಿ ಉದ್ಯೋಗದ ಭರವಸೆ.
"ವಿಜಯ್ ತಮ್ಮ ಸ್ವಂತ ಹಣ ಕೊಡ್ತಾರೆ!" - ವೈರಲ್ ಆದ ಅಭಿಮಾನಿಯ ಮಾತು
ವಿಜಯ್ ಇಷ್ಟೆಲ್ಲಾ ಭರವಸೆ ಕೊಟ್ಟಿದ್ದಾರೆ ಸರಿ, ಆದ್ರೆ ಇದಕ್ಕೆ ಹಣ ಎಲ್ಲಿಂದ ಬರುತ್ತೆ ಅಂತ ವಿರೋಧ ಪಕ್ಷದವರು ಕಾಲೆಳೆಯುತ್ತಿದ್ದಾರೆ. ಈ ಟೈಮ್ನಲ್ಲಿ ಕಾಲೇಜು ಹುಡುಗಿಯೊಬ್ಬಳು ಮಾಧ್ಯಮಗಳ ಮುಂದೆ ಕೊಟ್ಟಿರೋ ಹೇಳಿಕೆ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಆಕೆ ಹೇಳೋದು ಇಷ್ಟೇ: "ನಮ್ಮ ದಳಪತಿ ಡಿಎಂಕೆ ಅಥವಾ ಎಡಿಎಂಕೆಯವರಂತೆ ಸುಳ್ಳು ಹೇಳುವವರಲ್ಲ. ಅವರು ಏನು ಹೇಳ್ತಾರೋ ಅದನ್ನ ಮಾಡೇ ಮಾಡ್ತಾರೆ. ಈ 2,500 ರೂಪಾಯಿನ ಅವರು ಜನರ ತೆರಿಗೆ ಹಣದಿಂದ ಕೊಡುವುದಿಲ್ಲ, ಬದಲಾಗಿ ತಮ್ಮ ಸ್ವಂತ ಹಣದಿಂದ, ಕಷ್ಟಪಟ್ಟು ದುಡಿದಿರೋ ವೈಯಕ್ತಿಕ ಹಣದಿಂದ ಮಹಿಳೆಯರಿಗೆ ಕೊಡ್ತಾರೆ!"
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕೆಲವರು ಆಕೆಯ ಅಭಿಮಾನಕ್ಕೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು "ಅಷ್ಟೊಂದು ಹಣ ಒಬ್ಬ ವ್ಯಕ್ತಿ ಕೊಡಲು ಹೇಗೆ ಸಾಧ್ಯ?" ಅಂತ ಪ್ರಶ್ನೆ ಮಾಡ್ತಿದ್ದಾರೆ.
Vijay Joseph promised to give ₹2500 per month to women in Tamil Nadu in his manifesto.
— Incognito (@Incognito_qfs) May 9, 2026
This Vijay Joseph's fan girl is very happy and explaining that Vijay Joseph's TVK will pay this money to women from their own pocket and not from taxpayers money like DMK or AIADMK.
GOD SAVE… pic.twitter.com/gUcBuDRNhb
ವಿಜಯ್ ಪ್ಲಾನ್ ನಿಜಕ್ಕೂ ಏನು?
ಅಭಿಮಾನಿಗಳು ಏನೋ ಭಾವೋದ್ವೇಗದಲ್ಲಿ "ವಿಜಯ್ ಅವರೇ ಹಣ ಕೊಡ್ತಾರೆ" ಅಂತ ಹೇಳ್ತಿರಬಹುದು, ಆದ್ರೆ ವಿಜಯ್ ಅವರ ಪಾರ್ಟಿ ಹತ್ತಿರ ಪಕ್ಕಾ ಸರ್ಕಾರಿ ಲೆಕ್ಕಾಚಾರವಿದೆ. ಅವರ ಪ್ರಣಾಳಿಕೆಯ ಪ್ರಕಾರ:
ಭ್ರಷ್ಟಾಚಾರಕ್ಕೆ ಬ್ರೇಕ್: ರಾಜ್ಯ ಬಜೆಟ್ನಲ್ಲಿ ನಡೆಯೋ ಸುಮಾರು 30 ಶೇಕಡಾ ಭ್ರಷ್ಟಾಚಾರವನ್ನು ತಡೆದು, ಆ ಹಣವನ್ನು ಈ ಯೋಜನೆಗಳಿಗೆ ಬಳಸಿಕೊಳ್ಳುವುದು.
ತೆರಿಗೆ ಮರುಹಂಚಿಕೆ: ರಾಜ್ಯದ ಆದಾಯವನ್ನು ಸರಿಯಾದ ಹಾದಿಯಲ್ಲಿ ಮಹಿಳೆಯರ ಏಳಿಗೆಗೆ ಖರ್ಚು ಮಾಡುವುದು.
ಮಹಿಳೆಯರೇ ಗೆಲುವಿನ ರೂವಾರಿಗಳು?
ತಮಿಳುನಾಡಿನ ಒಟ್ಟು ಮತದಾರರಲ್ಲಿ ಶೇ. 51 ಕ್ಕಿಂತ ಹೆಚ್ಚು ಮಹಿಳೆಯರೇ ಇದ್ದಾರೆ. ಇದನ್ನೇ ಟಾರ್ಗೆಟ್ ಮಾಡಿರೋ ವಿಜಯ್, "ಹೆಣ್ಣು ಮಕ್ಕಳು ಮನಸ್ಸು ಮಾಡಿದ್ರೆ ಸರ್ಕಾರ ಬದಲಾಗುತ್ತೆ" ಅನ್ನೋದನ್ನ ಅರಿತು ಈ ಯೋಜನೆಗಳನ್ನು ಘೋಷಿಸಿದ್ದಾರೆ. ಸದ್ಯಕ್ಕೆ ಚುನಾವಣಾ ಫಲಿತಾಂಶಗಳು ವಿಜಯ್ ಪರವಾಗಿ ಇರೋದ್ರಿಂದ, ದಳಪತಿ ಸಿಎಂ ಆಗೋದು ಪಕ್ಕಾ ಎನ್ನಲಾಗುತ್ತಿದೆ.
ಸಿನಿಮಾದಲ್ಲಿ 'ಒನ್ ಮ್ಯಾನ್ ಆರ್ಮಿ'ಯಂತೆ ವಿಲನ್ಗಳನ್ನು ಚಚ್ಚಿ ಹಾಕೋ ವಿಜಯ್, ಈಗ ರಾಜಕೀಯದ ಅಖಾಡದಲ್ಲೂ ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಅಭಿಮಾನಿಗಳು ಅವರನ್ನ ದೇವರಂತೆ ನೋಡ್ತಿದ್ದಾರೆ. ಆದರೆ, ಕೊಟ್ಟ ಮಾತಿನಂತೆ ಈ ಯೋಜನೆಗಳನ್ನ ಅವರು ಹೇಗೆ ಜಾರಿಗೆ ತರ್ತಾರೆ ಅನ್ನೋದನ್ನ ಇಡೀ ದೇಶ ಕಾತರದಿಂದ ನೋಡ್ತಿದೆ.