Mar 11, 2026 Languages : ಕನ್ನಡ | English

ರಸ್ತೆಯಲ್ಲೇ ವಿದೇಶಿ ಮಹಿಳೆ ಮೈ ಮೇಲೆ ಹೋದ ಅಪರಿಚಿತ ವ್ಯಕ್ತಿ - ಮುಂದಾಗಿದ್ದು ನೀವೇ ನೋಡಿ!! ವಿಡಿಯೋ;

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾದ ಮಾಡೆಲ್ ಒಬ್ಬರಿಗೆ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಅನುಚಿತವಾಗಿ ಸ್ಪರ್ಶಿಸಿರುವ ಘಟನೆ ನಡೆದಿದೆ. ಅಲ್ಲಿ ಸಾಕಷ್ಟು ಜಾಗವಿದ್ದರೂ ಸಹ, ಆ ವ್ಯಕ್ತಿ ಉದ್ದೇಶಪೂರ್ವಕವಾಗಿ ಆಕೆಯ ಹತ್ತಿರ ಬಂದು ಕೆಟ್ಟದಾಗಿ ವರ್ತಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತದ ಘನತೆಗೆ ಧಕ್ಕೆ ತಂದಿದೆ. ಆದರೆ, ಈ ಘಟನೆಗಿಂತಲೂ ಹೆಚ್ಚಾಗಿ ಆ ವ್ಯಕ್ತಿಯನ್ನ ಸಮರ್ಥಿಸಿಕೊಳ್ಳುತ್ತಿರುವ ಜನರ ಮಾತುಗಳು ಈಗ ಹೆಚ್ಚು ಆತಂಕಕಾರಿಯಾಗಿವೆ.

ಸಾರ್ವಜನಿಕವಾಗಿ ಧೈರ್ಯ ತೋರಿದ ಮಾಡೆಲ್!! | Photo Credit: X@TyrantOppressor
ಸಾರ್ವಜನಿಕವಾಗಿ ಧೈರ್ಯ ತೋರಿದ ಮಾಡೆಲ್!! | Photo Credit: X@TyrantOppressor

ಸುತ್ತಲೂ ಸಾಕಷ್ಟು ಜಾಗವಿದ್ದರೂ ಆ ವ್ಯಕ್ತಿ ಆಕೆಯ ಮೈಮೇಲೆ ಬೀಳುವಂತೆ ಹತ್ತಿರ ಬಂದಿದ್ದಾನೆ. ಆ ಮಾಡೆಲ್ ತಕ್ಷಣ ಇದನ್ನು ಗಮನಿಸಿ ಆತನನ್ನು ತಡೆದಿದ್ದಾರೆ. ಆಕೆ ಸುಮ್ಮನೆ ಇರದೆ, ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡು ಆತನಿಗೆ ಬುದ್ಧಿ ಕಲಿಸಿದ್ದಾರೆ. ಒಬ್ಬ ಮಹಿಳೆಯಾಗಿ ತನ್ನ ಆತ್ಮಗೌರವವನ್ನ ಕಾಪಾಡಿಕೊಳ್ಳಲು ಆಕೆ ತೋರಿದ ಈ ಧೈರ್ಯ ನಿಜಕ್ಕೂ ಮೆಚ್ಚುವಂತದ್ದು. ಆದರೆ, ದುರಂತವೆಂದರೆ ಸಮಾಜದ ಕೆಲವೊಂದಿಷ್ಟು ಜನರು ಈ ತಪ್ಪನ್ನ ತಿದ್ದುವ ಬದಲು, ತಪ್ಪಿತಸ್ಥನ ಪರವಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ. 

ಈ ಘಟನೆಯ ನಂತರ ಅನೇಕರು, "ಆತ ಒಬ್ಬ ಬಡವ, ಆತನಿಗೆ ತಿಳುವಳಿಕೆ ಇಲ್ಲ, ಸುಮ್ಮನೆ ಬಿಟ್ಟುಬಿಡಿ" ಎಂದು ಆ ಹಿರಿಯ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಕೇಳಬೇಕಾದ ಮುಖ್ಯ ಪ್ರಶ್ನೆಯೆಂದರೆ, 'ಬಡವನಾದರೆ ಕಾನೂನು ಮೀರುವ ಹಕ್ಕು ಸಿಗುತ್ತದೆಯೇ?' ಎಂಬುದು. ಬಡತನಕ್ಕೂ ಮತ್ತು ಒಬ್ಬ ವ್ಯಕ್ತಿಯ ಚಾರಿತ್ರ್ಯಕ್ಕೂ ಯಾವುದೇ ಸಂಬಂಧವಿಲ್ಲ. ಬಡವನಾದ ಮಾತ್ರಕ್ಕೆ ಒಬ್ಬ ಮಹಿಳೆಯ ಮೇಲೆ ಕೈಹಾಕುವ ಅಥವಾ ಆಕೆಯನ್ನು ಅಸಭ್ಯವಾಗಿ ನೋಡುವ ಹಕ್ಕು ಯಾರಿಗೂ ಇಲ್ಲ.

ಯಾವುದೇ ದೇಶದ ಮಹಿಳೆಯಿರಲಿ, ಅವರು ಸಾರ್ವಜನಿಕವಾಗಿ ಸಂಚರಿಸುವಾಗ ಸುರಕ್ಷಿತವಾಗಿರಬೇಕು ಎಂಬುದು ಕನಿಷ್ಠ ನಾಗರಿಕ ಪ್ರಜ್ಞೆ. ಮಹಿಳೆಯರಿಗೆ ಕಿರುಕುಳ ನೀಡುವುದು ಅಪರಾಧವೇ ಹೊರತು ಅದನ್ನು "ಬಡತನ" ಅಥವಾ "ಅಜ್ಞಾನ" ಎಂದು ಕರೆದು ಮುಚ್ಚಿ ಹಾಕಲು ಸಾಧ್ಯವಿಲ್ಲ. ನಾವು ಇಂತಹ ವರ್ತನೆಗಳನ್ನು ಸಮರ್ಥಿಸಿಕೊಳ್ಳುತ್ತಾ ಹೋದರೆ, ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಎಂದಿಗೂ ಕೊನೆಯಾಗುವುದಿಲ್ಲ. ತಪ್ಪಿತಸ್ಥನು ಶ್ರೀಮಂತನಿರಲಿ ಅಥವಾ ಬಡವನಿರಲಿ, ತಪ್ಪನ್ನು ತಪ್ಪು ಎಂದೇ ಕರೆಯಬೇಕು.

ಭಾರತವು 'ಅತಿಥಿ ದೇವೋ ಭವ' ಎಂಬ ಸಂಪ್ರದಾಯಕ್ಕೆ ಹೆಸರಾದ ದೇಶ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮತ್ತು ಇಲ್ಲಿನ ಮಹಿಳೆಯರಿಗೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಘಟನೆಗಳು ನಡೆದಾಗ ನಾವು ತಪ್ಪಿತಸ್ಥರನ್ನು ಶಿಕ್ಷಿಸಬೇಕೇ ಹೊರತು, ಅವರಿಗೆ ರಕ್ಷಣೆ ನೀಡಬಾರದು. ಸಮಾಜವು ಇಂತಹ ವಿಷಯಗಳಲ್ಲಿ ಸ್ಪಷ್ಟವಾದ ನಿಲುವನ್ನು ಹೊಂದಿರಬೇಕು. 

Latest News