ರೈಲುಗಳಲ್ಲಿ ಬೆಂಕಿ ಅವಘಡ: ಸಮಾಜ ವಿರೋಧಿಗಳ ಉದ್ದೇಶಪೂರ್ವಕ ಕೃತ್ಯ; ತನಿಖೆಯಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ!

ನೀವು ಹೆಚ್ಚಾಗಿ ರೈಲಿನಲ್ಲಿ ಪ್ರಯಾಣಿಸುತ್ತೀರಾ? ಹಾಗಿದ್ದರೆ ಇನ್ಮುಂದೆ ನೀವು ರೈಲು ಹತ್ತುವಾಗ ಹತ್ತಿರದ ಪರಿಸರ ಹಾಗೂ ಜನರ ಬಗ್ಗೆ ಹದ್ದಿನ ಕಣ್ಣಿಡಲೇಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ದೇಶದ ಬೇರೆ ಬೇರೆ ಕಡೆಗಳಲ್ಲಿ ಸಂಭವಿಸಿದ ರೈಲು ಬೆಂಕಿ ಅವಘಡಗಳ ಹಿಂದೆ ಯಾವುದೇ ತಾಂತ್ರಿಕ ದೋಷವಾಗಲಿ ಅಥವಾ ಶಾರ್ಟ್ ಸರ್ಕ್ಯೂಟ್ ಆಗಲಿ ಇರಲಿಲ್ಲ! ಇವೆಲ್ಲವೂ ಸಮಾಜ ವಿರೋಧಿ ಶಕ್ತಿಗಳು ಬೇಕಂತಲೇ ಪ್ಲಾನ್ ಮಾಡಿ ರೈಲುಗಳಿಗೆ ಬೆಂಕಿ ಹಚ್ಚುತ್ತಿರುವ ಭೀಕರ ವಿಧ್ವಂಸಕ ಕೃತ್ಯಗಳು ಎಂಬ ಆಘಾತಕಾರಿ ಸತ್ಯವನ್ನು ಸ್ವತಃ ಭಾರತೀಯ ರೈಲ್ವೆ ಇಲಾಖೆಯೇ ಈಗ ಬಹಿರಂಗಪಡಿಸಿದೆ!

ರೈಲು ಬೆಂಕಿ ಅವಘಡ: ತಾಂತ್ರಿಕ ದೋಷವಲ್ಲ, ಸಂಚು! | Photo Credit: https://www.facebook.com/thevoiceofsikkim
ರೈಲು ಬೆಂಕಿ ಅವಘಡ: ತಾಂತ್ರಿಕ ದೋಷವಲ್ಲ, ಸಂಚು! | Photo Credit: https://www.facebook.com/thevoiceofsikkim

ಈ ಸರಣಿ ಬೆಂಕಿ ಅಪಘಾತಗಳನ್ನು ರೈಲ್ವೆ ರಕ್ಷಣಾ ಪಡೆ (RPF) ತೀವ್ರವಾಗಿ ತನಿಖೆ ಮಾಡುತ್ತಿದ್ದು, ಪ್ರಾಥಮಿಕ ಹಂತದಲ್ಲೇ ಇದು ವ್ಯವಸ್ಥಿತ ಸಂಚು ಎಂಬುದು ಸಾಬೀತಾಗಿದೆ! ನಮ್ಮ ದೇಶದ ಹೆಮ್ಮೆಯ ಸಾರಿಗೆಯನ್ನು ಹಾಳುಗೆಡವಲು ದುಷ್ಟರು ಹೂಡಿರುವ ಸ್ಕೆಚ್‌ನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ;

ರೈಲನ್ನು ಸುಡಲು ಸ್ಕೆಚ್ ಹಾಕಿದ್ದು ಹೇಗೆ? ತನಿಖಾ ವರದಿ:

ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ವಿವಿಧ ರೈಲುಗಳಲ್ಲಿ ಬೆಂಕಿ ಹಚ್ಚಲು ದುಷ್ಕರ್ಮಿಗಳು ಅನುಸರಿಸಿದ ದಾರಿಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ;

ಬಾತ್‌ರೂಮ್‌ನಲ್ಲಿ ಪೆಟ್ರೋಲ್ ಬಟ್ಟೆ - ಹೌರಾದಲ್ಲಿ ರೈಲೊಂದರ ಶೌಚಾಲಯದಲ್ಲಿ ಬೆಂಕಿ ಕಾಣಿಸಿಕೊಂಡಾಗ ತಕ್ಷಣವೇ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಅಲ್ಲಿ ಪೆಟ್ರೋಲ್‌ನಲ್ಲಿ ಅದ್ದಿಟ್ಟಿದ್ದ ಬಟ್ಟೆಯೊಂದು ಪತ್ತೆಯಾಗಿದ್ದು, ರೈಲನ್ನು ಸುಡಲೆಂದೇ ಕಿಡಿಗೇಡಿಗಳು ಈ ಕೆಲಸ ಮಾಡಿರುವುದು ಕನ್ಫರ್ಮ್ ಆಗಿದೆ.

ಖಾಲಿ ಬೋಗಿಗೂ ಬಿತ್ತು ಬೆಂಕಿ - ಸಸಾರಾಮ್‌ನಲ್ಲಿ ನಡೆದ ಘಟನೆಯಂತೂ ರೈಲ್ವೆ ಅಧಿಕಾರಿಗಳಿಗೆ ದೊಡ್ಡ ಸಾಕ್ಷಿ ನೀಡಿದೆ. ಅಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಯಾವುದೇ ಕರೆಂಟ್ ಅಥವಾ ಪವರ್ ಜನರೇಟರ್ ಕನೆಕ್ಷನ್ ಇಲ್ಲದ ಸಂಪೂರ್ಣ ಖಾಲಿ ಬೋಗಿಯಲ್ಲಿ! ಅಂದರೆ ಯಾರೋ ಕದ್ದುಮುಚ್ಚಿ ಒಳಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ ಎಂಬುದು ಸೂರ್ಯನಷ್ಟೇ ಸ್ಪಷ್ಟ.

ಲಿನಿನ್ ಬಟ್ಟೆಗಳಿಗೆ ಕಿಡಿ - ಅಮರಾಪುರ ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಲಿನಿನ್ ಬೆಡ್‌ಶೀಟ್ ಹಾಗೂ ಬಟ್ಟೆಗಳಿದ್ದ ಜಾಗಕ್ಕೆ ಬೆಂಕಿ ಇಡಲು ಯತ್ನಿಸಿದ್ದಾನೆ.

ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲೂ ಸಂಚು - ದೇಶದ ಪ್ರಮುಖ ಪ್ರೀಮಿಯಂ ರೈಲಾದ ಕೋಟಾ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲೂ ಶೌಚಾಲಯದ ಒಳಗಿನಿಂದಲೇ ಮೊದಲು ಬೆಂಕಿ ಜ್ವಾಲೆಗಳು ಕಾಣಿಸಿಕೊಂಡಿದ್ದವು.

ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ - ಈ 139 ನಂಬರ್ ನೆನಪಿರಲಿ!

ಈ ಇಡೀ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆಯು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹಾಗೂ ಪ್ರಯಾಣಿಕರಿಗೂ ಒಂದು ಪ್ರಮುಖ ಮನವಿ ಮಾಡಿದೆ. ರೈಲು ಪ್ರಯಾಣದ ಸಮಯದಲ್ಲಿ ಸಾರ್ವಜನಿಕರು ಕಣ್ಣು-ಕಿವಿ ತೆರೆದುಕೊಂಡು ಸದಾ ಜಾಗರೂಕರಾಗಿ ಇರಬೇಕು.

ನಿಮ್ಮ ಬೋಗಿಯಲ್ಲಿ ಅಥವಾ ರೈಲ್ವೆ ಸ್ಟೇಷನ್‌ನಲ್ಲಿ ಯಾರಾದರೂ ಗ್ಯಾಂಗ್ ಮಾಡಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ, ಅಥವಾ ಸೀಟಿನ ಕೆಳಗೆ ಯಾರಾದರೂ ಬ್ಯಾಗ್, ಪೆಟ್ರೋಲ್ ಬಾಟಲಿಯಂತಹ ವಸ್ತುಗಳನ್ನು ಬಿಟ್ಟು ಹೋಗಿರುವುದು ಕಂಡುಬಂದರೆ ತಕ್ಷಣವೇ ಅಲರ್ಟ್ ಆಗಿ. ಕಿಂಚಿತ್ತೂ ತಡ ಮಾಡದೆ ತಕ್ಷಣವೇ ರೈಲ್ವೆ ಇಲಾಖೆಯ ಅಧಿಕೃತ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ '139' ಗೆ ಕಾಲ್ ಮಾಡಿ ಮಾಹಿತಿ ನೀಡಿ. ನಿಮ್ಮ ಒಂದು ಫೋನ್ ಕರೆ ನೂರಾರು ಪ್ರಯಾಣಿಕರ ಪ್ರಾಣವನ್ನು ಉಳಿಸಬಹುದು.

ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಈವರೆಗೂ ಯಾವುದೇ ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ದೇಶದ ಆಸ್ತಿಯನ್ನು ಧ್ವಂಸ ಮಾಡಲು ಹೊರಟಿರುವ ಇಂತಹ ವಿಕೃತ ಮನಸ್ಸುಗಳನ್ನು ಮಟ್ಟಹಾಕಲು ಕೇವಲ ಪೊಲೀಸರು ಮಾತ್ರವಲ್ಲ, ಪ್ರಯಾಣಿಕರಾದ ನಮ್ಮ ಸಹಕಾರವೂ ಅತಿ ಮುಖ್ಯ.

Latest News