ಪ್ರೀತಿ ಎಂಬುದು ಸುಂದರ ಅನುಭವ ಎಂದು ನಂಬಿದ್ದ ಆ ಯುವಕನಿಗೆ, ಅದೇ ಪ್ರೀತಿ ಕೊನೆಗೆ ಮರಣಶಾಸನವಾಗುತ್ತೆ ಎಂದು ತಿಳಿದಿರಲಿಲ್ಲ. ಹದಿಹರೆಯದ ಸಂಭ್ರಮದಲ್ಲಿದ್ದ ಜೋಡಿಹಕ್ಕಿಗಳ ಪ್ರಣಯ ಯಾನಕ್ಕೆ ಈಗ ಗೆಳತಿಯೇ ಅಂತ್ಯ ಹಾಡಿದ್ದಾಳೆ. ಪ್ರೀತಿಯ ಪಾಶಕ್ಕೆ ಬಿದ್ದು, ಜೀವ ಕಳೆದುಕೊಂಡ ಈ ದುರ್ದೈವಿಯ ಹೆಸರು ಮೊಹಮ್ಮದ್ ಆಶಿಕ್.
ಯಾರು ಈ ಮೊಹಮ್ಮದ್ ಆಶಿಕ್?
ಮಂಗಳೂರು ನಗರದ ವಾಮಂಜೂರು ಸಮೀಪದ ಮೂಡುಶೆಡ್ಡೆಯ ನಿವಾಸಿಯಾಗಿದ್ದ ಆಶಿಕ್, ಎದೆಯೆತ್ತರಕ್ಕೆ ಬೆಳೆದು ಪೋಷಕರಿಗೆ ಆಸರೆಯಾಗಬೇಕಿದ್ದ ಮಗ. ಕೂಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಾಗ ಉಳ್ಳಾಲ ಮೂಲದ ಸಮೀಯ ಸಬಾ ಎಂಬಾಕೆಯ ಪರಿಚಯವಾಗಿತ್ತು. ಸ್ನೇಹವಾಗಿ ಶುರುವಾದ ಇವರ ಸಂಬಂಧ ನಂತರ ಪ್ರೀತಿಗೆ ತಿರುಗಿತ್ತು. ಕಾಲೇಜು ಮುಗಿದ ಮೇಲೆ ಆಶಿಕ್ ಅಕೌಂಟೆಂಟ್ ಆಗಿ ಕೆಲಸಕ್ಕೂ ಸೇರಿಕೊಂಡಿದ್ದ. ಆದರೆ, ಈ ಪ್ರೀತಿಯ ಕಥೆ ಹಳಿ ತಪ್ಪಲು ಅತಿ ಹೆಚ್ಚು ಸಮಯ ಹಿಡಿಯಲಿಲ್ಲ.
जिसे ‘भाई’ कहा… वही बना हमसफर
— Felza Pathan (@Firozakpathan) April 15, 2026
स्वरा भास्कर की जिंदगी किसी वायरल फिल्मी कहानी से कम नहीं रही
एक समय था जब उनका नाम लेखक हिमांशु शर्मा से जुड़ा. दोनों का रिश्ता करीब पांच साल तक चला और लिव-इन तक पहुंच गया, लेकिन फिर धीरे-धीरे दूरियां बढ़ीं और ब्रेकअप हो गया।.यह दौर उनके लिए… pic.twitter.com/Z4FyjYo8Ae
ಹಬ್ಬದ ಸಂಭ್ರಮದ ನಡುವೆ ಮಗನ ಸಾವು
ಕಳೆದ ಮಾರ್ಚ್ 21 ರಂದು ಇಡೀ ಕರಾವಳಿ ಮುಸ್ಲಿಮರು ಈದ್ ಹಬ್ಬದ ಸಂಭ್ರಮದಲ್ಲಿದ್ದರು. ಆದರೆ, ಅದೇ ದಿನ ಆಶಿಕ್ ನಿಗೂಢವಾಗಿ ಸಾವನ್ನಪ್ಪಿದ್ದ. ಆರಂಭದಲ್ಲಿ ಕಾವೂರು ಠಾಣೆಯಲ್ಲಿ ಇದೊಂದು ಸಾಮಾನ್ಯ ಆತ್ಮಹತ್ಯೆ (UDR) ಎಂದು ಪ್ರಕರಣ ದಾಖಲಾಗಿತ್ತು. ಆದರೆ, ಈಗ ಈ ಕೇಸ್ಗೆ ಒಂದು ಭೀಕರ ಟ್ವಿಸ್ಟ್ ಸಿಕ್ಕಿದೆ. ತನ್ನ ಮಗನ ಸಾವಿಗೆ ಆತನ ಪ್ರಿಯತಮೆ ಸಮೀಯ ಸಬಾ ಕಾರಣ ಎಂದು ಆಶಿಕ್ ತಂದೆ ಮೊಹಮ್ಮದ್ ಹನೀಫ್ ಈಗ ಪೊಲೀಸರಿಗೆ ದೂರು ನೀಡಿದ್ದಾರೆ.
ವೀಡಿಯೋ ಕಾಲ್ನಲ್ಲೇ ಪ್ರಚೋದನೆ?
ಪೋಷಕರ ಆರೋಪ ಕೇಳಿದರೆ ಮೈ ನಡುಗುತ್ತದೆ. "ಸಮೀಯ ಸಬಾ ನನ್ನ ಮಗನಿಗೆ ಮಾನಸಿಕವಾಗಿ ಭಾರೀ ಕಿರುಕುಳ ನೀಡುತ್ತಿದ್ದಳು. ಮಜಾ ಮಾಡಲು ಆತನನ್ನು ಬಳಸಿಕೊಂಡು, ನಂತರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಆಶಿಕ್ ಆತ್ಮಹತ್ಯೆ ಮಾಡಿಕೊಳ್ಳುವಾಗಲೂ ಆಕೆ ವೀಡಿಯೋ ಕಾಲ್ನಲ್ಲಿದ್ದಳು. ಆತನಿಗೆ ಸಾವು ತಂದುಕೊಳ್ಳುವಂತೆ ಪ್ರಚೋದನೆ ನೀಡಿದ್ದಳು" ಎಂದು ತಂದೆ ಹನೀಫ್ ಕಣ್ಣೀರು ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಕೈ ಸೇರಿವೆ ಸಾಕ್ಷ್ಯಗಳು
ಆಶಿಕ್ ಮತ್ತು ಸಬಾ ನಡುವೆ ಇದ್ದ ಆತ್ಮೀಯತೆಗೆ ಸಾಕ್ಷಿಯಾಗಿ ಅವರ ನಡುವಿನ ಚಾಟ್ಗಳು, ಮೆಸೇಜ್ಗಳು ಮತ್ತು ವೀಡಿಯೋ ಕಾಲ್ಗಳ ವಿವರಗಳನ್ನು ಪೋಷಕರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಈಗ ಈ ದಿಕ್ಕಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಪ್ರೀತಿ ಮಾಡಿದ ತಪ್ಪಿಗೆ ಆಶಿಕ್ ಇಂದು ಬಾರದ ಲೋಕಕ್ಕೆ ಹೋಗಿದ್ದಾನೆ, ಆತನ ಸಾವಿಗೆ ಅಸಲಿ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.
ಮುಖ್ಯಾಂಶಗಳು:
- ಪ್ರಿಯತಮೆಯ ಟಾರ್ಚರ್ ತಾಳಲಾರದೆ ಯುವಕನ ಆತ್ಮಹತ್ಯೆ ಆರೋಪ.
- ಮಂಗಳೂರಿನ ಮೂಡುಶೆಡ್ಡೆಯ ಮೊಹಮ್ಮದ್ ಆಶಿಕ್ ಬಲಿ.
- ಸಮೀಯ ಸಬಾ ವಿರುದ್ಧ ಕಾವೂರು ಠಾಣೆಯಲ್ಲಿ ದೂರು ದಾಖಲು.
- ಆತ್ಮಹತ್ಯೆ ವೇಳೆ ವೀಡಿಯೋ ಕಾಲ್ ಮೂಲಕ ಪ್ರಚೋದನೆ ನೀಡಿದ ಗಂಭೀರ ಆರೋಪ.
ಪ್ರೀತಿಯ ಹೆಸರಿನಲ್ಲಿ ನಡೆಯುವ ಇಂತಹ 'ಟಾರ್ಚರ್'ಗಳು ಎಷ್ಟೋ ಯುವಕರ ಬದುಕನ್ನು ಬಲಿ ಪಡೆಯುತ್ತಿವೆ. ಆಶಿಕ್ ಸಾವಿನ ಕಥೆ ಇಂದಿನ ಯುವ ಪೀಳಿಗೆಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.