Apr 25, 2026 Languages : ಕನ್ನಡ | English

ಕೆಸಿಇಟಿ ಪರೀಕ್ಷೆ ವೇಳೆ ಜನಿವಾರ ಕಿರಿಕ್ - ಕ್ರುಪಾನಿಧಿ ಕಾಲೇಜಿನ ಎಡವಟ್ಟು ಈಗ ರಾಜ್ಯಾದ್ಯಂತ ಚರ್ಚೆ!! ವಿಡಿಯೋ;

ಪರೀಕ್ಷೆ ಅಂದ್ರೆನೇ ಮಕ್ಕಳಿಗೆ ಒಂದು ತರಹದ ಟೆನ್ಷನ್. ಅದರಲ್ಲೂ ಕೆಸಿಇಟಿ ಅಂತಹ ಜೀವನದ ಪ್ರಮುಖ ಪರೀಕ್ಷೆ ಬರೆಯುವಾಗ ಮನಸ್ಸು ಶಾಂತವಾಗಿರಬೇಕು. ಆದರೆ ಬೆಂಗಳೂರಿನಲ್ಲಿ ಈ ಬಾರಿ ನಡೆದ ಘಟನೆ ಮಾತ್ರ ವಿದ್ಯಾರ್ಥಿಗಳನ್ನು ಅಕ್ಷರಶಃ ಕಣ್ಣೀರು ಹಾಕುವಂತೆ ಮಾಡಿದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿಯ ಅತಿಯಾದ ಶಿಸ್ತು ಈಗ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ಕೆಸಿಇಟಿ ಪರೀಕ್ಷೆಯಲ್ಲಿ ಜನಿವಾರ ವಿವಾದ: ವಿದ್ಯಾರ್ಥಿಗಳ ಕಣ್ಣೀರು!! | Photo Credit: ANI
ಕೆಸಿಇಟಿ ಪರೀಕ್ಷೆಯಲ್ಲಿ ಜನಿವಾರ ವಿವಾದ: ವಿದ್ಯಾರ್ಥಿಗಳ ಕಣ್ಣೀರು!! | Photo Credit: ANI

ಕಳೆದ ಏಪ್ರಿಲ್ 23ರಂದು ಬೆಂಗಳೂರಿನ ಕ್ರುಪಾನಿಧಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸುಮಾರು ಏಳು ಮಂದಿ ವಿದ್ಯಾರ್ಥಿಗಳು ಶರ್ಟ್ ಒಳಗೆ ಜನಿವಾರ ಧರಿಸಿದ್ದರು. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸುತ್ತಿದ್ದ ಸಿಬ್ಬಂದಿ, ಜನಿವಾರ ತೆಗೆದರೆ ಮಾತ್ರ ಒಳಗೆ ಬಿಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ವಿದ್ಯಾರ್ಥಿಗಳು ಎಷ್ಟೇ ವಿನಂತಿಸಿದರೂ ಸಿಬ್ಬಂದಿ ಕೇಳಲಿಲ್ಲವಂತೆ. ಕೊನೆಗೆ ಪರೀಕ್ಷೆ ತಪ್ಪಿಹೋಗಬಾರದು ಎಂಬ ಅನಿವಾರ್ಯತೆಯಿಂದ ಆ ಏಳು ಮಂದಿ ವಿದ್ಯಾರ್ಥಿಗಳು ಮನಸ್ಸಿಲ್ಲದ ಮನಸ್ಸಿನಿಂದ ಜನಿವಾರ ತೆಗೆದಿಟ್ಟು ಪರೀಕ್ಷಾ ಕೊಠಡಿಗೆ ಹೋಗಿದ್ದಾರೆ. ಆದರೆ ಈ ಘಟನೆಯಿಂದ ಮನಸ್ಸಿಗೆ ಆದ ನೋವಿನಿಂದಾಗಿ ತಮಗೆ ಪರೀಕ್ಷೆಯ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಯಾವುದೇ ಕಾಂಪಿಟಿಟಿವ್ ಎಕ್ಸಾಮ್ ಅಂದ್ಮೇಲೆ ಫೋನ್, ಮೆಟಲ್ ಐಟಂ ಅಥವಾ ಕಾಪಿ ಮಾಡೋಕೆ ಚಾನ್ಸ್ ಇರೋ ವಸ್ತುಗಳನ್ನ ಬಿಡಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದ್ರೆ, ಈ ಜನಿವಾರ ಅಥವಾ ಧಾರ್ಮಿಕ ದಾರಗಳನ್ನ ತೆಗೆಸಲೇಬೇಕು ಅಂತ ಕೆಇಎ (KEA) ರೂಲ್ಸ್‌ನಲ್ಲಿ ಎಲ್ಲೂ ಹೇಳಿಲ್ಲ. ಹೀಗಿದ್ದೂ ಪರೀಕ್ಷಾ ಕೇಂದ್ರದ ಸಿಬ್ಬಂದಿ ಈ ತರ ಆಟ ಆಡಿರೋದು ನೋಡಿದ್ರೆ, ಅವರಿಗೆ ರೂಲ್ಸ್ ಗೊತ್ತಿಲ್ವಾ ಅಥವಾ ಬೇಕಂತಲೇ ಈ ತರ ಮಾಡಿದ್ದಾರಾ ಅನ್ನೋ ಡೌಟ್ ಎಲ್ಲರಲ್ಲೂ ಶುರುವಾಗಿದೆ.

ಈ ಮ್ಯಾಟರ್ ಗೊತ್ತಾದ ತಕ್ಷಣ ಹೈಯರ್ ಎಜುಕೇಶನ್ ಮಿನಿಸ್ಟರ್ ಎಂ.ಸಿ. ಸುಧಾಕರ್ ಅವರು ಫುಲ್ ಸೀರಿಯಸ್ ಆಗಿದ್ದಾರೆ. ಇದು ಮನುಷ್ಯ ಹಕ್ಕುಗಳನ್ನ ತುಳಿಯೋ ಕೆಲಸ ಅಂತ ಗರಂ ಆಗಿರೋ ಅವರು, ತಪ್ಪು ಮಾಡಿದವರ ಮೇಲೆ ಆಕ್ಷನ್ ತಗೊಳ್ಳಿ ಅಂತ ಪೊಲೀಸರಿಗೆ ಹೇಳಿದ್ದಾರೆ.

ಯಾರೇ ಆದ್ರೂ ಅಷ್ಟೇ, ಬೇರೆಯವರ ನಂಬಿಕೆಗಳನ್ನ ಗೌರವಿಸೋದು ಕಲಿಯಬೇಕು. ಬರೀ ಎಕ್ಸಾಮ್ ಹೆಸರಲ್ಲಿ ಸ್ಟೂಡೆಂಟ್ಸ್‌ಗೆ ಹಿಂಸೆ ಕೊಡೋದು ಸರಿಯಲ್ಲ ಅಂತ ಸರ್ಕಾರ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದೆ. ಇತ್ತ ಕಾಲೇಜ್ ಪ್ರಿನ್ಸಿಪಾಲ್ ಕೂಡ ಮ್ಯಾಟರ್ ಸೀರಿಯಸ್ ಆಗೋದನ್ನ ನೋಡಿ, ಇದಕ್ಕೆ ಕಾರಣವಾದ ಇಬ್ಬರು ಪುರುಷ ಮತ್ತು ಒಬ್ಬ ಮಹಿಳಾ ಸಿಬ್ಬಂದಿನ ಕೆಲಸದಿಂದ ಸಸ್ಪೆಂಡ್ ಮಾಡಿದ್ದಾರೆ.

ಪೋಷಕರು ಕೂಡ ಸಖತ್ ಫೈರ್ ಆಗಿದ್ದಾರೆ. ನಮ್ಮ ಮಕ್ಕಳು ಎಷ್ಟೋ ತಿಂಗಳಿಂದ ಕಷ್ಟಪಟ್ಟು ಓದಿರ್ತಾರೆ. ಇಂಥ ಸಣ್ಣ ಕಾರಣಕ್ಕೆ ಅವರನ್ನ ಟೆನ್ಷನ್‌ಗೆ ತಳ್ಳೋದು ಎಷ್ಟು ಸರಿ? ಜನಿವಾರ ಅಂದ್ರೆ ಬರೀ ದಾರ ಅಲ್ಲ, ಅದೊಂದು ಎಮೋಷನ್. ಅದನ್ನೇ ತೆಗೆಸಿದ ಮೇಲೆ ಮಕ್ಕಳು ನೆಮ್ಮದಿಯಾಗಿ ಎಕ್ಸಾಮ್ ಬರೆಯೋಕೆ ಆಗುತ್ತಾ? ಅಂತ ಕೇಳ್ತಿದ್ದಾರೆ.

ಮುಂದೆ ಇಂಥ ಎಡವಟ್ಟುಗಳು ಮತ್ತೆ ಆಗಬಾರದು ಅಂತ ಕೆಇಎ ಅಧಿಕಾರಿಗಳು ಸ್ಟಾಫ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಧಾರ್ಮಿಕ ದಾರ ಅಥವಾ ಮೆಟಲ್ ಇಲ್ಲದ ವಸ್ತುಗಳನ್ನ ತೆಗೆಸೋ ಅವಶ್ಯಕತೆ ಇಲ್ಲ ಅಂತ ಸರ್ಕಾರ ಇನ್ನೊಂದು ಸಲ ಸ್ಪಷ್ಟವಾಗಿ ಹೇಳಿದೆ.

ಎಕ್ಸಾಮ್ ಪಾರದರ್ಶಕವಾಗಿ ನಡೆಯಲಿ ಅನ್ನೋದ್ರಲ್ಲಿ ಡೌಟೇ ಇಲ್ಲ, ಆದ್ರೆ ಶಿಸ್ತು ಅನ್ನೋ ಹೆಸರಲ್ಲಿ ಮಕ್ಕಳ ಸೆಲ್ಫ್ ರೆಸ್ಪೆಕ್ಟ್‌ಗೆ ಕೈ ಹಾಕಬಾರದು. ಕ್ರುಪಾನಿಧಿ ಕಾಲೇಜಿನ ಈ ಘಟನೆ ಬೇರೆ ಕಡೆ ಎಕ್ಸಾಮ್ ನಡೆಸೋರಿಗೂ ಒಂದು ಒಳ್ಳೆ ಪಾಠವಾಗಲಿ!