Apr 22, 2026 Languages : ಕನ್ನಡ | English

ಗೆಳತಿ ಮನೆ ಅಂತ ಅಂದುಕೊಂಡು ಬೇರೆಯವರ ಬಾತ್‌ರೂಮ್ ನುಗ್ಗಿದ ಯುವತಿ - ಆಮೇಲೆ ಎಂಥಾ ನಾಟಕ ಆಡಿದ್ದಾಳೆ ನೋಡಿ!!

ಇಂದಿನ ಡಿಜಿಟಲ್ ಯುಗದಲ್ಲಿ ದಿನಕ್ಕೊಂದು ವಿಚಿತ್ರ ಘಟನೆಗಳು ನಮಗೆ ಕೇಳಲು ಸಿಗುತ್ತವೆ. ಆದರೆ ಇಂದೋರ್‌ನಲ್ಲಿ ನಡೆದ ಈ ಘಟನೆ ಮಾತ್ರ ನಿಜಕ್ಕೂ ನಂಬಲಸಾಧ್ಯ. ಗೆಳತಿಯನ್ನು ಹುಡುಕಿಕೊಂಡು ಬಂದ ಯುವತಿಯೊಬ್ಬಳು, ಬೇರೆಯವರ ಮನೆ ಬಾತ್‌ರೂಮ್ ನುಗ್ಗಿ ಸೃಷ್ಟಿಸಿದ ರಂಪಾಟ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆಕೆಯ ಶೂನಲ್ಲಿ ಚಾಕು ಇತ್ತಾ? ಆಕೆ ಆತ್ಮಹ*ತ್ಯೆ ನಾಟಕವಾಡಿದ್ದೇಕೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

ಬಾತ್‌ರೂಮ್ ನಾಟಕ – ಮಿಸ್ಟರಿ ಲೇಡಿ ಬಂಧನ! | Photo Credit: https://x.com/mohseenshkh7
ಬಾತ್‌ರೂಮ್ ನಾಟಕ – ಮಿಸ್ಟರಿ ಲೇಡಿ ಬಂಧನ! | Photo Credit: https://x.com/mohseenshkh7

ನಗರದ ಬಡಾವಣೆಯೊಂದರಲ್ಲಿ ಯಾರಿಗೂ ತಿಳಿಯದಂತೆ ಯುವತಿಯೊಬ್ಬಳು ಮನೆಯೊಳಗೆ ನುಗ್ಗಿದ್ದಾಳೆ. ಮನೆಯವರು ಹೊರಗೆ ಹೋದ ಸಮಯ ನೋಡಿ ಬಾತ್‌ರೂಮ್ ಒಳಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ. ಯಾರೋ ಕಳ್ಳರು ನುಗ್ಗಿದ್ದಾರೆ ಎಂದು ಗಾಬರಿಗೊಂಡ ಮನೆಯವರು ಅಕ್ಕಪಕ್ಕದವರನ್ನು ಕರೆದಿದ್ದಾರೆ. ನೆರೆಹೊರೆಯವರೆಲ್ಲಾ ಸೇರಿ ಆಕೆಯನ್ನು ಬಾತ್‌ರೂಮ್‌ನಿಂದ ಹೊರಕ್ಕೆ ಎಳೆದು ತಂದಿದ್ದಾರೆ.

ಹೊರಬಂದ ಆಕೆ ಹೇಳಿದ ಕಾರಣ ಕೇಳಿ ಜನ ದಂಗಾಗಿದ್ದಾರೆ. ;ನಾನು ಗೆಳತಿಯನ್ನು ಭೇಟಿ ಮಾಡಲು ಬಂದೆ, ತಪ್ಪಾಗಿ ಈ ಮನೆಗೆ ಬಂದೆ' ಎಂದು ಸಮಜಾಯಿಷಿ ನೀಡಿದ್ದಾಳೆ. ಆದರೆ ಆಕೆಯ ವರ್ತನೆಯಲ್ಲಿ ಏನೋ ನಿಗೂಢತೆ ಇತ್ತು. ಜನರು ಆಕೆಯನ್ನು ಪೊಲೀಸರಿಗೆ ಒಪ್ಪಿಸಲು ಮುಂದಾದಾಗ ಅಸಲಿ ಸಿನಿಮಾ ಶುರುವಾಗಿದೆ. ತನ್ನ ಶೂನ ಒಳಭಾಗದಲ್ಲಿ ಬಚ್ಚಿಟ್ಟಿದ್ದ ಹರಿತವಾದ ಚಾ*ಕುವನ್ನು ಆಕೆ ಕ್ಷಣಾರ್ಧದಲ್ಲಿ ಹೊರತೆಗೆದಿದ್ದಾಳೆ. ಹತ್ತಿರ ಬಂದರೆ ಇರಿಯುವುದಾಗಿ ಬೆದರಿಸಿದ್ದಲ್ಲದೆ, ಪೊಲೀಸರಿಗೆ ಫೋನ್ ಮಾಡಿದರೆ ತನ್ನ ಕೈಯನ್ನು ತಾನೇ ಕೊಯ್ದುಕೊಳ್ಳುವುದಾಗಿ ಆತ್ಮಹ*ತ್ಯೆ ನಾಟಕವಾಡಿದ್ದಾಳೆ. ಜನರು ಆಕೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ಈಗ ಗಂಭೀರವಾಗಿ ತನಿಖೆ ಮಾಡುತ್ತಿದ್ದಾರೆ. ಇಲ್ಲಿ ಉದ್ಭವಿಸಿರುವ ಪ್ರಮುಖ ಪ್ರಶ್ನೆಗಳೆಂದರೆ, ಗೆಳತಿಯನ್ನು ಭೇಟಿ ಮಾಡಲು ಬರುವವರು ಶೂ ಒಳಗೆ ಚಾಕು ಇಟ್ಟುಕೊಳ್ಳುವುದು ಯಾಕೆ? ಆಕೆ ನಿಜಕ್ಕೂ ಫ್ರೆಂಡ್ ಮನೆಗೆ ಬಂದವಳಾ ಅಥವಾ ಇನ್ಯಾವುದೇ ಕ್ರಿಮಿನಲ್ ಉದ್ದೇಶದಿಂದ ಮನೆಗೆ ನುಗ್ಗಿದ್ದಾಳಾ? ಆಕೆಯ ಮಾನಸಿಕ ಸ್ಥಿತಿ ಹೇಗಿದೆ? ಎನ್ನುವ ಪ್ರಶ್ನೆಗಳು ಕೇಳಿಬಂದಿವೆ. 

ಇಂತಹ ಘಟನೆಗಳು ನಮಗೆ ಎಚ್ಚರಿಕೆಯ ಗಂಟೆಯಾಗಿವೆ. ಹಗಲು ಹೊತ್ತಿನಲ್ಲೂ ಮನೆಯ ಮುಖ್ಯ ಬಾಗಿಲು ಹಾಕಿರುವುದು ಕ್ಷೇಮ. ಅಪರಿಚಿತರು ಕಂಡಾಗ ಕಾನೂನನ್ನು ಕೈಗೆತ್ತಿಕೊಳ್ಳದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಸದ್ಯಕ್ಕೆ ಆ ಮಿಸ್ಟರಿ ಲೇಡಿ ಪೊಲೀಸರ ಅತಿಥಿಯಾಗಿದ್ದಾಳೆ. ಈ ಹೈಡ್ರಾಮಾದ ಹಿಂದಿನ ಅಸಲಿ ಸತ್ಯ ತನಿಖೆಯ ನಂತರವಷ್ಟೇ ಬಯಲಾಗಬೇಕಿದೆ.

Latest News