May 2, 2026 Languages : ಕನ್ನಡ | English

ಮಗಳ ಡೆಲಿವರಿ ಸಮಯದಲ್ಲೂ ಡಿಕೆಶಿ ಆಸ್ಪತ್ರೆಗೆ ಹೋಗಲಿಲ್ಲ ಯಾಕೆ? ಅಸಲಿ ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ!!

ಕರ್ನಾಟಕ ರಾಜಕಾರಣದ 'ಚಾಣಕ್ಯ' ಎಂದೇ ಹೆಸರಾದ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ. ಮೇ 1ರ ಶುಕ್ರವಾರದ ಪುಣ್ಯ ದಿನದಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಾತನಾಗಿ ಬಡ್ತಿ ಪಡೆದಿದ್ದಾರೆ. ಅವರ ಹಿರಿಯ ಪುತ್ರಿ ಐಶ್ವರ್ಯ ಅಮಾರ್ತ್ಯ ಹೆಗ್ಡೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಡಿಕೆಶಿ ಮನೆಯಲ್ಲಿ ಮಹಾಲಕ್ಷ್ಮಿಯ ಆಗಮನ | Photo Credit: https://x.com/Tejasvi_Surya
ಡಿಕೆಶಿ ಮನೆಯಲ್ಲಿ ಮಹಾಲಕ್ಷ್ಮಿಯ ಆಗಮನ | Photo Credit: https://x.com/Tejasvi_Surya

ಅದೃಷ್ಟವಂತೆ ಮೊಮ್ಮಗಳ ಆಗಮನ?

ಐಶ್ವರ್ಯ ಅವರು ಕಾಫಿ ಉದ್ಯಮಿ ದಿವಂಗತ ಸಿದ್ಧಾರ್ಥ ಹೆಗ್ಡೆ ಅವರ ಸೊಸೆ ಹಾಗೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಮೊಮ್ಮಗ ಅಮಾರ್ತ್ಯ ಹೆಗ್ಡೆ ಅವರ ಪತ್ನಿ. ವಿಶೇಷವೆಂದರೆ, ನಿನ್ನೆ ಮೇ 1ರಂದು ಎಸ್.ಎಂ. ಕೃಷ್ಣ ಅವರ ಹುಟ್ಟುಹಬ್ಬವೂ ಇತ್ತು. ಅಜ್ಜನ ಹುಟ್ಟುಹಬ್ಬದಂದೇ ಅವರ ಮೊಮ್ಮಗನಿಗೆ ಮಗು ಜನಿಸಿರುವುದು ಈ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಇನ್ನೊಂದೆಡೆ, ವೈಶಾಖ ಹುಣ್ಣಿಮೆಯ ಶುಭ ಮುಹೂರ್ತದಲ್ಲಿ ಮೊಮ್ಮಗಳು ಜನಿಸಿರುವುದು ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯವಾಗಿ ಅದೃಷ್ಟ ತರಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. "ಮಗಳ ಅದೃಷ್ಟದಿಂದ ಡಿಕ್ಷಿ ಅವರು ಸಿಎಂ ಆದರೂ ಆಗಬಹುದು" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಡಿಕೆಶಿ, ಪುಟ್ಟ ಕಂದಮ್ಮನನ್ನು ಎತ್ತಿ ಮುದ್ದಾಡುತ್ತಿರುವ ಫೋಟೋಗಳು ಈಗ ವೈರಲ್ ಆಗಿವೆ.

ತೇಜಸ್ವಿ ಸೂರ್ಯ ಬಣ್ಣಿಸಿದ 'ಸಾರ್ವಜನಿಕ ಬದುಕು'

ಸಾಮಾನ್ಯವಾಗಿ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಎಣ್ಣೆ-ಸೀಗೆಕಾಯಿಯಂತೆ ಇರುತ್ತಾರೆ. ಆದರೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಬರೆದಿರುವ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ನಿನ್ನೆ ಬೆಂಗಳೂರು ನಗರ ಪ್ರದಕ್ಷಿಣೆಯ ಸಂದರ್ಭದಲ್ಲಿ ಡಿಕೆಶಿ ಅವರ ಜೊತೆ ತೇಜಸ್ವಿ ಸೂರ್ಯ ಮತ್ತು ಆರ್. ಅಶೋಕ್ ಕೂಡ ಇದ್ದರು.

ಆ ಸಮಯದ ಅನುಭವವನ್ನು ತೇಜಸ್ವಿ ಸೂರ್ಯ ಹೀಗೆ ಬರೆದುಕೊಂಡಿದ್ದಾರೆ:

"ನಾವು ಇಂದು ದಿನವಿಡೀ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿ.ಕೆ. ಶಿವಕುಮಾರ್ ಅವರ ಜೊತೆಗಿದ್ದೆವು. ಈ ವೇಳೆ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಕರೆಗಳು ಬರುತ್ತಿದ್ದವು. ಏನಾಗಿದೆ ಎಂದು ನಾವು ವಿಚಾರಿಸಿದಾಗ, 'ಇಂದು ನನ್ನ ಮಗಳ ಡೆಲಿವರಿ ಇದೆ, ನಾನು ತಾತನಾಗುತ್ತಿದ್ದೇನೆ' ಎಂದು ಡಿಕೆಶಿ ಹೇಳಿದರು."

ಖಾಸಗಿ ಬದುಕು ಶೂನ್ಯವೇ?

ತೇಜಸ್ವಿ ಸೂರ್ಯ ಅವರು ಡಿಕೆಶಿ ಅವರ ಕಾರ್ಯಬದ್ಧತೆಯನ್ನು ಮೆಚ್ಚಿಕೊಂಡಿದ್ದಾರೆ. ಒಂದು ಕಡೆ ಮಗಳಿಗೆ ಹೆರಿಗೆಯಾಗುವ ಆತಂಕ ಮತ್ತು ಸಂತೋಷದ ಕ್ಷಣಗಳಿದ್ದರೂ, ಡಿಕೆಶಿ ಅವರು ಫ್ಲೈಓವರ್ ಉದ್ಘಾಟನೆ, ಸ್ಕೈವಾಕ್ ಶಿಲಾನ್ಯಾಸ ಹಾಗೂ ಮೆಟ್ರೋ ಕಂಬಗಳ ಲೈಟಿಂಗ್ ಉದ್ಘಾಟನೆಯಂತಹ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. "ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ ವೈಯಕ್ತಿಕ ಬದುಕು ಎಂಬುದು ಇರುವುದಿಲ್ಲ ಎಂಬ ಮಾತಿಗೆ ನಿನ್ನೆ ಡಿಕೆಶಿ ಅವರ ಸ್ಥಿತಿ ಸಾಕ್ಷಿಯಾಗಿತ್ತು" ಎಂದು ಸೂರ್ಯ ಭಾವುಕರಾಗಿ ಬರೆದಿದ್ದಾರೆ.

ತಾತನಾದ ಡಿ.ಕೆ. ಶಿವಕುಮಾರ್ ಅವರಿಗೆ ಶುಭ ಕೋರಿರುವ ತೇಜಸ್ವಿ ಸೂರ್ಯ, ಮಗು ಮತ್ತು ಕುಟುಂಬಕ್ಕೆ ದೇವರು ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸಿದ್ದಾರೆ. ರಾಜಕೀಯ ಏನೇ ಇರಲಿ, ಮಾನವೀಯ ಸಂಬಂಧಗಳ ವಿಷಯ ಬಂದಾಗ ನಮ್ಮ ನಾಯಕರು ತೋರುವ ಇಂತಹ ಸೌಜನ್ಯ ನಿಜಕ್ಕೂ ಶ್ಲಾಘನೀಯ.

Latest News