ಬೆಂಗಳೂರಿನ ಕನಕಪುರ ರೋಡ್ನಲ್ಲಿರೋ 'ಆರ್ಟ್ ಆಫ್ ಲಿವಿಂಗ್' ಆಶ್ರಮ ಅಂದ ತಕ್ಷಣ ನಮಗೆ ನೆನಪಾಗೋದು ಅಲ್ಲಿನ ಸೈಲೆನ್ಸ್ ಮತ್ತು ಪೀಸ್ ಫುಲ್ ವಾತಾವರಣ. ಆದ್ರೆ, ಈ ವಾರ ಅಲ್ಲಿನ ಸೀನ್ ಪೂರ್ತಿ ಚೇಂಜ್ ಆಗಿತ್ತು! ಎಲ್ಲಿ ಕೇಳಿದ್ರೂ ಮ್ಯೂಸಿಕ್, ಡಾನ್ಸ್ ಮಾಡೋ ಕಲಾವಿದರು.. ಒಟ್ಟಿನಲ್ಲಿ ಕಣ್ಣಿಗೆ ಹಬ್ಬವೋ ಹಬ್ಬ ಅನ್ನೋಂತಿತ್ತು. ಈ ಸ್ಪೆಷಲ್ ಪ್ರೋಗ್ರಾಂಗೆ 'ಭಾವ' ಅಂತ ಹೆಸರಿಟ್ಟಿದ್ರು.
ಇದು ಬರೀ ಒಂದು ಎಂಟರ್ಟೈನ್ಮೆಂಟ್ ಪ್ರೋಗ್ರಾಂ ಅಲ್ಲ; ಇದು ಭಾರತೀಯ ಕಲೆಯ ನಿಜವಾದ ತಾಕತ್ತನ್ನ ತೋರಿಸಿಕೊಟ್ಟ ವೇದಿಕೆ. ನಾಲ್ಕು ದಿನಗಳ ಕಾಲ ನಡೆದ ಈ ಶೃಂಗಸಭೆಯಲ್ಲಿ ದೇಶದ ಮೂಲೆ ಮೂಲೆಯಿಂದ ಬಂದಿದ್ದ ಸುಮಾರು 1000ಕ್ಕೂ ಹೆಚ್ಚು ಯುವ ಕಲಾವಿದರು ತಮ್ಮ ಟ್ಯಾಲೆಂಟ್ ತೋರಿಸಿದ್ರು. ಇಲ್ಲಿನ ವಿಶೇಷ ಅಂದ್ರೆ, ಬರೀ ಯುವಕರಷ್ಟೇ ಅಲ್ಲ, ಭಾರತದ ಕಲಾ ಲೋಕದ ದಿಗ್ಗಜರಾದ 40ಕ್ಕೂ ಹೆಚ್ಚು ಪದ್ಮ ಪ್ರಶಸ್ತಿ ವಿಜೇತ ಹಿರಿಯ ಕಲಾವಿದರು ಒಂದೇ ವೇದಿಕೆಯಲ್ಲಿ ಜಮಾಯಿಸಿದ್ದರು!
ಗುರು-ಶಿಷ್ಯರ ಅಪರೂಪದ ಸಮಾಗಮ
ಇಂದಿನ ಯುವ ಕಲಾವಿದರಿಗೆ ನಮ್ಮ ದೇಶದ ಶ್ರೇಷ್ಠ ಹಿರಿಯ ಕಲಾವಿದರನ್ನ ಭೇಟಿಯಾಗೋದು, ಅವರ ಜೊತೆ ಮಾತಾಡೋದು ಒಂದು ದೊಡ್ಡ ಕನಸು. 'ಭಾವ' ವೇದಿಕೆ ಈ ಕನಸನ್ನ ನನಸು ಮಾಡಿಕೊಡ್ತು. ಸೀನಿಯರ್ ಆರ್ಟಿಸ್ಟ್ಗಳು ಯುವ ಪೀಳಿಗೆಗೆ ಒಂದೇ ಮಾತು ಹೇಳಿದ್ರು – "ಕಲೆ ಅನ್ನೋದು ಬರೀ ಸ್ಟೇಜ್ ಮೇಲೆ ತೋರಿಸೋ ಪರ್ಫಾರ್ಮೆನ್ಸ್ ಅಲ್ಲ, ಅದು ನಮ್ಮ ಜೀವನದ ಒಂದು ಭಾಗ ಮತ್ತು ನಮ್ಮ ಆತ್ಮದ ಹಾದಿ."
Inaugurated “Bhaav”, an annual congregation of artistes from across India. This edition brought together over 1000 budding artistes, 40+ Padma awardees and celebrated artistes for a 4-day summit at the Bangalore Ashram. pic.twitter.com/O3azYeRbj5
— Gurudev Sri Sri Ravi Shankar (@Gurudev) May 7, 2026
ಸಂಸ್ಕೃತಿಯನ್ನ ಉಳಿಸೋ ಹೊಸ ಹಾದಿ
ಇವತ್ತಿನ ಮೊಬೈಲ್ ಮತ್ತು ಡಿಜಿಟಲ್ ಕಾಲದಲ್ಲಿ ನಮ್ಮ ಸಾಂಪ್ರದಾಯಿಕ ಕಲೆಗಳು ಕಣ್ಮರೆಯಾಗುತ್ತಿವೆ ಅನ್ನೋ ಆತಂಕ ಎಲ್ಲರಲ್ಲೂ ಇದೆ. ಆದರೆ 'ಭಾವ' ಅಂತಹ ಆತಂಕಗಳಿಗೆ ಒಂದು ಭರವಸೆಯ ಉತ್ತರ ನೀಡಿದೆ. ಇಲ್ಲಿ ಕೇವಲ ಹಾಡು, ನೃತ್ಯ ಅಷ್ಟೇ ಅಲ್ಲದೆ ಚಿತ್ರಕಲೆಯ ಬಗ್ಗೆಯೂ ಗಂಭೀರವಾದ ಚರ್ಚೆಗಳು ನಡೆದವು. ಆಶ್ರಮದ ಪ್ರಶಾಂತ ವಾತಾವರಣದಲ್ಲಿ ಕುಳಿತು, ಹಿರಿಯರು ತಮ್ಮ ಕಲಾ ಅನುಭವವನ್ನ ಮುಂದಿನ ಪೀಳಿಗೆಗೆ ಹೇಗೆ ಹಸ್ತಾಂತರಿಸಬೇಕು ಅನ್ನೋದನ್ನ ಎಳೆ ಎಳೆಯಾಗಿ ವಿವರಿಸಿದ್ರು.
ಈ 'ಭಾವ' ಶೃಂಗದ ಮುಖ್ಯ ಉದ್ದೇಶವೇ ಹಳೆಯ ಮತ್ತು ಹೊಸ ಪೀಳಿಗೆಯ ಕಲೆಯ ನಡುವೆ ಒಂದು ಗಟ್ಟಿ ಸೇತುವೆ ಕಟ್ಟುವುದು. ಬೆಂಗಳೂರಿನಲ್ಲಿ ನಡೆದ ಈ ನಾಲ್ಕು ದಿನಗಳ ಕಲಾ ಪೂಜೆ ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿತ್ತು. ಕಲೆ ಅಂದ್ರೆ ಬರೀ ಮನರಂಜನೆ ಅಲ್ಲ, ಅದು ನಮ್ಮ ಸಂಸ್ಕೃತಿಯ ಉಸಿರು ಅನ್ನೋದನ್ನ ಈ ಕಾರ್ಯಕ್ರಮ ಮತ್ತೊಮ್ಮೆ ಸಾಬೀತುಪಡಿಸಿದೆ.