ಕೊಪ್ಪಳದಲ್ಲಿ ಮಹಾಶಿವರಾತ್ರಿ ಉಪವಾಸದ ಹಿನ್ನಲೆಯಲ್ಲಿ ಐದು ದಿನಗಳ ಕಾಲ ಹಣ್ಣು, ಜೇನು ಮತ್ತು ಅಣಬೆ ಮೇಳ ಆರಂಭವಾಗಿದೆ. ತೋಟಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಲಾದ ಈ ಮೇಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಚಾಲನೆ ನೀಡಿದರು. ಅವರಿಗೆ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಸಹ ಸಾಥ್ ನೀಡಿದರು.
ಮೇಳದಲ್ಲಿ ಜನರ ಗಮನ ಸೆಳೆದದ್ದು ಅತ್ಯಂತ ದುಬಾರಿ ಅಣಬೆ ಪ್ರದರ್ಶನ. ಹಿಮಾಲಯ ಪ್ರದೇಶದಲ್ಲಿ ದೊರೆಯುವ ಯರ್ಸುಗುಂಬಾ ಅಣಬೆ, ಒಂದು ಕಿಲೋಗೆ ಸುಮಾರು ₹15-20 ಲಕ್ಷ ಬೆಲೆ ಬಾಳುತ್ತದೆ. ಈ ಅಣಬೆ ಪ್ರದರ್ಶನವು ಜನರಲ್ಲಿ ಕುತೂಹಲ ಮೂಡಿಸಿದೆ. ಜೊತೆಗೆ ಇನ್ನೂ ಹಲವು ದುಬಾರಿ ಅಣಬೆ ತಳಿಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯುತ್ತಿದೆ.
ಅಣಬೆಗಳ ಜೊತೆಗೆ ವಿವಿಧ ಉತ್ಪನ್ನಗಳನ್ನೂ ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ. ಹಣ್ಣುಗಳ ವಿಭಾಗದಲ್ಲಿ ಪೇರಲೆ, ದಾಳಿಂಬೆ, ದ್ರಾಕ್ಷಿ, ಕಲ್ಲಂಗಡಿ, ಕರಬೂಜ್, ಜ ಹಣ್ಣು ಸೇರಿದಂತೆ ಹಲವು ಹಣ್ಣುಗಳು ಲಭ್ಯವಿವೆ. ಜೊತೆಗೆ ಶುದ್ಧ ಜೇನು ಮಾರಾಟವೂ ನಡೆಯುತ್ತಿದೆ. ಮೇಳದಲ್ಲಿ ಜನರಿಗೆ ಆರೋಗ್ಯಕರ ಆಹಾರ ಪದಾರ್ಥಗಳ ಪರಿಚಯ ನೀಡುವ ಉದ್ದೇಶವಿದೆ. ಉಪವಾಸದ ಸಮಯದಲ್ಲಿ ಹಣ್ಣು, ಜೇನು, ಅಣಬೆಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂದೇಶವನ್ನು ಮೇಳದ ಮೂಲಕ ಸಾರಲಾಗುತ್ತಿದೆ.
ಫೆಬ್ರವರಿ 12ರಿಂದ ಫೆಬ್ರವರಿ 16ರವರೆಗೆ ನಡೆಯುವ ಈ ಮೇಳ, ಕೊಪ್ಪಳದ ಜನರಿಗೆ ವಿಶೇಷ ಆಕರ್ಷಣೆಯಾಗಿದೆ. ಕುಟುಂಬ ಸಮೇತರಾಗಿ ಬಂದು ಹಣ್ಣು, ಜೇನು, ಅಣಬೆಗಳ ವೈವಿಧ್ಯಮಯ ಪ್ರದರ್ಶನವನ್ನು ವೀಕ್ಷಿಸಲು ಅವಕಾಶ ದೊರೆಯುತ್ತಿದೆ. ಮಹಾಶಿವರಾತ್ರಿ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಆರಂಭವಾದ ಈ ಹಣ್ಣು, ಜೇನು, ಅಣಬೆ ಮೇಳ, ಆರೋಗ್ಯ ಮತ್ತು ಸಂಸ್ಕೃತಿಯನ್ನು ಒಟ್ಟಿಗೆ ಕೊಂಡೊಯ್ಯುವ ವಿಶಿಷ್ಟ ಪ್ರಯತ್ನವಾಗಿದೆ. ಜನರಲ್ಲಿ ಆರೋಗ್ಯಕರ ಆಹಾರ ಸೇವನೆಗೆ ಪ್ರೇರಣೆ ನೀಡುವ ಈ ಮೇಳ, ಸ್ಥಳೀಯರಿಗೆ ಸಂತೋಷ ಮತ್ತು ಕುತೂಹಲ ಮೂಡಿಸಿದೆ.