Apr 27, 2026 Languages : ಕನ್ನಡ | English

ಕರ್ನಾಟಕ ವೆದರ್ ಅಪ್‌ಡೇಟ್ - ಒಂದೆಡೆ ಬಿಸಿಲ ಬೇಗೆ, ಇನ್ನೊಂದೆಡೆ ಮಳೆಯ ಆರ್ಭಟ!!

ಇವತ್ತು ರಾಜ್ಯದ ಹವಾಮಾನ ಒಂತರ ವಿಚಿತ್ರವಾಗಿದೆ. ಒಂದೆಡೆ ಸೂರ್ಯ ಕೆಂಡ ಉಗುಳ್ತಿದ್ರೆ, ಇನ್ನೊಂದೆಡೆ ವರುಣ ದೇವ ತಂಪೆರೆಯೋಕೆ ರೆಡಿಯಾಗಿದ್ದಾನೆ. ಹವಾಮಾನ ಇಲಾಖೆ ಕೊಟ್ಟಿರೋ ಲೇಟೆಸ್ಟ್ ಅಪ್‌ಡೇಟ್ ಪ್ರಕಾರ, ರಾಜ್ಯದಲ್ಲಿ ಉಷ್ಣ ಅಲೆ (Heat Wave) ಜೊತೆಗೆ ಗುಡುಗು ಸಹಿತ ಮಳೆಯಾಗೋ ಸಾಧ್ಯತೆ ದಟ್ಟವಾಗಿದೆ.

ಬಿಸಿಲು Vs ಮಳೆ
ಬಿಸಿಲು Vs ಮಳೆ

ಕರಾವಳಿ ಜನರೇ ಎಚ್ಚರ: ಇಲ್ಲಿ 'ಯೆಲ್ಲೋ ಅಲರ್ಟ್'!

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಇವತ್ತು ಡಬಲ್ ಟೆನ್ಷನ್. ಇಲ್ಲಿ ಬಿಸಿಲು ಮಾಮೂಲಿಗಿಂತ ಜಾಸ್ತಿ ಇರಲಿದ್ದು, ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಬಿಸಿಲ ಧಾಖಲೆ ಎಷ್ಟಿದೆಯಪ್ಪಾ ಅಂದ್ರೆ ಮುಂದಿನ ದಿನಗಳಲ್ಲಿ ತಾಪಮಾನ ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್‌ ತಲುಪಿದ್ರೂ ಅಚ್ಚರಿಯಿಲ್ಲ! ಆದ್ರೆ ಒಂದು ಸಮಾಧಾನದ ವಿಷಯ ಅಂದ್ರೆ, ಸಂಜೆ ಹೊತ್ತಿಗೆ ಗುಡುಗು ಸಹಿತ ಮಳೆಯಾಗಿ ಸ್ವಲ್ಪ ಕೂಲ್ ಆಗೋ ಚಾನ್ಸ್ ಕೂಡ ಇದೆ. ಈ ಪರಿಸ್ಥಿತಿ ಮುಂದಿನ 5 ದಿನಗಳ ಕಾಲ ಮುಂದುವರಿಯಲಿದೆ.

ಉತ್ತರ ಒಳನಾಡಿನಲ್ಲಿ ಗುಡುಗು-ಮಿಂಚಿನ ಆಟ

ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಭಾಗದ ಜನರಿಗೆ ಇವತ್ತು ಮಳೆಯ ಸಿಂಚನವಾಗಲಿದೆ. ಬರಿ ಮಳೆಯಲ್ಲ, ಜೊತೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಜೋರು ಗಾಳಿ ಕೂಡ ಬೀಸಲಿದೆ. ಧೂಳಿನಿಂದ ಸ್ವಲ್ಪ ಜಾಗರೂಕರಾಗಿರಿ!

ದಕ್ಷಿಣ ಒಳನಾಡಲ್ಲೂ ವರುಣನ ಎಂಟ್ರಿ

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಿಡಿಲು-ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮಧ್ಯಾಹ್ನದವರೆಗೆ ಅತಿಯಾದ ಸೆಕೆ ಇದ್ದರೂ, ಸಂಜೆ ಹೊತ್ತಿಗೆ ವಾತಾವರಣ ತಂಪಾಗಲಿದೆ.

ಬಿಸಿಲಿನಿಂದ ಬಚಾವ್ ಆಗೋದು ಹೇಗೆ? (ವೈದ್ಯರ ಸಲಹೆಗಳು)

ಈ ಬಾರಿ ಬಿಸಿಲು ತುಂಬಾ ಡೇಂಜರಸ್ ಆಗಿದೆ. ಹೀಟ್ ಸ್ಟ್ರೋಕ್ ಅಥವಾ ಉಷ್ಣಾಘಾತದಿಂದ ತಪ್ಪಿಸಿಕೊಳ್ಳಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ:

ಟೈಮಿಂಗ್ ಮುಖ್ಯ: ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅತಿ ಹೆಚ್ಚು ಬಿಸಿಲಿರುತ್ತೆ. ಹಾಗಾಗಿ ತುಂಬಾ ಎಮರ್ಜೆನ್ಸಿ ಇಲ್ಲದಿದ್ರೆ ಮನೆಯಿಂದ ಹೊರಗೆ ಹೋಗ್ಬೇಡಿ.

ನೀರು ಕುಡಿಯೋದನ್ನ ಮರಿಬೇಡಿ: ಬಾಯಾರಿಕೆ ಆಗದಿದ್ರೂ ಆಗಾಗ ನೀರು ಕುಡಿಯುತ್ತಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲೇ ಮಾಡಿದ ಫ್ರೆಶ್ ಜ್ಯೂಸ್ ಕುಡಿಯೋದು ಬೆಸ್ಟ್.

ಡ್ರೆಸ್ ಸೆನ್ಸ್: ಕಪ್ಪು ಅಥವಾ ದಪ್ಪ ಬಟ್ಟೆ ಬೇಡ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿ ಕಡ್ಡಾಯವಾಗಿ ಬಳಸಿ.

ಇವುಗಳಿಗೆ 'ನೋ' ಹೇಳಿ: ಕಾಫಿ, ಟೀ ಅಥವಾ ಸಕ್ಕರೆ ಜಾಸ್ತಿ ಇರೋ ಕೂಲ್ ಡ್ರಿಂಕ್ಸ್ ಕುಡಿಯೋದನ್ನ ಕಡಿಮೆ ಮಾಡಿ. ಇವು ನಿಮ್ಮ ದೇಹದಲ್ಲಿರೋ ನೀರಿನಂಶವನ್ನ ಬೇಗ ಕಡಿಮೆ ಮಾಡಿಬಿಡುತ್ತವೆ (Dehydration).

ಮಕ್ಕಳ ಬಗ್ಗೆ ಗಮನವಿರಲಿ: ಈಗ ಸ್ಕೂಲ್ ರಜೆ ಅಂತ ಮಕ್ಕಳು ಮಧ್ಯಾಹ್ನ ಬಿಸಿಲಲ್ಲಿ ಆಟ ಆಡೋಕೆ ಹೋಗ್ತಾರೆ. ದಯವಿಟ್ಟು ಅವರನ್ನ ಮನೆಯೊಳಗೆ ಇರುವಂತೆ ನೋಡಿಕೊಳ್ಳಿ.

ಕರ್ನಾಟಕದ ಹವಾಮಾನ ಇವತ್ತು 'ಬಿಸಿ ಬಿಸಿ-ತಂಪು ತಂಪು' ಅನ್ನೋ ಹಾಗಿದೆ. ಬಿಸಿಲಿಗೆ ಮೈ ಒಡ್ಡದೆ ಆರೋಗ್ಯ ಕಾಪಾಡಿಕೊಳ್ಳಿ. ಮಳೆ ಬಂದಾಗ ಮರದ ಕೆಳಗೆ ಅಥವಾ ವಿದ್ಯುತ್ ಕಂಬಗಳ ಹತ್ತಿರ ನಿಲ್ಲಬೇಡಿ, ಸಿಡಿಲಿನ ಭಯ ಇರುತ್ತೆ.

Latest News