May 9, 2026 Languages : ಕನ್ನಡ | English

ತಮಿಳುನಾಡು ಸಿಎಂ ಆಗ್ತಾರಾ ವಿಜಯ್? ಸ್ಟಾಲಿನ್ ಸರ್ಕಾರ ಪತನಕ್ಕೆ ಕ್ಷಣಗಣನೆ!! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಚೆನ್ನೈ: ತಮಿಳುನಾಡು ರಾಜಕೀಯ ಅಂದ್ರೆ ಅಲ್ಲಿ ಬರೀ ಬಣ್ಣದ ಮಾತುಗಳಿರಲ್ಲ, ಬದಲಿಗೆ ಸಿನಿಮಾ ರೇಂಜ್‌ಗೆ ಟ್ವಿಸ್ಟ್‌ಗಳಿರುತ್ತವೆ. ಈಗ ಅಲ್ಲಿನ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಅಂಥದ್ದೇ ಒಂದು ಭರ್ಜರಿ ಕ್ಲೈಮ್ಯಾಕ್ಸ್ ಶುರುವಾಗಿದೆ. ಸದಾ ಕಾಲ ಕಚ್ಚಾಡುತ್ತಿದ್ದ ಡಿಎಂಕೆ (DMK) ಮತ್ತು ಎಡಿಎಂಕೆ (AIADMK) ಈಗ "ಕೈ ಕೈ" ಹಿಡಿಯುವ ಲಕ್ಷಣಗಳು ಕಾಣುತ್ತಿವೆ! ಇದಕ್ಕೆಲ್ಲಾ ಕಾರಣ ಬೇರೆ ಯಾರೂ ಅಲ್ಲ, ಅದೇ 'ದಳಪತಿ' ವಿಜಯ್.

ದಳಪತಿ ಎಫೆಕ್ಟ್
ದಳಪತಿ ಎಫೆಕ್ಟ್

ಅಖಾಡಕ್ಕೆ ಬಂದ ವಿಜಯ್; ಬೆಚ್ಚಿಬಿದ್ದ ಘಟಾನುಘಟಿಗಳು!

ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ ಚುನಾವಣೆಯಲ್ಲಿ ಮ್ಯಾಜಿಕ್ ಮಾಡಿದೆ. ಆದರೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಇಂಥ ಹೊತ್ತಿನಲ್ಲಿ ವಿಜಯ್ ಅವರನ್ನು ಅಧಿಕಾರದಿಂದ ದೂರ ಇಡಲು ಹಳೆ ಶತ್ರುಗಳೆಲ್ಲಾ ಈಗ ಮಿತ್ರರಾಗಲು ಸಜ್ಜಾಗಿದ್ದಾರೆ. ವಿಜಯ್ ಎಂಬ "ಪವರ್" ಎದುರು ಸದ್ಯಕ್ಕೆ ಡಿಎಂಕೆ, ಎಡಿಎಂಕೆ ಮತ್ತು ಬಿಜೆಪಿ ಕೂಡ ಒಳಗೊಳಗೇ ಒಂದಾಗುತ್ತಿವೆಯೇ ಎಂಬ ಅನುಮಾನ ಕಾಡುತ್ತಿದೆ.

ಸ್ಟಾಲಿನ್ ಕೊಟ್ಟ ಆ ಒಂದು ಹಿಂಟ್!

ಇತ್ತೀಚೆಗೆ ನಡೆದ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಂದು ಮಾತು ಹೇಳಿದ್ದಾರೆ- "ನಮ್ಮ ಪಕ್ಷ ಉಳಿಯಬೇಕು ಅಂದ್ರೆ ನಾನು ಕೆಲವು ಕಠಿಣ ನಿರ್ಧಾರ ತಗೋಬೇಕಾಗುತ್ತೆ, ನೀವೆಲ್ಲಾ ಸಾಥ್ ಕೊಡ್ತೀರಾ?" ಅಂತ. ಅದಕ್ಕೆ ಅವರ ಶಾಸಕರು ಕೂಡ "ನೀವು ಏನು ಮಾಡಿದ್ರೂ ಓಕೆ" ಅಂದುಬಿಟ್ಟಿದ್ದಾರೆ. ಈ ಮಾತು ಕೇಳಿದ ಮೇಲೆ ರಾಜಕೀಯ ಪಂಡಿತರಿಗೆ ಅರ್ಥವಾಗಿದ್ದು ಒಂದೇ- ಸ್ಟಾಲಿನ್ ಅವರು ಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಫ್ಲಾನ್ ಮಾಡ್ತಿದ್ದಾರೆ ಅಂತ!

ವಿಜಯ್ ಶಾಸಕರ 'ರಾಜೀನಾಮೆ' ಅಸ್ತ್ರ

ತಮಿಳುನಾಡಿನ ಈ ರಾಜಕೀಯ ಕಿತ್ತಾಟದ ನಡುವೆ ವಿಜಯ್ ಸುಮ್ಮನೆ ಕೂತಿಲ್ಲ. ಒಂದು ವೇಳೆ ಡಿಎಂಕೆ ಮತ್ತು ಎಡಿಎಂಕೆ ಸೇರಿ ಸರ್ಕಾರ ಮಾಡಿದ್ರೆ, ಅದು ಜನರಿಗೆ ಮಾಡುವ ದ್ರೋಹ ಅಂತ ವಿಜಯ್ ಪಕ್ಷದ ಶಾಸಕರು ಗರಂ ಆಗಿದ್ದಾರೆ. "ನೀವೇನಾದ್ರೂ ಆ ರೀತಿ ಅಕ್ರಮ ಮೈತ್ರಿ ಮಾಡಿಕೊಂಡರೆ, ನಾವೆಲ್ಲಾ ಒಂದೇ ಸಲಕ್ಕೆ ರಾಜೀನಾಮೆ ಕೊಟ್ಟು ಹೊರಬರುತ್ತೇವೆ" ಅಂತ ಟಿವಿಕೆ ಶಾಸಕರು ಎಚ್ಚರಿಕೆ ಕೊಟ್ಟಿದ್ದಾರೆ. ಇದು ನಡೆದರೆ ತಮಿಳುನಾಡಿನಲ್ಲಿ ದೊಡ್ಡ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವುದು ಗ್ಯಾರಂಟಿ.

ರಾಜ್ಯಪಾಲರ ಕಡಕ್ ವಾರ್ನಿಂಗ್!

ಈ ಹಗ್ಗಜಗ್ಗಾಟದ ನಡುವೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಎಂಟ್ರಿ ಕೊಟ್ಟಿದ್ದಾರೆ. "ನೋಡಿ ಸ್ವಾಮಿ, ಯಾರೇ ಸರ್ಕಾರ ಮಾಡಲಿ, ನಿಮಗೆ 118 ಶಾಸಕರ ಬಲ ಇರಲೇಬೇಕು. ಅದನ್ನೂ ನೀವು ವಿಧಾನಸಭೆಯಲ್ಲೇ ಸಾಬೀತು ಮಾಡಬೇಕು. ನನ್ನ ಮುಂದೆ ಕುದುರೆ ವ್ಯಾಪಾರ (Horse Trading) ನಡೆಸಲು ಯಾರೂ ಬರಬೇಡಿ" ಎಂದು ಕಡಕ್ ಆಗಿ ಹೇಳಿದ್ದಾರೆ.

ಈಗ ಮುಂದೇನು?

ಹೊಸ ಮೈತ್ರಿಕೂಟ: ಎಡಪ್ಪಾಡಿ ಪಳನಿಸ್ವಾಮಿ ಅವರು ಈಗಾಗಲೇ ಉದಯನಿಧಿ ಸ್ಟಾಲಿನ್ ಜೊತೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಇವರು ಒಂದಾದರೆ ತಮಿಳುನಾಡು ಇತಿಹಾಸದಲ್ಲೇ ಇದು ದೊಡ್ಡ ಅಚ್ಚರಿ.

ವಿಜಯ್ ನಡೆ: ಶಾಸಕರ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ಹೋಗುವ ಪ್ಲಾನ್‌ನಲ್ಲಿ ವಿಜಯ್ ಇದ್ದಾರಾ? ಎಂಬುದು ಸದ್ಯದ ಕುತೂಹಲ.

ಜನರ ರಿಯಾಕ್ಷನ್: ಸದಾ ಕಚ್ಚಾಡುತ್ತಿದ್ದ ಡಿಎಂಕೆ-ಎಡಿಎಂಕೆ ಒಂದಾದರೆ ತಮಿಳುನಾಡಿನ ಮತದಾರ ಪ್ರಭು ಸುಮ್ಮನಿರುತ್ತಾನಾ?

ತಮಿಳುನಾಡಿನ ಸಿಂಹಾಸನ ಯಾರ ಪಾಲಾಗುತ್ತೆ ಅನ್ನೋದು ಈಗ 'ಸಸ್ಪೆನ್ಸ್ ಥ್ರಿಲ್ಲರ್' ಸಿನಿಮಾ ತರಹ ಆಗಿದೆ. ದ್ರಾವಿಡ ಪಕ್ಷಗಳು ಒಂದಾಗಿ ವಿಜಯ್ ಆಟಕ್ಕೆ ಬ್ರೇಕ್ ಹಾಕ್ತಾರಾ ಅಥವಾ ವಿಜಯ್ ಅವರೇ ಪಾರುಪತ್ಯ ಮೆರಿತಾರಾ ಅನ್ನೋದನ್ನ ಕಾದು ನೋಡಬೇಕು!

Latest News