Apr 27, 2026 Languages : ಕನ್ನಡ | English

ನೂರಕ್ಕೆ 20 ರೋಗಿಗಳಿಗೆ ಮಾತ್ರ ಚಿಕಿತ್ಸೆ - ಕೆ.ಸಿ. ಜನರಲ್ ಆಸ್ಪತ್ರೆಯ ದಯನೀಯ ಸ್ಥಿತಿಯ 'ರಿಯಾಲಿಟಿ ಚೆಕ್' ಇಲ್ಲಿದೆ!!

ಬೆಂಗಳೂರಿನ ಮಲ್ಲೇಶ್ವರಂ ಅಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಪ್ರತಿಷ್ಠಿತ ಕೆ.ಸಿ. ಜನರಲ್ ಆಸ್ಪತ್ರೆ. ದಿನಕ್ಕೆ ಸಾವಿರಾರು ಬಡ ರೋಗಿಗಳು ನಂಬಿ ಬರೋ ಜಾಗ ಇದು. ಆದ್ರೆ ಈಗ ಇಲ್ಲಿನ ಸ್ಥಿತಿ ನೋಡಿದ್ರೆ "ಅಯ್ಯೋ ಪಾಪ" ಅನ್ನಿಸದೇ ಇರದು. ಯಾಕಂದ್ರೆ, ಸ್ವತಃ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕ್ಷೇತ್ರದಲ್ಲೇ ಇವತ್ತು ರೋಗಿಗಳು ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರೆ!

ಆಸ್ಪತ್ರೆ ಕೆಲಸ ಬಿಟ್ಟು ಮನೆ ಮನೆ ಅಲೆಯುತ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ | Photo Credit: k-c-general-hospital-implemented-clarity-medical-solution
ಆಸ್ಪತ್ರೆ ಕೆಲಸ ಬಿಟ್ಟು ಮನೆ ಮನೆ ಅಲೆಯುತ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ | Photo Credit: k-c-general-hospital-implemented-clarity-medical-solution

ವಿಷಯ ಏನಪ್ಪಾ ಅಂದ್ರೆ..

ಬೆಂಗಳೂರಿನಲ್ಲಿ ಇವತ್ತು ಜನಗಣತಿ ಕಾರ್ಯ ನಡೀತಿದೆ. ದೇಶಕ್ಕೆ ಇದು ಬೇಕು ನಿಜ, ಆದ್ರೆ ಈ ಕೆಲಸಕ್ಕೆ ಯಾರನ್ನ ಬಳಸಿಕೊಳ್ತಿದ್ದಾರೆ ಗೊತ್ತಾ? ಕೆ.ಸಿ. ಜನರಲ್ ಆಸ್ಪತ್ರೆಯ ಎಕ್ಸ್‌ರೇ ಮಾಡುವವರು, ಲ್ಯಾಬ್ ಟೆಕ್ನಿಶಿಯನ್‌ಗಳು ಮತ್ತು ಫಿಸಿಯೋಥೆರಪಿಸ್ಟ್‌ಗಳನ್ನ! ಆಸ್ಪತ್ರೆಯ ಸುಮಾರು 20ಕ್ಕೂ ಹೆಚ್ಚು ಮೇನ್ ಸ್ಟಾಫ್ ಈಗ ಪೆನ್ನು-ಪೇಪರ್ ಹಿಡಿದು ಜನರ ಮನೆ ಬಾಗಿಲಿಗೆ ಹೋಗಿದ್ದಾರೆ.

ಹಾಗಾದ್ರೆ ಆಸ್ಪತ್ರೆಗೆ ಬರೋ ರೋಗಿಗಳ ಕಥೆ ಏನು? ಇದನ್ನೇ ಈಗ ಜನ ಪ್ರಶ್ನೆ ಮಾಡ್ತಿರೋದು. "ಆರೋಗ್ಯ ಸೇವೆ ಕೊಡೋದು ಫಸ್ಟ್ ಕೆಲಸನಾ? ಅಥವಾ ಜನಗಣತಿ ಮಾಡೋದು ಫಸ್ಟ್ ಕೆಲಸನಾ?" ಅನ್ನೋದು ಈಗಿರೋ ಬಿಗ್ ಕ್ವಶ್ಚನ್.

ನೂರಕ್ಕೆ ಇಪ್ಪತ್ತು ಮಾತ್ರ! (ರಿಯಾಲಿಟಿ ಚೆಕ್)

ಇವತ್ತು ಆಸ್ಪತ್ರೆಗೆ ಹೋದ್ರೆ ಅಲ್ಲಿನ ದೃಶ್ಯ ನಿಜಕ್ಕೂ ದಯನೀಯವಾಗಿದೆ:

ಎಕ್ಸ್‌ರೇ: ದಿನಕ್ಕೆ 100-120 ಎಕ್ಸ್‌ರೇ ಆಗ್ತಿದ್ದ ಜಾಗದಲ್ಲಿ ಇವತ್ತು ಬರೀ 20 ಎಕ್ಸ್‌ರೇ ಆಗಿದೆ. ಉಳಿದವರೆಲ್ಲಾ ನೋವಿನಲ್ಲೇ ಅಲೆದಾಡ್ತಿದ್ದಾರೆ.

ಲ್ಯಾಬ್ ಟೆಸ್ಟ್: ದಿನಕ್ಕೆ 600ಕ್ಕೂ ಹೆಚ್ಚು ಜನ ಟೆಸ್ಟ್ ಮಾಡಿಸೋಕೆ ಬರ್ತಾರೆ. ಆದ್ರೆ ರಿಪೋರ್ಟ್ ಕೊಡೋಕೆ ಸ್ಟಾಫ್ ಇಲ್ಲದೆ ಲ್ಯಾಬ್‌ಗಳು ಖಾಲಿ ಹೊಡೆಯುತ್ತಿವೆ.

ಫಿಸಿಯೋಥೆರಪಿ: 40 ಜನ ಪೇಷಂಟ್ ಬಂದಿದ್ರೆ, ಕೇವಲ 10 ಜನರಿಗೆ ಮಾತ್ರ ಟ್ರೀಟ್ಮೆಂಟ್ ಸಿಕ್ಕಿದೆ.

ದೂರದ ಊರುಗಳಿಂದ, ಬಡತನದ ಮಧ್ಯೆ ಬಸ್ ಚಾರ್ಜ್ ಹಾಕಿಕೊಂಡು ಬರೋ ಜನರಿಗೆ ಇಲ್ಲಿ ಟೆಸ್ಟ್ ಆಗದಿದ್ರೆ ಅವರು ಖಾಸಗಿ ಲ್ಯಾಬ್‌ಗಳಿಗೆ ಹೋಗ್ಬೇಕು. ಆ ಪ್ರೈವೇಟ್ ಲ್ಯಾಬ್‌ಗಳಲ್ಲಿ ಸಾವಿರ ಸಾವಿರ ಹಣ ಕೊಡೋಕೆ ಇವರ ಹತ್ರ ದುಡ್ಡಿದ್ರೆ ಇಲ್ಲಿಗೆ ಯಾಕೆ ಬರ್ತಿದ್ರು?

ಯಾರ್ಯಾರು ಮಿಸ್ಸಿಂಗ್?

ಲ್ಯಾಬ್ ಟೆಕ್ನಿಶಿಯನ್ಸ್, ಎಕ್ಸ್‌ರೇ ಟೆಕ್ನಾಲಜಿಸ್ಟ್, ಫಿಸಿಯೋಥೆರಫಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ನೇತ್ರಾಧಿಕಾರಿ.. ಹೀಗೆ ಆಸ್ಪತ್ರೆಯ ಬೆನ್ನೆಲುಬಾಗಿರಬೇಕಾದವರನ್ನೇ ಜನಗಣತಿಗೆ ಕಳುಹಿಸಲಾಗಿದೆ. ಆಡಳಿತ ವಿಭಾಗದವರು ಹೋದ್ರೆ ಓಕೆ, ಆದ್ರೆ ಟೆಕ್ನಿಕಲ್ ಸ್ಟಾಫ್ ಇಲ್ಲದೆ ಹೋದ್ರೆ ಮೆಷಿನ್ ಯಾರಪ್ಪ ಓಡಿಸ್ತಾರೆ?

ಸಾರ್ವಜನಿಕರ ಆಕ್ರೋಶ

"ಸಚಿವರ ಕ್ಷೇತ್ರದಲ್ಲೇ ಈ ಕಥೆ ಆದ್ರೆ, ಇನ್ನು ರಾಜ್ಯದ ಬೇರೆ ಆಸ್ಪತ್ರೆಗಳ ಕಥೆ ಏನಾಗಬೇಡ?" ಅಂತ ಜನ ಫುಲ್ ಗರಂ ಆಗಿದ್ದಾರೆ. ಸಚಿವರು ಈ ಹಿಂದೆಯೇ ಇಂತಹ ಸಮಸ್ಯೆ ಬರಬಹುದು ಅಂತ ಗೊತ್ತಿದ್ರೂ ಯಾಕೆ ಸುಮ್ಮನಿದ್ದಾರೆ ಅನ್ನೋದು ಸಾರ್ವಜನಿಕರ ಸಿಟ್ಟು.

ಜನಗಣತಿ ಇಂಪಾರ್ಟೆಂಟ್ ಇರಬಹುದು, ಆದ್ರೆ ಒಬ್ಬ ಮನುಷ್ಯನ ಜೀವಕ್ಕಿಂತ ಹೆಚ್ಚಲ್ಲ. ಆಸ್ಪತ್ರೆಯ ಕೆಲಸಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ಸಿಬ್ಬಂದಿಯನ್ನ ಬೇರೆ ಕೆಲಸಕ್ಕೆ ಹಾಕೋದು ಎಷ್ಟು ಸರಿ? ಸರ್ಕಾರ ಈ ಬಗ್ಗೆ ಬೇಗ ಗಮನಹರಿಸಿ ಬಡ ರೋಗಿಗಳಿಗೆ ನ್ಯಾಯ ಒದಗಿಸಬೇಕಿದೆ.