ಕರ್ನಾಟಕ ಇಂದು ಇಡೀ ದೇಶಕ್ಕೆ ಮಾದರಿಯಾಗಿ ನಿಂತಿರುವುದು ಸುಮ್ಮನೆಯಲ್ಲ. ದಶಕಗಳಿಂದ ನಾವು ಶಿಕ್ಷಣ ಮತ್ತು ಜನರ ಕೌಶಲ್ಯದ ಮೇಲೆ ಮಾಡಿರುವ ಹೂಡಿಕೆಯೇ ಇದಕ್ಕೆ ಕಾರಣ. ಈ ಸಮಾವೇಶದಲ್ಲಿ ಹಂಚಿಕೊಳ್ಳಲಾದ ಕೆಲವು ಕಿಕ್ಕೇರಿಸುವ ಅಂಕಿಅಂಶಗಳು ಇಲ್ಲಿವೆ:
ಜಿಎಸ್ಡಿಪಿ (GSDP) - ನಮ್ಮ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಬರೋಬ್ಬರಿ 30.7 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ! ಇದು ನಮ್ಮ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ.
ಜಾಗತಿಕ ತಾಣ - ಬೆಂಗಳೂರು ಎಂದರೆ ಬರಿ ಐಟಿ ಕಂಪನಿಗಳಷ್ಟೇ ಅಲ್ಲ, ಇಲ್ಲಿ ಸುಮಾರು 875 ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ತಲೆ ಎತ್ತಿವೆ. ಪ್ರಪಂಚದ ದೊಡ್ಡ ದೊಡ್ಡ ಕಂಪನಿಗಳ ಕೆಲಸಗಳು ಈಗ ನಮ್ಮೂರಲ್ಲೇ ನಡೆಯುತ್ತಿವೆ.
ಕಾಲೇಜುಗಳ ಹಬ್ - ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ನಮ್ಮಲ್ಲಿ 66 ಕಾಲೇಜುಗಳಿವೆ. ಉನ್ನತ ಶಿಕ್ಷಣ ನೀಡುವಲ್ಲಿ ಕರ್ನಾಟಕವೇ ದೇಶಕ್ಕೆ ದೊಡ್ಡಣ್ಣ!
ಡಿಗ್ರಿ ಜೊತೆ ಕೆಲಸವೂ ಫಿಕ್ಸ್: ಸರ್ಕಾರದ ಹೊಸ ಪ್ಲಾನ್
ಬರಿ ಡಿಗ್ರಿ ಸರ್ಟಿಫಿಕೇಟ್ ಹಿಡಿದು ಅಲೆದಾಡುವ ಕಾಲ ಈಗ ಮುಗಿದಿದೆ. ಪದವಿ ಜೊತೆಗೆ ಕೈಯಲ್ಲಿ ಕೆಲಸವೂ ಇರಬೇಕು ಅನ್ನೋದು ಸರ್ಕಾರದ ಲೆಕ್ಕಾಚಾರ. ಅದಕ್ಕಾಗಿ ನಾಲ್ಕು ಮುಖ್ಯ ಫಾರ್ಮುಲಾಗಳನ್ನು ಹಾಕಿಕೊಳ್ಳಲಾಗಿದೆ:
ಯುವನಿಧಿ - ಕೆಲಸ ಸಿಗುವವರೆಗೆ ಪದವೀಧರ ಯುವಕರಿಗೆ ಆರ್ಥಿಕ ಆಸರೆ ನೀಡಿ, ಅವರಲ್ಲಿ ಆತ್ಮವಿಶ್ವಾಸ ತುಂಬುವುದು.
ಟ್ರೆಂಡಿಂಗ್ ಕೌಶಲ್ಯ - ಕಂಪನಿಗಳಿಗೆ ಈಗ ಯಾವ ರೀತಿಯ ಕೆಲಸಗಾರರು ಬೇಕೋ, ಅದೇ ರೀತಿಯ ತರಬೇತಿಯನ್ನು ಕಾಲೇಜುಗಳಲ್ಲೇ ನೀಡುವುದು.
ಲಕ್ಷಾಂತರ ಉದ್ಯೋಗ - ಹೊಸ ಕೈಗಾರಿಕಾ ನೀತಿಯ ಮೂಲಕ ಸುಮಾರು 20 ಲಕ್ಷ ಕೆಲಸಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
ಇಂಟರ್ನ್ಶಿಪ್ - ಓದುತ್ತಿರುವಾಗಲೇ ಕಂಪನಿಗಳಲ್ಲಿ ಕೆಲಸ ಕಲಿತು ಅನುಭವ ಪಡೆಯಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುವುದು.
ಬರುತ್ತಿದೆ 'ಕೆವಿನ್ ಸಿಟಿ' (KWIN City) – ಭವಿಷ್ಯದ ಕನಸಿನ ನಗರ!
ಬೆಂಗಳೂರಿನ ಹತ್ತಿರವೇ ಸುಮಾರು 40,000 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರ ಈ 'ಕೆವಿನ್ ಸಿಟಿ'ಯನ್ನು ಕಟ್ಟುತ್ತಿದೆ. ಇದು ಬರಿ ಸಿಟಿಯಲ್ಲ, ಜ್ಞಾನ (Knowledge), ಆರೋಗ್ಯ (Wellness), ನಾವೀನ್ಯತೆ (Innovation) ಮತ್ತು ಅವಕಾಶಗಳ (Opportunity) ಸಮ್ಮಿಲನ. ಈ ಪ್ರಾಜೆಕ್ಟ್ ಮುಗಿದರೆ ಕರ್ನಾಟಕದ ಲಕ್ಷಾಂತರ ಯುವಕರಿಗೆ ಅವರ ಮನೆಯ ಪಕ್ಕದಲ್ಲೇ ಜಾಗತಿಕ ಮಟ್ಟದ ಉದ್ಯೋಗಗಳು ಸಿಗಲಿವೆ.
At the Campus to Career Summit organised by the Higher Education Department at The Lalit Ashok, Bengaluru, I highlighted Karnataka’s commitment to building future-ready universities and colleges that connect education with employment.
— Siddaramaiah (@siddaramaiah) May 15, 2026
Karnataka’s growth story is built on decades… pic.twitter.com/hMMIgWShDH
ಯಶಸ್ಸಿನ ಸೀಕ್ರೆಟ್ ಏನು?
ವಿಶ್ವವಿದ್ಯಾಲಯಗಳು, ಕಂಪನಿಗಳು ಮತ್ತು ಸರ್ಕಾರ – ಈ ಮೂರೂ ಕೈಜೋಡಿಸಿದರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಬಂಗಾರವಾಗಲು ಸಾಧ್ಯ. ಪದವಿ ಮುಗಿಸಿ ಕಾಲೇಜಿನಿಂದ ಹೊರಬರುವ ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿ "ನನ್ನ ಬಳಿ ಸ್ಕಿಲ್ ಇದೆ, ನನಗೆ ಕೆಲಸ ಸಿಕ್ಕೇ ಸಿಗುತ್ತೆ" ಎಂಬ ಭರವಸೆಯೊಂದಿಗೆ ಬರಬೇಕು ಅನ್ನೋದೇ 'ಕ್ಯಾಂಪಸ್ ಟು ಕೆರಿಯರ್' ಕಾರ್ಯಕ್ರಮದ ಅಸಲಿ ಉದ್ದೇಶ.